ಉದಯ ಟಿವಿಯಲ್ಲಿ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ'
ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿ ಇರುವ ಉದಯ ಟಿವಿಯಲ್ಲಿ ಹೊಚ್ಚ ಹೊಸ ಸ್ವಮೇಕ್ ಧಾರಾವಾಹಿ 'ಮೀನಾಕ್ಷಿ ಮದುವೆ' ಆರಂಭವಾಗಿದೆ.
ಪ್ರೀತಮ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯಲ್ಲಿ ಅಪೂರ್ವ ಹಾಗೂ ಹರ್ಷ ಎಂಬ ಎರಡು ಹೊಸ ಮುಖಗಳನ್ನು ಪರಿಚಯ ಮಾಡಲಾಗಿದೆ. [ನಿಮ್ಮ 'ಉದಯ ಟಿವಿ'ಯಲ್ಲಿ ಎರಡು ಹೊಚ್ಚ ಹೊಸ ಧಾರಾವಾಹಿಗಳು!]

ಇನ್ನೂ ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ರಾಕ್ ಲೈನ್ ಸುಧಾಕರ್ ಈ ಧಾರಾವಾಹಿಯ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಅಡಿಯಿಟ್ಟಿದ್ದಾರೆ. ರೈಫಲ್ ರುದ್ರೇಗೌಡ ಆಗಿ ನಾಯಕಿಯ ತಂದೆ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.
ಸಂಗೀತ ಹಿನ್ನೆಲೆಯ ದಂಪತಿಗಳಾದ ಶಶಿಧರ ಕೋಟೆ ಹಾಗೂ ಸೀತಾ ಕೋಟೆ ದಂಪತಿಗಳು ನಾಯಕನ ತಂದೆ-ತಾಯಿಯಾಗಿ ಅಭಿನಯಿಸಿದ್ದಾರೆ.

ಅಂಜು ಹೆಗಡೆ ಕಥೆ-ಚಿತ್ರಕಥೆ ರಚಿಸಿದ್ರೆ, ಕಾರ್ತಿಕ್ ಸಂಭಾಷಣೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಹಿಮಾಲಯದ ತಪ್ಪಲಿನಲ್ಲಿ 'ಮೀನಾಕ್ಷಿ ಮದುವೆ' ಧಾರಾವಾಹಿಯ ಚಿತ್ರೀಕರಣ ನಡೆದಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ 'ಮೀನಾಕ್ಷಿ ಮದುವೆ' ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











