Don't Miss!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಹೀರಾತಿನಿಂದ ಹಿಂದೆ ಸರಿದು, ಹಣ ಮರಳಿಸಿದ ಅಮಿತಾಬ್ ಬಚ್ಚನ್: ಕಾರಣ?
ಸಿನಿಮಾಗಳಿಗಿಂತಲೂ ಜಾಹಿರಾತುಗಳಲ್ಲಿ ಅಭಿನಯಿಸುವುದು ಸುಲಭ ಮತ್ತು ಹೆಚ್ಚು ಹಣವೂ ದೊರೆಯುತ್ತದೆ, ಹಾಗಾಗಿ ಸಿನಿಮಾ ನಟರು ಜಾಹೀರಾತು ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಖ್ಯಾತ ನಟ ಅಮಿತಾಬ್ ಬಚ್ಚನ್ ತಾವು ಈಗಾಗಲೇ ನಟಿಸಿರುವ ಜಾಹೀರಾತಿನಿಂದ ಹಿಂದೆ ಸರಿದಿರುವುದಲ್ಲದೆ ಸಂಸ್ಥೆಗೆ ಹಣವನ್ನು ಮರಳಿಸಿದ್ದಾರೆ.
ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಹೆಸರಿನ ಪಾನ್ ಗುಟ್ಕಾದ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಅವರ ಜೊತೆಗೆ ರಣ್ವೀರ್ ಸಿಂಗ್ ಸಹ ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಇದರಿಂದಾಗಿ ಅಮಿತಾಬ್ ಬಚ್ಚನ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿತ್ತು. ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಪಾನ್ ಮಸಾಲಾವನ್ನು ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ. ರಣ್ವೀರ್ ಸಿಂಗ್ ಸಹ ಪಾನ್ ಮಸಾಲಾ ತಿನ್ನುತ್ತಿರುವಂತೆ ಚಿತ್ರಿಸಲಾಗಿದೆ.
ಇದೀಗ ಅಮಿತಾಬ್ ಬಚ್ಚನ್ 'ಕಮಲಾ ಪಸಂದ್' ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ ಆ ಜಾಹೀರಾತಿನಲ್ಲಿ ನಟಿಸಲು ತಾವು ಪಡೆದಿದ್ದ ಹಣವನ್ನು ಸಂಸ್ಥೆಗೆ ಮರಳಿಸಿದ್ದಾರೆ.
ಜಾಹೀರಾತಿನಿಂದ ಹಿಂದೆ ಸರಿಯುವಂತೆ ತಂಬಾಕು ವಿರೋಧಿ ಸಂಘ-ಸಂಸ್ಥೆಗಳು ಸಹ ಅಮಿತಾಬ್ ಬಚ್ಚನ್ಗೆ ಮನವಿ ಮಾಡಿದ್ದವು. ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದನ್ನು ಅಭಿಮಾನಿಗಳು ಸಹ ಟೀಕೆ ಮಾಡಿದ್ದರು. ಹೀಗಾಗಿ ಅಮಿತಾಬ್ ಬಚ್ಚನ್ ಈಗ ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ. ಆದರೆ ಅದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ರಣ್ವೀರ್ ಸಿಂಗ್ ಜಾಹೀರಾತಿನಿಂದ ಹಿಂದೆ ಸರಿದಿಲ್ಲ.
ಈ ಬಗ್ಗೆ ಅಮಿತಾಬ್ ಬಚ್ಚನ್ ಕಡೆಯಿಂದ ಅಧಿಕೃತ ಹೇಳಿಕೆ ಬಿಡುಗಡೆ ಆಗಿದ್ದು, ''ಜಾಹೀರಾತಿಗೆ ಸಹಿ ಮಾಡಿದಾಗ ಅದೊಂದು ಸರೋಗೇಟಿವ್ (ಅಸಲಿ ಉತ್ಪನ್ನಕ್ಕೆ ಪ್ರಚಾರ ನೀಡಲು ಪರ್ಯಾಯ ಉತ್ಪನ್ನದ ಜಾಹೀರಾತು ಪ್ರದರ್ಶಿಸುವುದು) ಜಾಹೀರಾತು ಎಂಬುದು ಗೊತ್ತಿರಲಿಲ್ಲ. ಕಳೆದ ವಾರವೇ ಜಾಹೀರಾತಿನಿಂದ ಅಮಿತಾಬ್ ಬಚ್ಚನ್ ಕಮಲಾ ಪಸಂದ್ ಜಾಹೀರಾತಿನಿಂದ ಹಿಂದೆ ಸರಿದಿದ್ದಾರೆ'' ಎಂದು ಹೇಳಲಾಗಿದೆ. ಜಾಹೀರಾತಿಗೆ ಬಚ್ಚನ್ ಪಡೆದಿದ್ದ ಹಣವನ್ನು ಮರಳಿಸಲಾಗಿದೆ.
ಅಮಿತಾಬ್ ಬಚ್ಚನ್ಗೆ ಪತ್ರ ಬರೆದಿದ್ದ ರಾಷ್ಟ್ರೀಯ ತಂಬಾಕು ನಿರ್ಮೂಲನೆ ಸಂಸ್ಥೆಯ ಅಧ್ಯಕ್ಷ ಶೇಖರ್ ಸಲ್ಕಾರ್, ''ಪಾನ್ ಮಸಾಲಾ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಮಿತಾಬ್ ಬಚ್ಚನ್ ಸರ್ಕಾರದ ಪರವಾಗಿ ಪೊಲಿಯೋ ಅಭಿಯಾನದ ರಾಯಭಾರಿ ಆಗಿದ್ದಾರೆ. ಹೀಗಿದ್ದಾಗ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜಾಹೀರಾತಿನಿಂದ ಅವರು ಹಿಂದೆ ಸರಿಯಬೇಕು. ಬಾಲಿವುಡ್ ನಟರು ಇಂಥಹಾ ಉತ್ಪನ್ನಗಳ ಪ್ರಚಾರ ಮಾಡುವುದರಿಂದ ಯುವಕರು ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ'' ಎಂದಿದ್ದರು.
ಹಲವು ಬಾಲಿವುಡ್ ಸ್ಟಾರ್ ನಟರು ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಾರೆ. ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ವಿಮಲ್ ಪಾನ್ ಮಸಾಲಾದ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ಸ್ಟಾರ್ ನಟ ಹೃತಿಕ್ ರೋಷನ್ ಸಿಗ್ನೇಚರ್ ಹೆಸರಿನ ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕೆಲವು ನಟರು ಗುಟ್ಕಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಅಮಿತಾಬ್ ಬಚ್ಚನ್ ಗುಟ್ಕಾ ಜಾಹೀರಾತಿನಿಂದ ಹಿಂದೆ ಸರಿದಿದ್ದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.