Just In
- 1 hr ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 2 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 2 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 5 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮನೆಯಲ್ಲಿ ನಟಿ ತೇಜಸ್ವಿನಿ ಮತ್ತೆ ಪ್ರತ್ಯಕ್ಷ.!

ತಂದೆಗೆ ಅನಾರೋಗ್ಯ ಉಂಟಾದ ಕಾರಣದಿಂದ 'ಬಿಗ್ ಬಾಸ್' ಆಟವನ್ನು ಅರ್ಧಕ್ಕೆ ಮೊಟಕುಗೊಳಿಸಿ ಹೊರನಡೆದಿದ್ದ ನಟಿ ತೇಜಸ್ವಿನಿ ಇದೀಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಮರಳಿದ್ದಾರೆ. 'ದೊಡ್ಮನೆ'ಯೊಳಗೆ ನಟಿ ತೇಜಸ್ವಿನಿ ಪ್ರತ್ಯಕ್ಷವಾಗಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ 'ಒಗ್ಗಟ್ಟಿನಲ್ಲಿ ಬಲವಿದೆ' ಲಕ್ಷುರಿ ಬಜೆಟ್ ಟಾಸ್ಕ್ ಮುಕ್ತಾಯಗೊಂಡ ಬಳಿಕ ನಟಿ ತೇಜಸ್ವಿನಿ 'ದೊಡ್ಮನೆ'ಯೊಳಗೆ ಆಗಮಿಸಿದರು. ತೇಜಸ್ವಿನಿ ವಾಪಸ್ ಆಗುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಯಲ್ಲಿ ಸಂತಸ ಮನೆ ಮಾಡಿತ್ತು. ಮುಂದೆ ಓದಿರಿ...

ತೇಜಸ್ವಿನಿ ತಂದೆ ಆರೋಗ್ಯ ಹೇಗಿದೆ.?
''ಅಪ್ಪ ಇನ್ನೂ ಹುಷಾರಾಗಿಲ್ಲ. ಎರಡು ಕಿಡ್ನಿಗೂ ಸೋಂಕು ತಗುಲಿದೆ. ಡೈಯಾಲಿಸಿಸ್ ನಡೆಯುತ್ತಿದೆ. ಹೃದಯ ಸಂಬಂಧಿ ಖಾಯಿಲೆ ಕೂಡ ಇದೆ. ಚಿಕಿತ್ಸೆ ನಡೆಯುತ್ತಿದೆ'' ಅಂತ ತೇಜಸ್ವಿನಿ ತಿಳಿಸಿದ್ದಾರೆ.
ದಿಢೀರ್ ಬೆಳವಣಿಗೆ: 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರಗೆ.?

ಅಪ್ಪ ಕಾರಣ
''ನನಗೆ ನನ್ನ ಅಪ್ಪನೇ ಶಕ್ತಿ. ನಾನು ಇಲ್ಲಿಂದ ಹೊರಗೆ ಹೋಗಲು ನನ್ನ ತಂದೆ ಕಾರಣ. ಪುನಃ ವಾಪಸ್ ಬರಲು ನನ್ನ ತಂದೆ ಕಾರಣ. ನೀನು ಒಳಗಡೆ ಇರಬೇಕು. ನನ್ನಿಂದ ನೀನು ಹೊರಗೆ ಬರಬಾರದು ಅಂತ ಹೇಳುತ್ತಿದ್ದರು'' ಎಂದರು ತೇಜಸ್ವಿನಿ
ಬಿಗ್ ಬಾಸ್' ಆಟವನ್ನ ಅರ್ಧಕ್ಕೆ ಮೊಟಕು ಗೊಳಿಸಿದ ತೇಜಸ್ವಿನಿ.!

ಮನಸೆಲ್ಲ ಇಲ್ಲೇ ಇತ್ತು
''ನನ್ನ ಮನಸೆಲ್ಲ ಇಲ್ಲೇ ಇತ್ತು. ಎಷ್ಟು ಖುಷಿ ಆಗುತ್ತಿದೆ ಎಲ್ಲರನ್ನ ನೋಡಿ ಅಂದ್ರೆ... ಥ್ಯಾಂಕ್ಯು 'ಬಿಗ್ ಬಾಸ್'. ನಾನು ಇವತ್ತು ಇಲ್ಲಿ ಇರಲು ನನ್ನ ತಂದೆಯೇ ಕಾರಣ. ನಾನು ಇವತ್ತಿಂದ ನನ್ನ ತಂದೆಗಾಗಿ ಆಡುತ್ತೇನೆ. ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಂಡಿದ್ದೆ'' - ತೇಜಸ್ವಿನಿ

ಕುಟುಂಬ ಬಯಸಿದ ಕಾರಣ...
ತೇಜಸ್ವಿನಿ ತಂದೆಗೆ ಕಿಡ್ನಿ ಫೇಲ್ಯೂರ್ ಆಗಿದ್ದು, ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಸಮಯದಲ್ಲಿ ತೇಜಸ್ವಿನಿ ಇರುವಿಕೆಯನ್ನ ಆಕೆಯ ಕುಟುಂಬ ಬಯಸಿದ ಕಾರಣ, 'ಬಿಗ್ ಬಾಸ್' ಮನೆಯಿಂದ ತೇಜಸ್ವಿನಿ ಹೊರ ನಡೆದರು. ಇದೀಗ ಎರಡೇ ದಿನದಲ್ಲಿ ತೇಜಸ್ವಿನಿ 'ದೊಡ್ಮನೆ'ಗೆ ವಾಪಸ್ ಆಗಿದ್ದಾರೆ.

ಆಟಕ್ಕೆ ಮರಳಿದ ತೇಜಸ್ವಿನಿ
''ನನಗೆ ಅಣ್ಣ, ತಮ್ಮ, ಅಕ್ಕ, ತಂಗಿ ಯಾರೂ ಇಲ್ಲ. ಇಲ್ಲಿ ಎಲ್ಲರ ಜೊತೆ ಚೆನ್ನಾಗಿದ್ದೆ. ನಿಜವಾಗಲೂ ಇಲ್ಲಿಗೆ ವಾಪಸ್ ಬರಬೇಕು ಅಂತ ನನಗೆ ಇಷ್ಟ ಇದೆ. 'ಬಿಗ್ ಬಾಸ್' ಮನಸ್ಸು ಮಾಡಿದರೆ ವಾಪಸ್ ಬರುತ್ತೇನೆ'' ಅಂತ ಹೇಳಿ ಹೋಗಿದ್ದ ತೇಜಸ್ವಿನಿ ಈಗ ಆಟಕ್ಕೆ ಮರಳಿದ್ದಾರೆ.

ಇಂದು ಔಟ್ ಆಗೋದು ಯಾರು.?
ಅಂದ್ಹಾಗೆ, ಈ ವಾರ ನಟಿ ತೇಜಸ್ವಿನಿ ಕೂಡ ನಾಮಿನೇಟ್ ಆಗಿದ್ದಾರೆ. ಇಂದು 'ಬಿಗ್ ಬಾಸ್' ಮನೆಯಿಂದ ಯಾರು ಹೊರ ಹೋಗುತ್ತಾರೋ, ಕಾದು ನೋಡಬೇಕು.