Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Seetharaama: 'ಸೀತಾ ರಾಮ' ಧಾರಾವಾಹಿ ಪ್ರಸಾರಕ್ಕೆ ಹೆಚ್ಚಿದ ಬೇಡಿಕೆ
ಹಲವು ವರ್ಷಗಳಿಂದ ಸನ್ನಿಧಿಯನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಬಯಸಿದ್ದ ಅಭಿಮಾನಿಗಳಿಗೆ ಈಗ ಖುಷಿ ತಂದಿದೆ. ನಟಿ ವೈಷ್ಣವಿ ಗೌಡ ಅವರು ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಸುಮಾರು ವರ್ಷಗಳ ಹಿಂದೆ ಮೂಡಿ ಬಂದಿದ್ದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸನ್ನಿಧಿ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದ ಮೂಲಕ ವೈಷ್ಣವಿ ಅವರನ್ನು ಸನ್ನಿಧಿ ಎಂದೇ ಗುರುತಿಸುತ್ತಿದ್ದರು.
Hitler Kalyana: ಏಜೆಗೆ ಪ್ರಪೋಸ್ ಮಾಡಲು ಲೀಲಾ ಪ್ಲಾನ್!
ವೈಷ್ಣವಿ ಗೌಡ 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿದ ಮೇಲೆ ಮತ್ತೆ ಯಾವ ಸೀರಿಯಲ್ನಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಬಿಗ್ ಬಾಸ್ ಸೀಸನ್ 8ರಲ್ಲಿ ವೈಷ್ಣವಿ ಗೌಡ ಅವರು ಭಾಗವಹಿಸಿದ್ದರು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಬಳಿಕ ವೈಷ್ಣವಿ ಅವರು ಧಾರಾವಾಹಿಯಲ್ಲಿ ನಟಿಸಲೇಬೇಕು ಎಂಬ ಕೂಗು ಜೋರಾಯಿತು. ಇದಾದ ಬಳಿಕ ವೈಷ್ಣವಿ ಅವರು 'ಬಹುಕೃತ ವೇಷಂ' ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದರು. ಇನ್ನು ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ, ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ರೀಲ್ಸ್ಗಳನ್ನು ಮಾಡುತ್ತಿರುತ್ತಾರೆ. ಭರತನಾಟ್ಯ, ಕಥಕ್ ಡ್ಯಾನ್ಸ್ ಅನ್ನು ಮಾಡುತ್ತಿರುತ್ತಾರೆ.
ಊಟದ ಕಡೆ ಹೆಚ್ಚು ಒಲವು
ಇದರೊಂದಿಗೆ ವೈಷ್ಣವಿ ಗೌಡ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ತಮ್ಮ ವಯಕ್ತಿಕ ವಿಚಾರಗಳನ್ನು ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ, ಶಾಪಿಂಗ್ ಮಾಡುತ್ತಿದ್ದರು, ಕೆಲ ಸೆಲಬ್ರಿಟಿಗಳ ಸಂದರ್ಶನ ಮಾಡಿದರು. ಇತ್ತೀಚೆಗೆ ಊಟದ ಕಡೆಗೆ ಹೆಚ್ಚು ಒಲವು ತೋರುತ್ತಿರುವ ವೈಷ್ಣವಿ ಅವರು, ಚಿಕನ್ ರೆಸಿಪಿ, ರಮ್ ಕೇಕ್ ಮಾಡುವುದು ಹೇಗೆ ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮೇಕಪ್ ಬಗ್ಗೆಯೂ ಸಾಕಷ್ಟು ಟಿಪ್ಸ್ಗಳನ್ನು ನೀಡಿದ್ದಾರೆ. ಇನ್ನು ಅವರ ಮದುವೆಯ ವಿಚಾರವಾಗಿಯೂ ಯೂಟ್ಯೂಬ್ನಲ್ಲಿ ಮಾತನಾಡಿದ್ದರು.
ರಿತೂ ಸಿಂಗ್ ಆಕ್ಟಿಂಗ್ ಸೂಪರ್
ಇದೀಗ ವೈಷ್ಣವಿ ಗೌಡ ಅವರು 'ಸೀತಾ ರಾಮ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ಈ ಧಾರಾವಾಹಿ ಮೂಡಿ ಬರಲಿದ್ದು, ಇದರಲ್ಲಿ 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ರಿತೂ ಸಿಂಗ್ ಕೂಡ ಅಭಿನಯಿಸಿದ್ದಾಳೆ. ರಿತೂ ಸಿಂಗ್ ಮೂಲತಃ ನೇಪಾಳಿಯವರಾಗಿದ್ದರು, ಇನ್ನೂ ತೊದಲು ನುಡಿಯುತ್ತಲೇ 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ ಫೇಮಸ್ ಆಗಿದ್ದರು. ವೈಷ್ಣವಿ ಗೌಡ ಜೋಡಿಯಾಗಿ ನಟ ಗಗನ್ ಚಿನ್ನಪ್ಪ ಅವರು ನಟಿಸುತ್ತಿದ್ದಾರೆ. ಇದು ಸೀತಾ ಹಾಗೂ ರಾಮನ ಪ್ರೇಮ ಕಥೆಯಾಗಿದ್ದು, ಇದಕ್ಕೆ ಸಿಹಿ ಪಾತ್ರದ ರಿತೂ ಸಿಂಗ್ ಸೇತುವೆಯಾಗಿದ್ದಾಳೆ. ಪ್ರೋಮೋ ನೋಡಿದವರೆಲ್ಲಾ ಧಾರಾವಾಹಿಯನ್ನು ನೋಡಲು ಕಾಯುತ್ತಿದ್ದು, ರಿತೂ ಆಕ್ಟಿಂಗ್ಗೆ ಫಿದಾ ಆಗಿದ್ದಾರೆ.
ಧಾರಾವಾಹಿಗೆ ಹೆಚ್ಚಿದ ಬೇಡಿಕೆ
ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೀತಾ ರಾಮ ಧಾರಾವಾಹಿ ಪ್ರೋಮೋ ಅಪ್ ಲೋಡ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳೆಲ್ಲಾ ಧಾರಾವಾಹಿಯನ್ನು ಬೇಗ ಪ್ರಸಾರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಸಾಕಷ್ಟು ಮಂದಿ ಇದನ್ನು ಪ್ರೈಮ್ ಟೈಂಗೆ ಹಾಕಿ ಎಂದು ಕೇಳುತ್ತಿದ್ದಾರೆ. ಅಲ್ಲದೇ, ವೈಷ್ಣವಿ ಅನ್ನು ಸೀತಾಳಾಗಿ ನೋಡಲು ಕಾತುರರಾಗಿದೆ. ನಮಗೆ ನೋಡಲು ಸಾಧ್ಯವಾಗದ ಸಮಯಕ್ಕೆ ಪ್ರಸಾರ ಮಾಡಬೇಡಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.