Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಣ್-ಅರ್ಜುನ್ ಮತ್ತೆ ಒಂದಾಗಿ ಬರುವ ಕಾಲ ಬರುತ್ತಾ?
ಮುಂಬೈ, ಜ. 13: ಇಂದು ಶಾರುಖ್ ಮತ್ತು ಸಲ್ಮಾನ್ ಭೇಟಿಯಾದರೆ ಸುದ್ದಿಯಾಗುತ್ತದೆ. ಇಬ್ಬರ ಮಧ್ಯೆ ಅಷ್ಟು ಜಟಾಪಟಿ ನಡೆದಿದೆ. ಸನ್ಮಾನ್ ಖಾನ್ ಚಿತ್ರವೊಂದರಲ್ಲಿ ಅತಿಥಿ ನಟನಾಗಲು ಶಾರುಖ್ ನಿರಾಕರಿಸಿದಾಗ ಹುಟ್ಟಿಕೊಂಡ ದ್ವೇಷ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಬರುತ್ತಿದೆ. ಅಲ್ಲಲ್ಲಿ ಭೇಟಿಯಾಗುತ್ತಿದ್ದರೂ ಸ್ನೇಹಿತರಾಗುವ ಯಾವ ಲಕ್ಷಣವೂ ಇಲ್ಲ.
ಆದರೆ, 90ರ ದಶಕದಲ್ಲಿ ಹೀಗಿರಲಿಲ್ಲ. ಶಾರುಖ್ ಹಾಗೂ ಸಲ್ಮಾನ್ ಇಬ್ಬರೂ ಬಾಲಿವುಡ್ನಲ್ಲಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅದು. ಅವರು ನಟಿಸಿದ್ದ 'ಕರಣ್-ಅರ್ಜುನ್' ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಕರಣ್-ಅರ್ಜುನ್ ಪಾತ್ರದಲ್ಲಿ ನಟಿಸಿದ್ದ ಶಾರುಖ್-ಸಲ್ಮಾನ್ ಯುವಜನರ ಹೃದಯದಲ್ಲಿ ಸ್ಥಾನ ಪಡೆದುಬಿಟ್ಟಿದ್ದರು. [ಶಾರುಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ]
ಇದರಲ್ಲಿ ಮಮತಾ ಕುಲಕರ್ಣಿ ಸಲ್ಮಾನ್ ಜೊತೆ ಹಾಗೂ ಕಾಜೋಲ್ ತನ್ನ ಎವರ್ ಗ್ರೀನ್ ಜೋಡಿ ಶಾರುಖ್ ಜೊತೆ ನಟಿಸಿದ್ದರು. ರಾಕೇಶ್ ರೋಶನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಈ ಸಿನಿಮಾಕ್ಕೀಗ ಭರ್ತಿ 20 ವರ್ಷ ತುಂಬಿದೆ. [ಅಗ್ರಸ್ಥಾನದಿಂದ ಶಾರುಖ್ ಕೆಳತಳ್ಳಿದ ಸಲ್ಮಾನ್]
ರಾಖಿ ಅವರು ಬರೆದಿದ್ದ ಸಂಭಾಷಣೆ ಅಂದಿನ ಜನರ ಬಾಯಲ್ಲಿ ಕಂಠಪಾಠವಾಗಿತ್ತು. 'ಮೇರೆ ಕರಣ್ ಅರ್ಜುನ್ ಆಯೇಂಗೆ' ಮಾತು ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಈ ಚಿತ್ರದ ಹಾಡುಗಳನ್ನು ರಾಜೇಶ್ ರೋಶನ್ ಬರೆದಿದ್ದರು. ಪ್ರತಿ ಹಾಡು ಹೃದಯಸ್ಪರ್ಶಿಯಾಗಿತ್ತು. [ಸಹಸ್ರ ಸಂಭ್ರಮದಲ್ಲಿ ಡಿಡಿಎಲ್ ಜೆ]
ಸಿನಿಮಾಕ್ಕೆ 20 ವರ್ಷ ತುಂಬಿದ ಸಂಭ್ರಮದಲ್ಲಾದರೂ ಕರಣ್-ಅರ್ಜುನ್ ಮತ್ತೆ ಒಂದಾಗ್ತಾರಾ...? ಕಾಲವೇ ಹೇಳಬೇಕು.