Just In
Don't Miss!
- News
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ 40 ಕೋಟಿ ರೂ: ಸದಾನಂದ ಗೌಡ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಪ್ಪು ತಿಳಿಬೇಡಿ...ಉಪೇಂದ್ರ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹಾಗಲ್ಲ..!
ಕನ್ನಡದ ಗಾಯಕ ರಾಜೇಶ್ ಅವರು ಸದ್ಯ ನಟ ಉಪೇಂದ್ರ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ಕಿರುತೆರೆಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮಕ್ಕೆ ಆಗಮಿಸಿದ ರಾಜೇಶ್ ಕೃಷ್ಣನ್ ಉಪೇಂದ್ರ ಬಗ್ಗೆ ಒಂದು ಕಾಮೆಂಟ್ ಮಾಡಿದ್ದರು.
ಕಾರ್ಯಕ್ರಮದಲ್ಲಿ ಅಕುಲ್ 'ಯಾವ ನಟ ಹಾಡುವುದನ್ನು ನಿಲ್ಲಿಸಬೇಕು ಇವತ್ತಿನಿಂದ....' ಅಂತ ಪ್ರಶ್ನೆ ಕೇಳಿದ್ದರು. ಆಗ ರಾಜೇಶ್ ಕೃಷ್ಣನ್ ಉಪೇಂದ್ರ ಅವರ ಹೆಸರು ತೆಗೆದುಕೊಂಡಿದ್ದರು. ರಾಜೇಶ್ ಕೃಷ್ಣ ಅವರ ಈ ಮಾತಿಗೆ ಉಪೇಂದ್ರ ಅಭಿಮಾನಿಗಳು ಕೋಪಗೊಂಡಿದ್ದರು. ಆ ಬಳಿಕ ಈಗ ರಾಜೇಶ್ ಕೃಷ್ಣನ್ ಈ ವಿವಾದದ ಬಗ್ಗೆ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ತಮಾಷೆ ಕಾರ್ಯಕ್ರಮ
''ಸೂಪರ್ ಟಾಕ್ ಟೈಂ' ಒಂದು ತಮಾಷೆಯ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ನಿರೂಪಕ ಅಕುಲ್ 'ಕನ್ನಡದ ಯಾವ ನಟರು ಹಾಡುವುದನ್ನು ನಿಲ್ಲಿಸಬೇಕು' ಅಂತ ಕೇಳಿದರು. ಆಗ ನಾನು ಉಪೇಂದ್ರ ಅಂತ ಹೇಳಿದ್ದೆ'' ಎಂದು ರಾಜೇಶ್ ಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ.

ಉಪೇಂದ್ರ ಬಗ್ಗೆ ಹಾಗೆ ಹೇಳಿಲ್ಲ
''ಅಕುಲ್ ಪ್ರಶ್ನೆಗೆ ನಾನು ಹೇಳಿದಾಗ ನಾನು ಉಪೇಂದ್ರ.. ಪುನೀತ್... ಈ ರೀತಿಯ ನಟರು ಅಷ್ಟೊಂದು ಚೆನ್ನಾಗಿ ಹಾಡಿದರೆ ನಮಗೆ ಕೆಲಸ ಇರುವುದಿಲ್ಲ. ಅದಕ್ಕೆ ಉಪೇಂದ್ರ ಅವರು ಹಾಡುವುದನ್ನು ನಿಲ್ಲಿಸಬೇಕು ಅಂತ ಹೇಳಿದ್ದೆ'' - ರಾಜೇಶ್ ಕೃಷ್ಣನ್, ಗಾಯಕ.

ಎಡಿಟ್ ಆಗಿದೆ
''ನನ್ನ ಮಾತನ್ನು ಪೂರ್ಣವಾಗಿ ಹಾಕಿದರೆ ಕಾರ್ಯಕ್ರಮದ ಸಮಯ ಜಾಸ್ತಿ ಆಗುತ್ತದೆ ಎಂದು ಅದನ್ನು ಎಟಿಟ್ ಮಾಡಲಾಗಿದೆ. ಆ ಕಾರಣದಿಂದ ಇದು ತಪ್ಪಾಗಿ ಬಿಂಬಿತವಾಗಿದೆ ಅಷ್ಟೆ'' - ರಾಜೇಶ್ ಕೃಷ್ಣನ್, ಗಾಯಕ.

ನಾನು ಅವರ ಅಭಿಮಾನಿ
''ನಾನು ಉಪೇಂದ್ರ ಅವರ ಮೊದಲ ಸಿನಿಮಾದಿಂದ ಹಾಡಿಕೊಂಡು ಬಂದಿದ್ದೇನೆ. ನಾನು ಕೂಡ ಅವರ ಹಾಡಿಗೆ ಅಭಿಮಾನಿ. ಉಪೇಂದ್ರ ಅವರು ನನಗೆ ನಟ ಆಗುವುದಕ್ಕಿಂತ ಮುಂಚೆಯಿಂದಲೂ ಪರಿಚಯ. ನನ್ನ ಆ ಮಾತನ್ನು ಯಾರು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ'' - ರಾಜೇಶ್ ಕೃಷ್ಣನ್, ಗಾಯಕ.

ಏನಿದು ವಿವಾದ..?
'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ 'ಯಾವ ನಟ ಹಾಡುವುದನ್ನು ನಿಲ್ಲಿಸಬೇಕು ಇವತ್ತಿನಿಂದ....' ಎಂದು ಗಾಯಕ ರಾಜೇಶ್ ಕೃಷ್ಣನ್ ಗೆ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಜೊತೆಗೆ ''ಪುನೀತ್, ಶರಣ್, ಸುದೀಪ್, ಉಪೇಂದ್ರ'' ಎಂಬ ನಾಲ್ಕು ಆಯ್ಕೆಗಳನ್ನು ಮುಂದಿಟ್ಟರು ನಾಲ್ಕು ಆಯ್ಕೆಗಳ ಪೈಕಿ 'ಉಪೇಂದ್ರ' ಹೆಸರನ್ನು ರಾಜೇಶ್ ಕೃಷ್ಣನ್ ಹೇಳಿದರು. 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ಸ್ಪರ್ಶ' ರೇಖಾ, 'ಗಾಳಿಪಟ' ಭಾವನ ಜೊತೆ ಗಾಯಕ ರಾಜೇಶ್ ಕೃಷ್ಣನ್ ಅತಿಥಿಯಾಗಿ ಭಾಗವಹಿಸಿದ್ದರು.