Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಡೀ ಜಗತ್ತಿನ ಮುಂದೆ ಖಷ್ಬೂ ಅದೇನು ಹೇಳ್ಬಿಡ್ತಾರೋ!
ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂಬ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ನಟಿ ಖುಷ್ಬೂ, ವಿಶ್ವಸಂಸ್ಥೆಯ ಕರೆಯ ಮೇರೆಗೆ ವಿಶ್ವಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 2013 ರಲ್ಲಿ ಕೀನ್ಯಾದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಮಾತನಾಡುವಂತೆ ನಟಿ ಖುಷ್ಬೂಗೆ ವಿಶ್ವಸಂಸ್ಥೆ ಕರೆನೀಡಿದೆ. ಇದು ಖುಷ್ಬೂಗೆ ಸಖತ್ ಖುಷಿ ನೀಡಿದೆ.
ಕಾರಣ, ಇಂಥದೊಂದು ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಿರುವ ತಮಿಳಿನ ಪ್ರಪ್ರಥಮ ನಟಿ ಖುಷ್ಬೂ. ಸಂತೋಷವಾಗದಿರುತ್ತದೆಯೇ? ಆದರೆ ಖುಷ್ಬೂ ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವ ಜಾಯಮಾನದವರು. ಅಲ್ಲಿ ಇದ್ದದ್ದನ್ನು ಇದ್ದಂತೆ ಹೇಳಿ ಮತ್ತೆ ವಿವಾದವನ್ನು ಮೈಮೇಲೆ ಎಳೆದುಕೊಳ್ಳದಿದ್ದರೆ ಸಾಕು ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರಂತೆ.
ಈ ಮೊದಲು 'ವಿವಾಹ ಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ' ಎಂಬ ಅವರ ಹೇಳಿಕೆಗೆ ಜನರ ತೀವ್ರ ವಿರೋಧ ಹಾಗೂ ಕೋರ್ಟ್, ಕಾನೂನು ಸಮರದಲ್ಲಿ ಸಿಕ್ಕಿ ಒದ್ದಾಡಿದ್ದರು ಖುಷ್ಬೂ. ಆದರೆ ಕೋರ್ಟ್ ನಲ್ಲಿ ಅವರೇ ವಿಜಯಶಾಲಿಯಾಗಿ ಅವರ ವಿರುದ್ಧ ಹೋಗಿದ್ದ ಜನರಿಗೆ ಮುಖ ಮಂಗಳಾರತಿ ಮಾಡಿಸಿದ್ದಾರೆ ಈಕೆ. ಇದೀಗ ವಿಶ್ವಸಂಸ್ಥೆ ಕರೆದಿದೆ, ಅಲ್ಲಿ ಅದೇನು ಹೇಳುತ್ತಾರೋ ಕಾದು ನೋಡೋಣ. (ಒನ್ ಇಂಡಿಯಾ ಕನ್ನಡ)