ಅಭಿಮಾನಿಗಳಿಗೆ ಚಾಲೆಂಜ್ ನೀಡಿದ ಅನಿರುದ್ಧ್: ಸವಾಲ್ ಸ್ವೀಕರಿಸಲು ನೀವು ರೆಡಿನಾ?

Recommended Video

Anirudh Challenges Fans to Plant Trees | FILMIBEAT KANNADA

ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸದ್ಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿರುವ ಜೊತೆಜೊತೆಯಲಿ, ಕಡಿಮೆ ಅವಧಿಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದೆ.

ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಆರ್ಯವರ್ಧನ್ ಪಾತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸೀರಿಯಲ್ ಮೂಲಕ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿರುವ ಅನಿರುದ್ಧ್ ಈಗ ಅಭಿಮಾನಿಗಳಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಇತ್ತೀಚಿಗೆ ಫಿಟ್ ನೆಸ್ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೆ ಅನಿರುದ್ಧ್ ಕೂಡ ಒಂದು ಸವಾಲ್ ಎಸೆದಿದ್ದಾರೆ. ಅನಿರುದ್ಧ ನೀಡಿರುವ ಚಾಲೆಂಜ್ ಪರಿಸರ ಕಾಳಜಿ ಬಗ್ಗೆ.

ಗಿಡನೆಡುವಂತೆ ಚಾಲೆಂಜ್ ಹಾಕಿದ ಅನಿರುದ್ಧ್

ಗಿಡನೆಡುವಂತೆ ಚಾಲೆಂಜ್ ಹಾಕಿದ ಅನಿರುದ್ಧ್

"ನಿಮ್ಮ ಕೈಲಾದಷ್ಟು ಗಿಡಗಳನ್ನು ನೆಡಬೇಕು. ಒಂದು ವೇಳೆ ಗಿಡ ನೆಡಲು ಸ್ಥಳಾವಕಾಶ ಇಲ್ಲ ಅಂದ್ರೆ ಮನೆಯ ಬಳಿಯೆ ಪಾಟ್ ನಲ್ಲಿಯೆ ಒಂದು ಗಿಡವನ್ನು ನೆಡಬಹುದು. ಗಿಡ ನೆಡುವ ಫೋಟೋವನ್ನು ಶೇರ್ ಮಾಡಿ" ಎಂದು ಹೇಳಿದ್ದಾರೆ ಅಲ್ಲದೆ ಗಿಡ ನೆಡುವ ಫೋಟೋವನ್ನು ಅನಿರುಧ್ಧ್ ಅವರಿಗೆ ಕಳುಹಿಸುವುದಲ್ಲಿದೆ 10 ಜನ ಸ್ನೇಹಿತರಿಗೆ ಟ್ಯಾಗ್ ಮಾಡಬೇಕು. ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅದೃಷ್ಟಶಾಲಿಗೆ ವಿಶೇಷ ಉಡುಗೊರೆ

ಅದೃಷ್ಟಶಾಲಿಗೆ ವಿಶೇಷ ಉಡುಗೊರೆ

ಅನಿರುದ್ಧ ಅವರಿಗೆ ಕಳುಹಿಸಿದ ಫೋಟೋವನ್ನು ಸಾಧ್ಯವಾದಷ್ಟು ಅವರ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡುತ್ತಾರಂತೆ. ಯಾರ ಪೋಸ್ಟ್ ಗೆ ಅತೀ ಹೆಚ್ಚು ಲೈಕ್ ಬರುತ್ತೋ ಅವರಿಗೆ ಅನಿರುದ್ಧ್ ಕಡೆಯಿಂದ ಬಹುಮಾನ ಕೂಡ ಸಿಗಲಿದೆ. ಆದ್ರೆ ಗಿಡಗಳನ್ನು ನೆಟ್ಟು ಸುಮ್ಮನಾಗುವುದಲ್ಲ. ಅದನ್ನು ಚೆನ್ನಾಗಿ ಪೋಷಿಸಬೇಕು. ಒಂದು ತಿಂಗಳ ನಂತರ ಒಬ್ಬ ಅದೃಷ್ಟಶಾಲಿಯ ಮನೆಗೆ ವಿಶೇಷ ಉಡುಗೊರೆ ತಲುಪಲಿದೆ.

ಚಾಲೆಂಜ್ ಸ್ವೀಕರಿಸಿದ ಅಭಿಮಾನಿಗಳು

ಚಾಲೆಂಜ್ ಸ್ವೀಕರಿಸಿದ ಅಭಿಮಾನಿಗಳು

ಸಾಕಷ್ಟು ಜನ ಅನಿರುದ್ಧ್ ಹಾಕಿದ ಚಾಲೆಂಜ್ ಅನ್ನು ಸ್ವೀಕರಿಸುತ್ತಿದ್ದಾರೆ. ಈಗಾಗಲೆ ಅಭಿಮಾನಿಗಳು ಗಿಡಿಗಳನ್ನು ನೆಟ್ಟು ಫೋಟೋವನ್ನು ಕ್ಲಿಕ್ಕಿಸಿಕೊಂಡು ಅನಿರುದ್ಧ್ ಅವರಿಗೆ ಶೇರ್ ಮಾಡುತ್ತಿದ್ದಾರೆ. ಆಯ್ದ ಕೆಲವು ಫೋಟೋಗಳನ್ನು ಅನಿರುದ್ಧ್ ತನ್ನ ಪೇಜ್ ನಲ್ಲಿ ಶೇರ್ ಮಾಡುತ್ತಿದ್ದಾರೆ.

ಮೂರು ವಾರಗಳನ್ನು ಪೂರೈಸಿದ ದಾರಾವಾಹಿ

ಮೂರು ವಾರಗಳನ್ನು ಪೂರೈಸಿದ ದಾರಾವಾಹಿ

"ಜೊತೆಜೊತೆಯಲಿ ಮೂರು ವಾರಗಳ ಪಯಣವನ್ನು ಯಶಸ್ವಿಗೊಳಿಸಿದ್ದು ನೀವುಗಳು. ನಿಮ್ಮಿಂದಲೇ ಈ ದಾಖಲೆಗಳು. ನಿಮ್ಮ ಅಭಿಮಾನದಿಂದಲೇ ಎಲ್ಲವೂ. ನಿಮ್ಮ ಪ್ರೀತಿಗೆ ನಾವು ಸದಾ ಚಿರಋಣಿ. ನಿಮ್ಮ ಪ್ರೀತಿ ಸದಾ ನಮ್ಮ ತಂಡದ ಮೇಲಿರಲಿ" ಎಂದು ಅನಿರುದ್ಧ ಹೇಳಿಕೊಂಡಿದ್ದಾರೆ. ಧಾರಾವಾಹಿ ಪ್ರಾರಂಭವಾದಾಗಿನಿಂದಲೂ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪ್ರೇಕ್ಷಕರು ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Kannada actor Anirudh has challenged his fans to plant trees. Fans are Accepted challeng and planting trees and send a picture to Aniruddh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X