Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೀರಿಯಲ್ ಸಂತೆ'ಯಲ್ಲಿ ಲಕ್ಷ್ಮೀ ಬಾರಮ್ಮ
ಕಲರ್ಸ್ ಕನ್ನಡ ವಾಹಿನಿ ಸದಾ ವೀಕ್ಷಕರಿಗೆ ಹತ್ತಿರವಾಗುವ, ನೋಡುಗರ ಭಾವನೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿರುತ್ತದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ 'ಲಕ್ಷ್ಮೀ ಬಾರಮ್ಮ ಸೀರಿಯಲ್ ಸಂತೆ' ಆಯೋಜಿಸಲಾಗಿತ್ತು.
ಮೊನಚು ಮಾತು, ತಿಳಿಹಾಸ್ಯ, ಅಮೋಘ ನೃತ್ಯಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ತಂಡದ ಲಚ್ಚಿ, ಗೊಂಬೆ, ಚಂದನ್, ಕಲ್ಪನಾ ಮುಂತಾದ ಜನಪ್ರಿಯ ಪಾತ್ರಧಾರಿಗಳು ಇದರಲ್ಲಿ ಪಾಲ್ಗೊಂಡಿರುವುದು ವಿಶೇಷ.
ಗೊಂಬೆ-ಚಂದನ್ ಜೋಡಿಯ 'ಬೊಂಬೆ ಬೊಂಬೆ ಬೊಂಬೆ' ಹಾಡಿಗೆ ಮಾದಕ ಡ್ಯಾನ್ಸ್, 'ಸನ್ ಸನನನನರೆ' ಹಾಡಿಗೆ ಲಚ್ಚಿಯ ಮೋಹಕ ಹೆಜ್ಜೆಗಳು ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಇದಲ್ಲದೇ ಒಂದೇ ಹಾಡಿಗೆ ಲಚ್ಚಿ-ಚಂದನ್-ಗೊಂಬೆ ನರ್ತನ, ಕಲ್ಪನಾ-ಕೈಲಾಶ್ 'ಗಡಿಬಿಡಿ ಗಂಡ' ಡ್ಯಾನ್ಸ್, ಇಡೀ ಕುಟುಂಬಕ್ಕೆಂದು ವಿಶೇಷವಾಗಿ ಸಂಯೋಜಿಸಲಾಗಿದ್ದ ಸಮೂಹ ನೃತ್ಯ ಹೀಗೆ ಎಲ್ಲಾ ಕಲಾವಿದರ 12 ನೃತ್ಯಗಳು 'ಸೀರಿಯಲ್ ಸಂತೆ'ಗೆ ಹೊಸ ಕಳೆ ನೀಡಿವೆ.
ಚಂದನ್ ಪಾತ್ರಧಾರಿಗೆ ಲಚ್ಚಿ ಮತ್ತು ಗೊಂಬೆಯ ಬಗ್ಗೆ ಎಷ್ಟು ಅರಿವಿದೆ ಎಂಬ ಬಗ್ಗೆ ಚುಟುಕು ಪ್ರಶ್ನೋತ್ತರ, ಲಚ್ಚಿಗೆ ವೀಕ್ಷಕರಿಂದ ಗೊಂಬೆಗಳನ್ನು ಸಂಗ್ರಹಿಸಿ ಗೊಂಬೆಗೆ ತಂದುಕೊಡುವ ಟಾಸ್ಕ್, ಗೊಂಬೆಗೆ ಪುಟ್ಟ ಮಗುವಿನಿಂದ 'ಸಾಮಾನ್ಯ ಜ್ಞಾನ' ಪರೀಕ್ಷೆ ರಂಜಿಸಲಿದೆ. [ಹೊಸ ಬಣ್ಣಗಳೊಂದಿಗೆ 'ಕಲರ್ಸ್ ಕನ್ನಡ' ಟಿವಿ ಆರಂಭ]
ಸುಷ್ಮಾ ಅವರ ನವಿರು ನಿರೂಪಣೆ, ಖ್ಯಾತ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅವರ ಕಚಗುಳಿ ಇಡುವ ಮಾತು ನಗೆಗಡಲಲ್ಲಿ ತೇಲಿಸಲಿದೆ. 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಿರ್ಮಾಪಕ ಮಿಲನ ಪ್ರಕಾಶ್, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರರು, ತಂತ್ರಜ್ಞರು, ಕಲಾವಿದರು ಭಾಗವಹಿಸಿದ್ದಾರೆ.
ಮೈಸೂರು 'ಲಕ್ಷ್ಮೀ ಬಾರಮ್ಮ- ಸೀರಿಯಲ್ ಸಂತೆ' ಜೂನ್ 14, ಭಾನುವಾರ ಸಂಜೆ 5 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.