Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ಅವರ ಪ್ರಜಾಕೀಯಕ್ಕೆ ಜೈ ಎಂದ ಗೆಳೆಯ ಶಿವಣ್ಣ
ನಟ ಶಿವರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಬರುತ್ತಿರುವ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಬಂದಿದ್ದ ಉಪೇಂದ್ರ ಅನೇಕ ವಿಷಯಗಳನ್ನು ಮುಕ್ತವಾಗಿ ಮಾತನಾಡಿದರು. ಅದರಲ್ಲಿಯೂ ಶಿವಣ್ಣ ಉಪೇಂದ್ರ ಅವರ ಪ್ರಜಾಕೀಯ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು.
''ನೀವು ಸಿಎಂ ಆದರೆ ಮೊದಲು ಮಾಡುವ ಕೆಲಸ ಏನು?'' ಎಂದು ಶಿವಣ್ಣ ಕೇಳಿದರು. ಆಗ ಉಪೇಂದ್ರ ''ಮೊದಲು ನಾನು ವಿಧಾನಸೌಧಕ್ಕೆ ಬೀಗ ಹಾಕುತ್ತೇನೆ. ಯಾಕೆಂದರೆ, ಅಲ್ಲಿ ಎಲ್ಲರೂ ರಾಜರ ರೀತಿ ಅರಮನೆ ಕಟ್ಟಿಕೊಂಡಿದ್ದಾರೆ. ಆದರೆ ನಾನು ಹೇಳುತ್ತಿರುವ ಪ್ರಜಾಕೀಯದಲ್ಲಿ ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಜೆಗಳ ಜೊತೆಗೆ ಕೆಲಸ ಮಾಡಬೇಕಾಗುತ್ತದೆ.'' ಎಂದು ಉತ್ತರಿಸಿದರು.
ಉಪ್ಪಿ ಮಾತನ್ನು ಮುಂದುವರೆಸಿದ ಶಿವಣ್ಣ ''ನೀವು ವ್ಯವಸ್ಥೆ ಸರಿ ಮಾಡಲು ಸಿನಿಮಾದ ರೀತಿ ಯೋಚನೆ ಮಾಡಿದ್ದು ನನಗೆ ತುಂಬ ಇಷ್ಟ ಆಯ್ತು. ಬೇರೆ ಯಾರು ಯಾರೋ ರಾಜಕೀಯಕ್ಕೆ ಬಂದರು.'' ಎಂದು ಹಿಂದಿಯಲ್ಲಿ ''ಆಕೇ ಜೀವನ್ ಮೇ ಕುಚ್ ನಾಹಿ ಕಿಯಾ, ತೂ ಆಕೇ ಪ್ರಜಾಕೀಯ.'. ನೀವು ಜನರಿಗೆ ಏನನ್ನು ಹೇಳುತ್ತಿದ್ದೀರಾ ಅದನ್ನು ಜನ ಸರಿಯಾರಿ ಅರ್ಥ ಮಾಡಿಕೊಂಡರೆ ಇದು ನಿಜಕ್ಕೂ ಬೆಸ್ಟ್ ವಿಷಯ. ತುಂಬ ಸುಂದರ ಕಾನ್ಸೆಪ್ಟ್ ನೀವು ಮಾಡಿದ್ದೀರಾ. ನಿಮಗೆ ದೇವರು ಆಶೀರ್ವಾದ ಮಾಡುತ್ತಾನೆ.'' ಎಂದು ಉಪ್ಪಿಗೆ ಶುಭ ಕೋರಿದರು.
ಶಿವಣ್ಣ ಮಾತುಗಳನ್ನು ಕೇಳಿ ಉಪೇಂದ್ರ ಸಖತ್ ಖುಷಿ ಆದರು. ಉಪ್ಪಿ ಆನಂದ ಅವರ ಕಣ್ಣುಗಳಲ್ಲಿ ಕಾಣುತ್ತಿತ್ತು. ಅದರ ಜೊತೆಗೆ ಗುರುಕಿರಣ್ ಕೂಡ ಉಪ್ಪಿ ಗೆಲ್ಲುತ್ತಾರೆ ಎಂದು ಒಬ್ಬ ಗೆಳೆಯನಾಗಿ ವಿಶ್ ಮಾಡಿದರು.