Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮ 'ಉದಯ ಟಿವಿ'ಯಲ್ಲಿ ಎರಡು ಹೊಚ್ಚ ಹೊಸ ಧಾರಾವಾಹಿಗಳು!
ಪ್ರಸಿದ್ಧ ಮನರಂಜನಾ ವಾಹಿನಿ ಉದಯ ಟಿವಿಯಲ್ಲಿ ಇಂದಿನಿಂದ 'ಅರಮನೆ' ಹಾಗೂ 'ಸುಂದರಿ' ಎಂಬ ಎರಡು ಹೊಸ ಧಾರಾವಾಹಿಗಳು ಪ್ರಸಾರವಾಗಲಿದೆ.
ಅರಮನೆ : ಸಂಜಯ್ ಪ್ರಧಾನ್ ಅನ್ನೋ ಸಿನಿಮಾ ನಟನ ವೈಯಕ್ತಿಕ ಬದುಕಿನ ಅವಘಡವೊಂದು ಆತನನ್ನು ಒಂಟಿಯಾಗಿಸಿದೆ. ಒಂಟಿಯಾಗಿರೋ ಅಪ್ಪನಿಗೆ ಮದುವೆ ಮಾಡಿಸಲು ಮಗಳು ಹಿತಾ ಪ್ರಯತ್ನಿಸುತ್ತಿದ್ದಾಳೆ. ಇನ್ನೊಂದೆಡೆ ದೂರ ಊರೊಂದರಲ್ಲಿರುವ ಭರತನಾಟ್ಯ ಕಲಾವಿದೆ ಯಮುನಾ, ಗಂಡನಿಂದ ದೂರವಿದ್ದು ಬದುಕುತ್ತಿದ್ದಾಳೆ.
ಎಲ್ಲಿಯೋ ಬದುಕಿರಬಹುದಾದ ಅಪ್ಪನನ್ನು ಹುಡುಕಿ, ಅಮ್ಮನ ಬದುಕನ್ನು ಸರಿಮಾಡುತ್ತೇನೆಂದುಕೊಂಡು ಮಗಳು ಸ್ಮಿತಾ ಹೊರಟಿದ್ದಾಳೆ. ಈ ಎರಡು ಹುಡುಕಾಟಗಳ ನಡುವೆ ಕಥಾ ನಾಯಕ ಆರ್. ಜೆ. ಅವಿನಾಶ್ ನ ಪ್ರೀತಿಯ ಪಯಣ...ಈ 'ಅರಮನೆ'.
ಇಂದಿನಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ 'ಅರಮನೆ' ಧಾರಾವಾಹಿ ಪ್ರಸಾರವಾಗಲಿದೆ. ಜೈ ಜಗದೀಶ್, ಸುಧಾರಾಣಿ, ಯಮುನಾ ಶ್ರೀನಿಧಿ ಮುಂತಾದ ಖ್ಯಾತ ಕಲಾವಿದರು ತಾರಾಗಣದಲ್ಲಿದ್ದಾರೆ. ಜೊತೆಗೆ ಹೊಸ ಕಲಾವಿದರುಗಳಾದ ಅಪೂರ್ವ, ಶ್ರೇಯಾ ಅಂಚನ್ ಅಭಿನಯಿಸುತ್ತಿದ್ದಾರೆ. ಜಯಶ್ರಿ ರಾಜ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ಎಂ. ಎನ್. ಜಯಂತ್ ನಿರ್ದೇಶಿಸುತ್ತಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣವಿದೆ.
ಸುಂದರಿ : ಮನೆಯಿಂದ ಹೊರಗಿನ ಪ್ರಪಂಚದಲ್ಲಿ ಮಕ್ಕಳು ಹೇಗೆ ಕಳೆಯುತ್ತಾರೆ? ಅಲ್ಲಿ ಅವರ ಜೀವನ ಯಾವ ದಿಕ್ಕಿಗೆ ಹೊರಳುತ್ತದೆ ಎಂಬುದು ಈ ವಿಭಿನ್ನ ಕಥೆಯ ಹಂದರ. ಸುಂದರಿ, ನವೀನ್, ಜೀವನ್ ಕೇಂದ್ರ ಪಾತ್ರಗಳು. ಸುಂದರಿಯ ಸುಂದರ ಬದುಕಿನಲ್ಲಿ ಹುಡುಗಾಟಕ್ಕೆಂದು ಯಾರೋ ಆಡುವ ಸಣ್ಣ ಆಟ ಅವಳ ಬದುಕಿನ ದಾರಿಯನ್ನೇ ಬದಲಾಯಿಸಿ ಬಿಡುತ್ತದೆ. ಸಾಗರ ಪ್ರಾಂತ್ಯದ ಮಲೆನಾಡಿನ ಸುಂದರ ಹಿನ್ನೆಲೆಯಲ್ಲಿ ಈ ಸುಂದರ ಕಥಾನಕ ನಡೆಯಲಿದೆ.
ಇಂದಿನಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.00ಗಂಟೆಗೆ ಸುಂದರಿ ಪ್ರಸಾರವಾಗಲಿದೆ. ಮಂಜುನಾಥ್ ಹೆಗಡೆ, ವಿನಯಾಪ್ರಸಾದ್, ಸಿತಾರಾ ಮುಂತಾದವರು ತಾರಾಗಣದಲ್ಲಿದ್ದಾರೆ. ಸುಂದರೇಶ್ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರೆ, ರವಿಕಿಶೋರ್ ನಿರ್ದೇಶನದ ಜತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.