Don't Miss!
- Lifestyle ನಮ್ಮದೇ ಗ್ಯಾಲಕ್ಸಿಯಲ್ಲಿ ಬೃಹತ್ ಗಾತ್ರದ ಬ್ಲಾಕ್ ಹೋಲ್ ಪತ್ತೆ..! ಎಷ್ಟು ದೂರದಲ್ಲಿದೆ ಗೊತ್ತಾ?
- News Heavy Rain Alert: ಈ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್', ಒಂದು ವಾರದ ಕರ್ನಾಟಕ ಹವಾಮಾನ ವರದಿ
- Technology Vivo: ಭಾರತದಲ್ಲಿ ವಿವೋ T3x 5G ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನು?, ಬೆಲೆ ಎಷ್ಟು?
- Automobiles ಬಡವರು ಈ ಬೈಕನ್ನು ಸುಲಭವಾಗಿ ಖರೀದಿಸಬಹುದು: EMI, ಆನ್ ರೋಡ್ ಬೆಲೆ ಎಷ್ಟು? ಇಂದೇ ಮನೆಗೆ ತನ್ನಿ
- Finance 3ನೇ ಅತಿದೊಡ್ಡ ಆರ್ಥಿಕತೆಯಾದರೂ ಭಾರತ ಬಡ ದೇಶ: ಆರ್ಬಿಐ ಮಾಜಿ ಗವರ್ನರ್ ಡಿ ಸುಬ್ಬರಾವ್
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಮಲಿ' ಸೀರಿಯಲ್ ಕಿರಿಕ್: ನಿರ್ದೇಶಕರ ವಿರುದ್ಧ ದೂರು ನೀಡಿದ ನಿರ್ಮಾಪಕ.!
Recommended Video
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹೆಚ್ಚು ಟಿ.ಆರ್.ಪಿ ಹೊಂದಿರುವ ಧಾರಾವಾಹಿಗಳ ಪೈಕಿ 'ಕಮಲಿ' ಕೂಡ ಒಂದು.! ಹಳ್ಳಿ ಹುಡುಗಿ 'ಕಮಲಿ' ಸುತ್ತ ಸುತ್ತುವ ಈ ಸೀರಿಯಲ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
'ಕಮಲಿ' ಧಾರಾವಾಹಿಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದ ನಿರ್ಮಾಪಕ ರೋಹಿತ್.ಎಸ್ ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಮೊರೆ ಹೋಗಿದ್ದಾರೆ.
''ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್ ರಿಂದ ನನಗೆ ಮೋಸ ಆಗಿದೆ. ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಉಡಾಫೆ ಉತ್ತರ ಕೊಡುತ್ತಾರೆ'' ಎಂದು ಆರೋಪಿಸಿ ನಿರ್ಮಾಪಕ ರೋಹಿತ್.ಎಸ್ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗೆ ದೂರು ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ, ಓದಿರಿ...
'ಕಮಲಿ' ಧಾರಾವಾಹಿಗೆ ಬಂಡವಾಳ ಹಾಕಿದ್ದ ರೋಹಿತ್
28 ಮೇ 2018 ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾದ ಸೀರಿಯಲ್ 'ಕಮಲಿ'. ಈ ಧಾರಾವಾಹಿಯನ್ನು ರೋಹಿತ್.ಎಸ್ ನಿರ್ಮಾಣ ಮಾಡಿದ್ದಾರೆ. ಮೊದಮೊದಲು 'ಕಮಲಿ' ಸಂಚಿಕೆಗಳ ಟೈಟಲ್ ಕಾರ್ಡ್ ನಲ್ಲಿ 'ನಿರ್ಮಾಪಕ: ರೋಹಿತ್.ಎಸ್' ಎಂದೇ ತೋರಿಸಲಾಗಿದೆ. ಬಳಿಕ ರೋಹಿತ್ ಹೆಸರನ್ನ ತೆಗೆದು ಹಾಕಲಾಗಿದೆ.
73 ಲಕ್ಷ ರೂಪಾಯಿ ನೀಡಿರುವ ರೋಹಿತ್
'ಕಮಲಿ' ಧಾರಾವಾಹಿಗಾಗಿ ನಿರ್ದೇಶಕ ಅರವಿಂದ್ ಕೌಶಿಕ್ ರವರ ಸತ್ವ ಮೀಡಿಯಾಗೆ ರೋಹಿತ್ ಒಟ್ಟು 73 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಮನೆಯವರ ಒಡವೆಗಳನ್ನು ಅಡವಿಟ್ಟು, ಸಂಬಂಧಿಕರು ಮತ್ತು ಲೇವಾದೇವಿಯವರಿಂದ ಸಾಲ ಪಡೆದು 73 ಲಕ್ಷ ರೂಪಾಯಿಗಳನ್ನು ರೋಹಿತ್ ಹೊಂದಿಸಿದ್ದರು.
ಹೆಸರು ಇಲ್ಲ.! ಲಾಭ ಇಲ್ಲ.!
'ಕಮಲಿ' ಧಾರಾವಾಹಿಗಾಗಿ ಲಕ್ಷಾಂತರ ರೂಪಾಯಿ ನೀಡಿದ್ದರೂ, 287ನೇ ಸಂಚಿಕೆಯಿಂದ 'ಕಮಲಿ' ಧಾರಾವಾಹಿಯ ಟೈಟಲ್ ಕಾರ್ಡ್ ನಲ್ಲಿ ನಿರ್ಮಾಪಕ ರೋಹಿತ್ ಹೆಸರನ್ನು ಪ್ರಸ್ತಾಪಿಸಿಲ್ಲ. ಸಾಲದಕ್ಕೆ, ಧಾರಾವಾಹಿಯಿಂದ ಬಂದ ಲಾಭವನ್ನೂ ನೀಡಿಲ್ಲ ಎಂದು ಆರೋಪಿಸಿ ರೋಹಿತ್ ಇದೀಗ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನ್ಯಾಯ ದೊರಕಿಸಿ..
''ಕಮಲಿ' ಧಾರಾವಾಹಿಯನ್ನು ಬೇರೆ ನಿರ್ಮಾಪಕರಿಗೆ ವರ್ಗಾಯಿಸಲು ಒಳ ಸಂಚು ರೂಪಿಸಲಾಗಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಬಳಿ ಮಾತನಾಡಿದರೆ ಉಡಾಫೆ ಉತ್ತರ ಬರುತ್ತದೆ. ನನಗೆ ಸಾಲ ಕೊಟ್ಟಿರುವವರಿಂದ ಮಾನಸಿಕ ಕಿರುಕುಳ ಆಗುತ್ತಿದೆ. ನನಗೆ ಬರಬೇಕಾದ ಬಂಡವಾಳ, ಲಾಭಾಂಶವನ್ನು ಕೊಡಿಸಿ. ನ್ಯಾಯ ದೊರಕಿಸಿ'' ಎಂದು ಪೊಲೀಸ್ ಆಯುಕ್ತರಲ್ಲಿ ನಿರ್ಮಾಪಕ ರೋಹಿತ್ ಮನವಿ ಮಾಡಿದ್ದಾರೆ.
ಯಾರ್ಯಾರ ವಿರುದ್ಧ ದೂರು.?
73 ಲಕ್ಷ ಹೂಡಿಕೆ ಹಣ ಮತ್ತು ಲಾಭದ ವಿಚಾರವಾಗಿ 'ಕಮಲಿ' ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಮತ್ತು ಜೀ ಕನ್ನಡ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ವಿರುದ್ಧ ನಿರ್ಮಾಪಕ ರೋಹಿತ್ ಪೊಲೀಸ್ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.