Just In
Don't Miss!
- Lifestyle
ಮಂಗಳವಾರದ ರಾಶಿಫಲ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶುಭ ಶುಕ್ರವಾರ ವಿವೇಕ, ಪ್ರಿಯಾಂಕ ಶುಭವಿವಾಹ
ಮಂಗಳೂರಿನ 'ರೈ' ಸಿಗದಿದ್ದರೇನಂತೆ 'ಆಳ್ವಾ' ಸಿಕ್ಕಲಲ್ಲ ಎಂಬ ಖುಷಿ ಒಬೆರಾಯ್ ಮುಖದಲ್ಲಿ ಮನೆ ಮಾಡಿತ್ತು. 'ಕಡಲ ದಾಟಿ ಬಂದ ಕುದುರೆ ಏರಿಬಂದ. .. . ಚೆಲುವ ರಾಜಕುಮಾರ' ಎಂಬ ಹಾಡಿನ ನೈಜ ರೂಪ ಕಾಣಸಿಗುತ್ತಿತ್ತು. ಅ.30ರಂದು ಮದುವೆಯ 'ಬಾರಾತ್' ಗೂ ಮುನ್ನ ಮರ್ಸಿಡೆಸ್ ಬೆಂಜ್ ನಲ್ಲಿ ಪೋಷಕರೊಡನೆ ಸಂಜೆ 6 ಕ್ಕೆ ಹೋಟೆಲ್ ಛಾನ್ಸರಿಗೆ ಬಂದಿಳಿದ ವಿವೇಕ್ ಗೆ ಬಾಜಾ ಭಜಂತ್ರಿಗಳ ಭರ್ಜರಿ ಸ್ವಾಗತ ದೊರೆಯಿತು. ಪಂಜಾಬಿ ಶೇರ್ವಾನಿ ಧರಿಸಿದ್ದ 34 ವರ್ಷದ ವಿವೇಕ್ ಕುದುರೆ ಏರಿ ನಾಗಾವಾರದ ಲುಂಬಿನಿ ಗಾರ್ಡ್ ಬಳಿ ಇರುವ ಆಳ್ವಾಸ್ ಫಾರ್ಮ್ ಹೌಸ್ ನ ಮದುವೆ ಮಂಟಪದೆಡೆಗೆ ಸಾಗಿದರು.
ಜೆಡಿ(ಯು) ಮುಖಂಡ ದಿ.ಜೀವರಾಜ್ ಆಳ್ವ, ನಂದಿನಿ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ ಅವರನ್ನು ಸೋದರ ಆದಿತ್ಯ ಆಳ್ವಾ ಮಂಟಪಕ್ಕೆ ಕರೆತಂದರು. ವೇದ ಘೋಷಗಳು, ಉತ್ತರ, ದಕ್ಷಿಣ, ಪಂಜಾಬಿ, ಮಂಗಳೂರು ಎಲ್ಲಾ ಸಂಸ್ಕೃತಿ, ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ವಿವಾಹ ವಿಜೃಂಭಣೆಯಿಂದ ನಡೆಯಿತು.
ಕರ್ನಾಟಕದ ಅಳಿಯ: 'ನಾನು ಕರ್ನಾಟಕದ ಅಳಿಯಎಂದು ಖುಷಿಯಿಂದ ಹೇಳಿಕೊಂಡಿದ್ದ ವಿವೇಕ್, ಕರ್ನಾಟಕದ ಮುಖ್ಯಮಂತ್ರಿಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ರಾಜಕೀಯ ಮುಖಂಡರನ್ನು ವಿವಾಹಕ್ಕೆ ಆಹ್ವಾನಿಸಿದ್ದರು.
ಗಣ್ಯರಲ್ಲಿ ಮೊದಲಿಗೆ ಕಾಣಿಸಿಕೊಂಡಿದ್ದು ಖ್ಯಾತ ನಿರ್ದೇಶಕ ಮಣಿರತ್ನಂ, ನಂತರ ಬೆಡಗಿ ಸುಷ್ಮಿತಾ ಸೇನ್, ಕಿಚ್ಚ ಸುದೀಪ್, ಸಂಗೀತಾ ಬಿಜಲಾನಿ, ಅಂಬರೀಷ್, ಸುಮಲತಾ, ಎಸ್ ಎಂ ಕೃಷ್ಣ ದಂಪತಿಗಳು ಸೇರಿದಂತೆ ಹಲವಾರು ಗಣ್ಯರು ವಿವಾಹದಲ್ಲಿ ಪಾಲ್ಗೊಂಡು ನವವಧುವರರಿಗೆ ಶುಭ ಹಾರೈಸಿದರು. ಸ್ವರ ಮಾಂತ್ರಿಕ ಪ್ರವೀಣ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಎಲ್ಲರನ್ನು ಮೋಡಿ ಮಾಡಿತ್ತು.
ಮುಂಬೈನಲ್ಲಿ ರಿಷಪ್ಷನ್ :ಶನಿವಾರ ಮುಂಬೈನ ಐಟಿಸಿ ಮೈದಾನದಲ್ಲಿ ಭರ್ಜರಿ ಆರತಕ್ಷತೆ ಸಮಾರಂಭವನ್ನು ವಿವೇಕ್ ದಂಪರಿ ಆಯೋಜಿಸಿದ್ದಾರೆ. ಮದುವೆಗೆ ಬರಲಾಗದೇ ಮಿಸ್ ಆದ ಬಾಲಿವುಡ್ ಮಂದಿ, ಆರತಕ್ಷತೆಗೆ ಬರುವ ನಿರೀಕ್ಷೆಯಿದೆ. ಆದರೆ, ವಿವೇಕ್ ನ ಮಾಜಿ ಪ್ರೇಯಸಿ, ಮಂಗಳೂರಿನ ಸುಂದರಿ ಐಶ್ವರ್ಯಾ ರೈ ಬರುತ್ತಾರೆಯೇ ಎಂಬುದು ಇನ್ನೂ ಯಕ್ಷ ಪ್ರಶ್ನೆ. ವಿವೇಕ್ ಅಂತೂ ವಿರಸ ಮರೆತು, ಮದುವೆ ಆಮಂತ್ರನ ಪತ್ರಿಕೆಯನ್ನು ಖುದ್ದು ಅಭಿಷೇಕ್ ಕೈಗಿತ್ತು ಬಂದಿದ್ದರು.
ವಿವೇಕ್ ಗೆ ಬಾಳಸಂಗತಿ ಸಿಕ್ಕಾಯ್ತು. ಆದರೆ, ಮಧುಚಂದ್ರಕ್ಕೆ ಆತನ ಬಳಿ ಸಮಯವಿಲ್ಲ. ರಕ್ತಚರಿತ್ರ ಭಾಗ ಎರಡು ಬಿಡುಗಡೆ ನವೆಂಬರ್ ಎರಡನೇ ವಾರದಲ್ಲಿ ಆಗಲಿದ್ದು, ವರ್ಷಾಂತ್ಯದವರೆಗೆ ಮಧುಮಂದ್ರದ ಮಾತಾಡುವಂತಿಲ್ಲ ಎನ್ನುತ್ತಿದೆ ಆಪ್ತವಲಯ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS