Don't Miss!
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಹಾದೇವ 'ವಿಷಕಂಠ'ನಾದ ರೋಚಕ ಕಥೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ.!
ಸತಿ-ಶಿವನ ಪ್ರೇಮಕಥೆಯಿಂದ ಪ್ರಾರಂಭವಾದ ಸ್ಟಾರ್ ಸುವರ್ಣ ವಾಹಿನಿಯ ಜನಪ್ರಿಯ 'ಹರ ಹರ ಮಹಾದೇವ' ಧಾರಾವಾಹಿಯಲ್ಲಿ ಸತಿ ಸ್ವಯಂವರ, ಸತಿ-ಮಹಾದೇವ ವಿವಾಹ, ಸತಿ ದಹನ, ವೀರಭದ್ರನ ಅವತಾರ, ದಕ್ಷನ ಸಂಹಾರ, ಪಾರ್ವತಿ-ಮಹಾದೇವ ಪ್ರೇಮ ಕಥೆ, ಶಿವ-ಪಾರ್ವತಿ ಕಲ್ಯಾಣ, ಕಾರ್ತಿಕೇಯನ ಜನ್ಮ, ತಾರಕಾಸುರನ ಸಂಹಾರ ವೃತ್ತಾಂತವನ್ನ ಇದುವರೆಗೂ ನೀವು ಕಣ್ತುಂಬಿಕೊಂಡಿದ್ದೀರಿ.
ಇದೀಗ ಸಮುದ್ರ ಮಂಥನದ ರೋಚಕ ಅಧ್ಯಾಯವನ್ನು ನೋಡುವ ಸಮಯ ಬಂದಿದೆ.
ಮಹಾಸಾಗರಕ್ಕೆ ಬೀಳುವ ಅಮೃತ ಕಲಶ
ಬಲಿ ಹಾಗೂ ಇಂದ್ರನ ನಡುವೆ ನಡೆದ ಹೊಡೆದಾಟದಲ್ಲಿ ಅಮೃತ ಕಲಶ ಮಹಾಸಾಗರಕ್ಕೆ ಬೀಳುತ್ತದೆ. ಅಮೃತವಿಲ್ಲದೇ ದೇವತೆಗಳೆಲ್ಲರೂ ನಿತ್ರಾಣರಾಗುತ್ತಾರೆ. ಎಲ್ಲರೂ ಮಹಾದೇವನ ಬಳಿ ಹೋದಾಗ, ಮಹಾದೇವ ಅಮೃತ ಮಂಥನವಾಗಬೇಕೆಂದೂ ಮತ್ತು ಅದನ್ನು ಸುರಾಸುರರು ಸೇರಿ ನಡೆಸಬೇಕೆಂದು ಹೇಳುತ್ತಾರೆ.[ರಕ್ತಬೀಜಾಸುರನ ಸಂಹಾರಕ್ಕೆ ಪಾರ್ವತಿಯ 'ಭದ್ರಕಾಳಿ' ಅವತಾರ]
ಸಮುದ್ರ ಮಂಥನ ಅಧ್ಯಾಯ
ಅದರಂತೆ ವಾಸುಕಿಯು ಹಗ್ಗವಾದರೆ, ಸುರಾಸುರರು ಎರಡು ಬದಿಯಿಂದ ಮಂಥನ ಶುರು ಮಾಡುತ್ತಾರೆ. [ಶಿವ-ಪಾರ್ವತಿ ಕಲ್ಯಾಣ: ಅದ್ಭುತ ದೃಶ್ಯಕಾವ್ಯ ನೋಡಲು ಮರೆಯದಿರಿ]
ವಿಷ ಉತ್ಪತ್ತಿ
ಸಮುದ್ರ ಮಂಥನದಲ್ಲಿ ಮೊದಲು ವಿಷ ಉತ್ಪತ್ತಿ ಆದಾಗ ಎಲ್ಲರೂ ಕಂಗಾಲಾಗುತ್ತಾರೆ. ನಂತರ ಲೋಕವನ್ನು ವಿಷದಿಂದ ರಕ್ಷಿಸಲು ಮಹಾದೇವ ವಿಷ ಸೇವಿಸುತ್ತಾನೆ.
'ವಿಷಕಂಠ'ನಾಗುವ ಮಹಾದೇವ
ಪತಿದೇವನ ದೇಹದಲ್ಲಿ ವಿಷ ಸೇರಬಾರದೆಂಬ ಕಾರಣಕ್ಕೆ ಪಾರ್ವತಿಯು ಮಹಾದೇವನ ಕುತ್ತಿಗೆಯನ್ನು ಬಿಗಿದು ಹಿಡಿಯುತ್ತಾಳೆ. ಹೀಗೆ ಸಮುದ್ರ ಮಂಥನದಿಂದ ಮಹಾದೇವನಿಗೆ ವಿಷಕಂಠ/ನೀಲಕಂಠ ಎಂಬ ಹೆಸರು ಬರುತ್ತದೆ.
ಪ್ರಸಾರ ಯಾವಾಗ?
ಮಹಾದೇವ ವಿಷಕಂಠನಾದ ರೋಮಾಂಚನಕಾರಿ ಸಮುದ್ರ ಮಂಥನದ ವಿಶೇಷ ಸಂಚಿಕೆಗಳು ಇದೇ 21-01-2017 ರಿಂದ ಪ್ರಾರಂಭವಾಗಿ ವಾರ ಪೂರ್ತಿ ಪ್ರಸಾರವಾಗುತ್ತದೆ. ಮಹಾದೇವನ ಈ ಮಹಾ ಮಹಿಮೆಯನ್ನು ವೀಕ್ಷಕರು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7.30ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕಣ್ತುಂಬಿಕೊಳ್ಳಬಹುದು.