Don't Miss!
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹರಹರ ಮಹಾದೇವ 'ಶಿವರಾತ್ರಿ' ವಿಶೇಷ: 'ಗಜಮುಖ'ನಾಗಿ ವಿನಾಯಕನ ಎಂಟ್ರಿ
ಗಣೇಶನ ಆಗಮನದಿಂದ ನಳನಳಿಸುತ್ತಿರುವ ಕೈಲಾಸದಲ್ಲಿ... ಆನಂದದಿಂದ ಮಹಾದೇವನ ಬರುವಿಕೆಗಾಗಿ ಕಾಯುತ್ತಿರುವ ಪಾರ್ವತಿಗೆ ಒಂದು ಘೋರ ಸಂಕಷ್ಟ ಎದುರಾಗುತ್ತದೆ.
ಮಹಾದೇವನ ಸ್ವಾಗತಕ್ಕೆ ಪಾರ್ವತಿ ಸಿದ್ಧತೆ ಆರಂಭಿಸಿ, ಅಭ್ಯಂಜನ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿ, ಕಾವಲಿಗೆ ಗಣೇಶನನ್ನು ನಿಲ್ಲಿಸಿರುತ್ತಾಳೆ. ಹಲವಾರು ದಿನಗಳ ನಂತರ ತನ್ನ ಮನದರಸಿಯನ್ನು ಕಾಣಲು ನೇರ ಸ್ನಾನಗೃಹಕ್ಕೆ ಬರುವ ಮಹಾದೇವನ ಪರಿಚಯವಿಲ್ಲದೆ ಗಣೇಶ ಮಹಾದೇವನನ್ನು ಒಳಹೋಗದಂತೆ ತಡೆಯುತ್ತಾನೆ.[ಮಹಾ ಶಿವರಾತ್ರಿ ಹಬ್ಬ, ಸ್ಟಾರ್ ಸುವರ್ಣ ವಾಹಿನಿ ಹಾಗೂ 'ಮಹಾಯಾಗ']
ಮಹಾದೇವ ಎಷ್ಟೇ ಹೇಳಿದರೂ, ಅವನನ್ನು ತಂದೆ ಎಂದು ಒಪ್ಪದ ಗಣೇಶ ಒಳಹೋಗದಂತೆ ನಿರ್ಬಂಧ ಹೇರುತ್ತಾನೆ. ಕೋಪಗೊಳ್ಳುವ ಮಹಾದೇವ ತನ್ನ ತ್ರಿಶೂಲದಿಂದ ಗಣೇಶನ ಕುತ್ತಿಗೆಯನ್ನು ತುಂಡರಿಸುತ್ತಾನೆ. ಇದರಿಂದ ಪಾರ್ವತಿ ಅತ್ಯಂತ ದುಃಖಿತಳಾಗುತ್ತಾಳೆ.
ಪಾರ್ವತಿ ಮನವೊಲಿಸಲು ಮಹಾದೇವ ಆನೆಯೊಂದರ ಮುಖವನ್ನು ವಿನಾಯಕನ ಕುತ್ತಿಗೆಗೆ ಜೋಡಿಸಿ ಗಣೇಶನನ್ನು ಗಜಮುಖನನ್ನಾಗಿ ಮಾಡುತ್ತಾನೆ.[ಫೆಬ್ರವರಿ 13 ರಿಂದ ಕರುನಾಡ ಮನೆ ಮನೆಯಲ್ಲೂ ಗಣೇಶೋತ್ಸವ.!]
ಈ ಸನ್ನಿವೇಶವನ್ನೊಳಗೊಂಡ ಸಂಚಿಕೆ ಫೆಬ್ರವರಿ 24 ರಂದು ಶುಕ್ರವಾರ 'ಮಹಾ ಶಿವರಾತ್ರಿ' ಪ್ರಯುಕ್ತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 7.30ರಿಂದ ಪ್ರಸಾರ ಆಗಲಿದೆ.