ಸಂಗೀತಗಾರ ಆದೇಶ್ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್
ಬಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಕಮ್ ಗಾಯಕ ಆದೇಶ್ ಶ್ರೀವಾಸ್ತವ್ ಅವರು ಶುಕ್ರವಾರ ಮಧ್ಯರಾತ್ರಿ ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದ ಸುದ್ದಿ ಹಿಂದಿ ಚಿತ್ರರಂಗದ ತಾರೆಗಳನ್ನು ಮಂಕಾಗಿಸಿದೆ.
ಹಿಂದಿ ಚಿತ್ರರಂಗದ ತಾರೆಗಳಾದ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ರಿತೇಶ್ ದೇಶ್ ಮುಖ್, ಸುಷ್ಮಿತಾ ಸೇನ್, ಗಾಯಕ ಕೈಲಾಶ್ ಖೇರ್, ಅರ್ಜಿತ್ ಸಿಂಗ್ ಮುಂತಾದವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ತಮ್ಮ ದುಃಖ ತೋಡಿಕೊಂಡಿದ್ದಾರೆ.ಗಾಯಕ ಶಾನ್ ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.[ಆದೇಶ್ ಶ್ರೀವಾಸ್ತವ ನಿಧನಕ್ಕೆ ಮೊಸಳೆ ಕಣ್ಣೀರಿಡಬೇಡಿ! ಪ್ಲೀಸ್]
ಸಂಗೀತ ನಿರ್ದೇಶಕ ಆದೀಶ್ ಅವರು ಕಳೆದ 40 ದಿನಗಳಿಂದ ಕ್ಯಾನ್ಸರ್ ಗಾಗಿ ಚಿಕಿತ್ಸೆ ಪಡೆಯುತ್ತಿದ್ದರು. 'ಮಲ್ಟಿಪಲ್ ಮ್ಯೆಲೋಮ' ಎಂಬ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಂಧೇರಿಯ ಕೋಕಿಲಬೆನ್ ಧೀರುಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ನಿನ್ನೆ (ಸೆಪ್ಟೆಂಬರ್ 4) ರಾತ್ರಿ ಸುಮಾರು 12.30 ರ ಸಮಯದಲ್ಲಿ ಇಹಲೋಕ ತ್ಯಜಿಸಿದರು.

ಕ್ಯಾನ್ಸರ್ ರೋಗದ ವಿರುದ್ಧ ಆದೇಶ್ ಹೋರಾಟ
ಆದೇಶ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದು ಇದೇ ಮೊದಲು ಅಲ್ಲ, ಬದಲಾಗಿ 2010 ರಲ್ಲಿ ಇದೇ ರೋಗಕ್ಕೆ ತುತ್ತಾಗಿ ಗುಣಮುಖರಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಈ ರೋಗ ಇವರನ್ನು ಕಾಡಿತ್ತು. ಇತ್ತೀಚೆಗೆ ವೈದ್ಯರು ಕೀಮೋಥೆರಪಿ ಚಿಕಿತ್ಸೆಯನ್ನು ನಿಲ್ಲಿಸಿದ್ದರು ಎಂದು ಆದೀಶ್ ಅವರ ಪತ್ನಿ ವಿಜಯತ ಪಂಡಿತ್ ಸೆಪ್ಟೆಂಬರ್ 2 ರಂದು ಹೇಳಿದ್ದರು.
ಆದೇಶ್ ಸಾವಿಗೆ ಕಂಬನಿ ಮಿಡಿದ ಕೈಲಾಶ್
ಆದೇಶ್ ಸಾವಿಗೆ ಕಂಬನಿ ಮಿಡಿದ ಕೈಲಾಶ್ ಖೇರ್ ಅವರು ಗೆಳೆಯನನ್ನು ಸ್ಮರಿಸಿದ್ದು ಹೀಗೆ
ಆದೇಶ್ ನಗು ಹಾಗೂ ಅಪ್ಪುಗೆ ಮಿಸ್
ಆದೇಶ್ ನಗು ಹಾಗೂ ಅಪ್ಪುಗೆ ಮಿಸ್ ಮಾಡಿಕೊಳ್ಳುತ್ತೇನೆ ಎಂದ ನಟ ರಿತೇಶ್ ದೇಶ್ ಮುಖ್

ಮಾಧುರಿ ದೀಕ್ಷಿತ್ ಸಂದೇಶ
ಓರ್ವ ಪ್ರತಿಭಾವಂತ ಸಂಗೀತಗಾರರನ್ನು ಕಳೆದುಕೊಂಡಿದ್ದೇವೆ...
The world has lost a very talented musician and beautiful soul. Adesh Shrivastav RIP. Our condolences go out to his family. He will b missed.

ಕುನಾಲ್ ಕಪೂರ್
ಗೆಳೆಯ ನಿನ್ನ ಸಾವು ಆಘಾತ ತಂದಿದೆ, ನಿನ್ನ ಹಾಡುಗಳು ನಿನ್ನನ್ನು ಸದಾ ಜೀವಂತ ಇರಿಸುತ್ತವೆ. Feeling shocked and deeply saddened by the passing away of Aadesh. Your songs will keep you alive forever. R.I.P my friend.

ಬಿಗ್ ಬಿ ಅಮಿತಾಬ್ ಟ್ವೀಟ್
T 1984 - There are moments you know are going to happen .. yet you are never prepared when it happens .. when it does, you wish it did not !

ಅರ್ಜುನ್ ಕಪೂರ್ ಟ್ವೀಟ್
ಕ್ಯಾನ್ಸರ್ ಕಾಯಿಲೆಗೆ ಮತ್ತೊಂದು ಜೀವ ಬಲಿ, ದುಃಖದ ಸಂಗತಿ Another life lost to a disease that eats u from within...RIP Aadesh Shrivastava.

ಸುಷ್ಮಿತಾ ಸೇನ್ ಕಂಬನಿ
ಸುಷ್ಮಿತಾ ಸೇನ್ ಕಂಬನಿ ಮಿಡಿದು, ನಿಮ್ಮ ಸಂಗೀತ ನಮ್ಮ ಜೊತೆಗಿದೆ ಎಂದಿದ್ದಾರೆ.A warrior who always hit d right note!! Thank u 4 gracing our lives n filling it with warmth n amazing music!! God speed #AadeshShrivastava

ಲತಾ ಮಂಗೇಷ್ಕರ್ ಅವರ ಸಂದೇಶ
Sangeetkar Aadesh Shrivastava ji ke swargwas ki khabar sunke mujhe bahut dukh hua.Ishwar unki aatma ko shanti de.
More from Filmibeat
Was destined to my antim darshan...I can only picture Aadeshji Alive... More Alive than any of us.. He Lived every...
Posted by Shaan on 5 September 2015


Click it and Unblock the Notifications











