ಕೆಲವು ಬಾಲಿವುಡ್ ನಟರು ದಕ್ಷಿಣ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದರೆ, ಕೆಲವರು ಕೇವಲ ಒಂದೆರೆಡು ಚಿತ್ರಗಳಲ್ಲಿ ಗೌರವ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನ ಪ್ರಖ್ಯಾತ ನಟ ಪೃಥ್ವಿರಾಜ್ ಕಪೂರ್ ರವರು ಡಾ.ರಾಜಕುಮಾರ್ ಮೇಲಿನ ಪ್ರೀತಿಯಿಂದ 1971 ರಲ್ಲಿ ಸಾಕ್ಷಾತ್ಕಾರ ಚಿತ್ರದಲ್ಲಿ ನಟಿಸಿದರು. ನಂತರ ಅನಿಲ್ ಕಪೂರ್ ಕೂಡ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿದರು. ಕೆಲ ವರ್ಷಗಳ ಹಿಂದೆ ಅಮಿತಾಭ್ ಬಚ್ಚನ್ ಕೂಡ ನಾಗತಿಹಳ್ಳಿ ಚಂದ್ರಶೇಖರ್ ರವರ `ಅಮೃತಧಾರೆ' ಚಿತ್ರದಲ್ಲಿ ಗೌರವ ಪಾತ್ರದಲ್ಲಿ ನಟಿಸಿದರು. ಹೀಗೆ ಕನ್ನಡದಲ್ಲಿ ನಟಿಸಿದ ಪ್ರಸಿದ್ಧ ಬಾಲಿವುಡ್ ನಟರನ್ನು ಕೆಳಗೆ ನೀಡಲಾಗಿದೆ ನೋಡಿ...