Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾದಕ ಸೇವನೆ ಮಾಡುವವರಿಂದ ಬಾಲಿವುಡ್ ತುಂಬಿ ತುಳುಕಿಲ್ಲ- ಸುನೀಲ್ ಶೆಟ್ಟಿ!
ಬಾಲಿವುಡ್ನಲ್ಲಿ ಕಳೆದ ಕೆಲವು ದಿನಗಳಿಂದ ನಟ-ನಟಿಯರ ಮಾದಕ ಸೇವನೆ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ಇದೇ ಡ್ರಗ್ಸ್ ಕೇಸ್ ವಿಚಾರವಾಗಿ ಬಾಲಿವುಡ್ ಸೆಲೆಬ್ರೆಟಿಗಳ ವಿಚಾರಣೆ ನಡೆದಿತ್ತು. ಈ ವಿಚಾರವಾಗಿ ಸುನೀಲ್ ಶೆಟ್ಟಿ ಕಾರ್ಯಕ್ರಮವೊಂದರಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ಮಾದಕ ವ್ಯಸನಿಗಳಿಂದ ಬಾಲಿವುಡ್ ತುಂಬಿ ತುಳುಕುತ್ತಿಲ್ಲ ಎಂದು ಸುನೀಲ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಸಿಬಿಐ ಆಯೋಜಿಸಿದ್ದ ಅಂತರಾಷ್ಟ್ರೀಯ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ದಿನದಂದು ಸುನೀಲ್ ಶೆಟ್ಟಿ ಈ ಹೇಳಿಕೆಯನ್ನು ನೀಡಿದ್ದಾರೆ.
ಸೆಲೆಬ್ರೆಟಿ ಮಕ್ಕಳನ್ನು ಡ್ರಗ್ ಅಡಿಕ್ಟ್ಸ್ ತರ ಯಾಕೆ ನೋಡ್ತೀರಾ?
ಈ ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಮಾತಾಡುತ್ತಾ, " ಬಾಲಿವುಡ್ ಸೆಲೆಬ್ರೆಟಿ ಮಕ್ಕಳನ್ನ ಯಾಕೆ ಡ್ರಗ್ ಅಡಿಕ್ಟ್ ಅಂತ ಟ್ರೀಟ್ ಮಾಡುತ್ತಿರಾ. ಒಂದು ತಪ್ಪು ಮಾಡಿದರೆ ಕಳ್ಳ, ಡಕಾಯಿತಿ ಎಂದು ಏಕೆ ಬಿಂಬಿಸುತ್ತೀರಿ. ಈ ಇಂಡಸ್ಟ್ರಿಗೆ ಬಂದು 30 ವರ್ಷ ಆಗಿದೆ. ನನಗೆ 300 ಮಂದಿ ಸ್ನೇಹಿತರಿದ್ದಾರೆ. ಅವರು ಜೀವನದಲ್ಲಿ ಏನನ್ನೂ ಮಾಡಿಲ್ಲ." ಎಂದು ಹೇಳಿದ್ದಾರೆ.
" ಬಾಲಿವುಡ್ನಲ್ಲಿ ಡ್ರಗ್ ಅಡಿಕ್ಟ್ ಆದವರು ತುಂಬಿಕೊಂಡಿಲ್ಲ. ತಪ್ಪ ಮಾಡಿದವರನ್ನು ಮಕ್ಕಳೆಂದು ತಿಳಿದುಕೊಂಡು ಕ್ಷಮಿಸಿಬಿಡಿ. ಪ್ರತಿ ಭಾರಿ ಡ್ರಗ್ಗೆ ಸಂಬಂಧಿಸಿದ ವಿಚಾರಕ್ಕೆ ಸೆಲೆಬ್ರೆಟಿಗಳನ್ನೇ ಮಕ್ಕಳನ್ನೇ ಯಾಕೆ ಪ್ರಶ್ನೆ ಮಾಡುತ್ತೀರಾ? ಅವರ ತಪ್ಪುಗಳನ್ನು ಕ್ಷಮಿಸಬೇಕು" ಎಂದು ಹೇಳಿದ್ದಾರೆ.
ಡ್ರಗ್ ಕೇಸ್ನಲ್ಲಿ ಬಾಲಿವುಡ್ ಮಂದಿ ಹೆಸರು
ಇತ್ತೀಚೆಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಅನ್ನು ವಶಕ್ಕೆ ಪಡೆಯಲಾಗಿತ್ತು. ಬೆಂಗಳೂರಿನ ಪಾರ್ಟಿಯೊಂದರಲ್ಲಿ ಡ್ರಗ್ ಸೇವನೆ ಮಾಡಿದ್ದ ವೇಳೆ ವಶಕ್ಕೆ ಪಡೆಯಲಾಗಿತ್ತು. ಬಳಿಕ ಸಿದ್ಧಾಂತ್ ಕಪೂರ್ಗೆ ಜಾಮೀನು ನೀಡಲಾಗಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ ಕೇಸ್ ಅಡಿಯಲ್ಲಿ ಎನ್ಸಿಬಿ ಬಂಧಿಸಿತ್ತು. ಒಂದು ತಿಂಗಳ ಕಾಲ ಆರ್ಯನ್ ಖಾನ್ ಅನ್ನು ಕಸ್ಟಡಿಯಲ್ಲಿ ಇಡಲಾಗಿತ್ತು. ಬಳಿಕ ಜಾಮೀನಿ ನೀಡಲಾಗಿತ್ತು. ಈಗ ಎನ್ಸಿಬಿ ಕ್ಲೀನ್ ಚಿಟ್ ನೀಡಲಾದೆ. ಇವರೊಂದಿಗೆ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಕೂಡ ಎನ್ಸಿಬಿ ವಿಚಾರಣೆ ಎದುರಿಸಿದ್ದಾರೆ.