ಆರ್ಥಿಕ ಬಿಕ್ಕಟ್ಟಿನಲ್ಲೂ ಬಾಲಿವುಡ್ ಜೂಜಾಟ

ಮುಂಬೈ ಭಯೋತ್ಪಾದನೆ ದಾಳಿಯ ನಂತರ ಮತ್ತೆ ಸಹಜ ಸ್ಥಿತಿಗೆ ಕನಸಿನ ನಗರಿ ಮುಂಬೈ ಮರಳುತ್ತಿರುವುದು ಸಿನಿಮಾ ಮಂದಿಗೆ ಆಶಾದಾಯಕವಾಗಿದೆ ತೋರಿದರು. ಥಿಯೇಟರ್ ನಲ್ಲಿ ಯಾವ ಸಿನಿಮಾ ಕೂಡ ವಾರದ ಮೇಲೆ ನಿಲ್ಲುತ್ತಿಲ್ಲವಂತೆ. ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿ ಪ್ರದರ್ಶನ ರದ್ದಾದ ಘಟನೆಗಳು ನಡೆದಿದೆ. ಇದೆಲ್ಲದರ ನಡುವೆ ಮುಂಬರುವ ವಾರದಲ್ಲಿ ಸುಮಾರು 225 ಕೋಟಿ ರು ನಷ್ಟು ಹಣ ಹೂಡಿಕೆಯಳ್ಳ ಚಿತ್ರಗಳ ಜೊತೆಗೆ ಜೂಜಾಟವಾಡುತ್ತಿದೆ ಮುಂಬೈ ಸಿನಿ ಪ್ರಪಂಚ.
ಕಳೆದ ನಾಲ್ಕೈದು ವಾರಗಳಲ್ಲಿ ತೆರೆಕಂಡ ಓಯೆ ಲಕ್ಕಿ ಲಕ್ಕಿ ಓಯೆ, ಸಾರಿ ಭಾಯ್, ಮಹಾರಥಿ, ದಿಲ್ ಕಬಡ್ಡಿ, ಮೀರಾ ಭಾಯ್ ನಾಟ್ ಔಟ್(ಅನಿಲ್ ಕುಂಬ್ಳೆ ನಟನೆಯ), ಓ ಮೈ ಗಾಡ್ ಚಿತ್ರಗಳು ಇನ್ನಿಲ್ಲದಂತೆ ನೆಲಕಚ್ಚಿವೆ. ಇರೋದರಲ್ಲಿ ದೋಸ್ತಾನಾ ಸ್ವಲ್ಪ ಗಳಿಕೆಯತ್ತ ಹೆಜ್ಜೆ ಹಾಕಿದೆ. ಯುವರಾಜ ಕೂಡ ಸಾಧಾರಣ ಗತಿಯಲ್ಲಿ ಸಾಗಿದೆ.

ಈ ಚಿತ್ರಗಳು ಅಕಸ್ಮಾತ್ ತೋಪೆದ್ದರೆ ನಿಜಕ್ಕೂ ಬಾಲಿವುಡ್ ಮಂದಿಗೆ ಭಾರಿ ಹೊಡೆತ ಗ್ಯಾರಂಟಿ. 225 ಕೋಟಿ ರು ಜತೆಗೆ ಶಾರುಖ್ , ಅಮೀರ್ ಗೆ ಪ್ರತಿಷ್ಠೆಗೆ ದಕ್ಕೆ ಉಂಟಾಗುವುದಂತೂ ಖಂಡಿತ. ಇನ್ನೊಂದು ವಿಷ್ಯ ರಬ್ ನೆ ಬನಾದಿ ಜೋಡಿಯ ಅನುಷ್ಕಾ, ಚಾಂದಿನಿ ಚೌಕ್ ನ ದೀಪಿಕಾ ಬೆಂಗಳೂರು ಮೂಲದವರು ಎಂಬುದು ಸಿನಿರಸಿಕರಿಗೆ ಗೊತ್ತೇ ಇದೆ. ಇವರಿಬ್ಬರ ವೃತ್ತಿ ಜೀವನಕ್ಕೆ ಈ ಚಿತ್ರಗಳು ಯಶಸ್ವಿಯಾಗುವುದು ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಸಿನಿ ಕಾರ್ಮಿಕರಿಗೆ ಮುಂಬೈ ಸಿನಿಲೋಕದಲ್ಲಿ ಜೀವನ ಚಕ್ರ ಸರಾಗವಾಗಿ ಸಾಗಿಸಬೇಕಾದರೆ ಚಿತ್ರಗಳು ಹಿಟ್ ಆಗಲೇ ಬೇಕು.


Click it and Unblock the Notifications











