Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೆರೆಯಮೇಲೆ ನಿತ್ಯಾನಂದ, ಜತೆಗೆ ರಂಜಿತಾ
ಮುಂಬೈನಲ್ಲಿ ಪಾಕಿ ಪಾತಕಿಗಳು ನಡೆಸಿದ ಹತ್ಯಾಕಾಂಡದ ರಕ್ತದ ಕಣಗಳನ್ನು ತಾಜ್ ಹೊಟೇಲಿನ ನೆಲಹಾಸಿನಿಂದ ಇನ್ನೂ ಒರೆಸಿರಲಿಲ್ಲ, ಆಗಲೇ ವರ್ಮಾ ಅಲ್ಲಿಗೆ ಅಂದಿನ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್ ಅವರ ಮಗನೊಂದಿಗೆ ಅಲ್ಲಿಗೆ ಹಾಜರಾಗಿ ವಿವಾದ ಸೃಷ್ಟಿಸಿದ್ದರು. ವಿವಾದಾತ್ಮಕ ವಿಷಯಗಳಿಗೆ ಮುಗಿಬೀಳುವುದರಲ್ಲಿ ವರ್ಮಾ ಯಾವತ್ತೂ ಮುಂದು.
ಈಗ, ಸ್ವಾಮಿ ನಿತ್ಯಾನಂದ ಮತ್ತು ನಟಿ ರಂಜಿತಾ ರೊಮ್ಯಾಂಟಿಕ್ ಕಥಾನಕವನ್ನು ತೆರೆಗೆ ತರಲು ರಾಮ್ ಸಿದ್ಧರಾಗಿದ್ದಾರೆ. ಚಿತ್ರಕ್ಕೆ ಹೆಸರೂ ಫಿಕ್ಸ್ ಆಗಿದೆ. ಗಾಡ್ ಅಂಡ್ ಸೆಕ್ಸ್ ಶೀರ್ಷಿಕೆಯ ಚಿತ್ರಕ್ಕೆ ಅವರೀಗಾಗಲೇ ಚಿತ್ರಕಥೆ ಬರೆಯುವುದಕ್ಕೂ ಶುರು ಹಚ್ಚಿಕೊಂಡಿದ್ದಾರಂತೆ.
ಆಶ್ರಮಗಳಲ್ಲಿ ಏನೇನು ನಡೆಯುತ್ತದೋ ಅವೆಲ್ಲವನ್ನೂ ತೆರೆದು ತೋರಿಸುವುದು ನನ್ನ ಹೊಸ ಚಿತ್ರದ ಉದ್ದೇಶ ಎಂದು ಸ್ಪಷ್ಟಪಡಿಸಿರುವ ರಾಮ್ ಗೋಪಾಲ್ ವರ್ಮಾ ಅವರ ನೂತನ ಚಿತ್ರಕ್ಕೆ ನಿತ್ಯಾನಂದ ಮತ್ತು ಅವನೊಂದಿಗೆ ಅನುರಕ್ತಳಾದ ಭಕ್ತೆ ರಂಜಿತಾಳೇ ಪ್ರೇರಣೆ. ಆಶ್ರಮದ ಹೆಸರಿನಲ್ಲಿ, ಸ್ವಾಮೀಜಿಯ ಸೋಗಿನಲ್ಲಿ ನಡೆಯುವ ಹಗರಣಗಳ ಬಗೆಗೆ ನನಗೆ ಸದಾ ಕುತೂಹಲವಿತ್ತು. ಇದೀಗ ಕರ್ಮಕಾಂಡವಾಗಿರುವ ನಿತ್ಯಾನಂದ ಲೈಂಗಿಕ ಹಗರಣ ಚಿತ್ರ ನಿರ್ಮಿಸಲು ಸ್ಫೂರ್ತಿ ನೀಡಿತು ಎಂದಿದ್ದಾರೆ ರಾಮ್.
ನಿತ್ಯಾನಂದನಾಗಿ...ರಂಜಿತಾಳಾಗಿ...! ಸದ್ಯದಲ್ಲೇ ನಟ ನಟಿಯರ ಹೆಸರುಗಳು ಹೊರಬೀಳಲಿವೆ. ಅಲ್ಲಿಯವರೆಗೆ ಆಶ್ರಮದೊಳಗೆ ಸ್ವಾಮಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ, ನಿಶ್ಯಬ್ಧ! ಅಂದಹಾಗೆ, ಸಾನಿಯಾ ಮತ್ತು ಮಲ್ಲಿಕ್ ಮದುವೆ ವಿವಾಹ ಹಗರಣ ಕೂಡ ಮಿತಿಮೀರುತ್ತಿದ್ದು ಒಂದಲ್ಲ ಒಂದು ದಿನ ರಾಮ್ ಈ ಕಥೆಯನ್ನೂ ಚಿತ್ರಕಹಾನಿ ಮಾಡಿದರೆ ಅಚ್ಚರಿಯಿಲ್ಲ.