Don't Miss!
- Sports
ಸಾಧು ಸಂತರಿಗೆ ಅನ್ನದಾನ ಮಾಡಿ ಆಶೀರ್ವಾದ ಪಡೆದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ
- News
Assembly Election 2023: ಎಎಪಿಯ ಯೋಜನೆಗಳನ್ನೇ ಬಿಜೆಪಿ, ಕಾಂಗ್ರೆಸ್ ಅನುಸರಿಸುತ್ತಿವೆ: ಶಾಸಕಿ ಆರೋಪ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕರಣ್-ಅರ್ಜುನ್ ಮತ್ತೆ ಒಂದಾಗಿ ಬರುವ ಕಾಲ ಬರುತ್ತಾ?
ಮುಂಬೈ, ಜ. 13: ಇಂದು ಶಾರುಖ್ ಮತ್ತು ಸಲ್ಮಾನ್ ಭೇಟಿಯಾದರೆ ಸುದ್ದಿಯಾಗುತ್ತದೆ. ಇಬ್ಬರ ಮಧ್ಯೆ ಅಷ್ಟು ಜಟಾಪಟಿ ನಡೆದಿದೆ. ಸನ್ಮಾನ್ ಖಾನ್ ಚಿತ್ರವೊಂದರಲ್ಲಿ ಅತಿಥಿ ನಟನಾಗಲು ಶಾರುಖ್ ನಿರಾಕರಿಸಿದಾಗ ಹುಟ್ಟಿಕೊಂಡ ದ್ವೇಷ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಬರುತ್ತಿದೆ. ಅಲ್ಲಲ್ಲಿ ಭೇಟಿಯಾಗುತ್ತಿದ್ದರೂ ಸ್ನೇಹಿತರಾಗುವ ಯಾವ ಲಕ್ಷಣವೂ ಇಲ್ಲ.
ಆದರೆ, 90ರ ದಶಕದಲ್ಲಿ ಹೀಗಿರಲಿಲ್ಲ. ಶಾರುಖ್ ಹಾಗೂ ಸಲ್ಮಾನ್ ಇಬ್ಬರೂ ಬಾಲಿವುಡ್ನಲ್ಲಿ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ ಅದು. ಅವರು ನಟಿಸಿದ್ದ 'ಕರಣ್-ಅರ್ಜುನ್' ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೆ ಹೊಡೆದಿತ್ತು. ಕರಣ್-ಅರ್ಜುನ್ ಪಾತ್ರದಲ್ಲಿ ನಟಿಸಿದ್ದ ಶಾರುಖ್-ಸಲ್ಮಾನ್ ಯುವಜನರ ಹೃದಯದಲ್ಲಿ ಸ್ಥಾನ ಪಡೆದುಬಿಟ್ಟಿದ್ದರು. [ಶಾರುಖ್ ಈ ಮಟ್ಟಕ್ಕೆ ಬೆಳೆಯೋಕೆ ಸಲ್ಮಾನ್ ಕಾರಣ]
ಇದರಲ್ಲಿ ಮಮತಾ ಕುಲಕರ್ಣಿ ಸಲ್ಮಾನ್ ಜೊತೆ ಹಾಗೂ ಕಾಜೋಲ್ ತನ್ನ ಎವರ್ ಗ್ರೀನ್ ಜೋಡಿ ಶಾರುಖ್ ಜೊತೆ ನಟಿಸಿದ್ದರು. ರಾಕೇಶ್ ರೋಶನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದ ಈ ಸಿನಿಮಾಕ್ಕೀಗ ಭರ್ತಿ 20 ವರ್ಷ ತುಂಬಿದೆ. [ಅಗ್ರಸ್ಥಾನದಿಂದ ಶಾರುಖ್ ಕೆಳತಳ್ಳಿದ ಸಲ್ಮಾನ್]
ರಾಖಿ ಅವರು ಬರೆದಿದ್ದ ಸಂಭಾಷಣೆ ಅಂದಿನ ಜನರ ಬಾಯಲ್ಲಿ ಕಂಠಪಾಠವಾಗಿತ್ತು. 'ಮೇರೆ ಕರಣ್ ಅರ್ಜುನ್ ಆಯೇಂಗೆ' ಮಾತು ಇಂದಿಗೂ ಜನಪ್ರಿಯತೆ ಕಳೆದುಕೊಂಡಿಲ್ಲ. ಈ ಚಿತ್ರದ ಹಾಡುಗಳನ್ನು ರಾಜೇಶ್ ರೋಶನ್ ಬರೆದಿದ್ದರು. ಪ್ರತಿ ಹಾಡು ಹೃದಯಸ್ಪರ್ಶಿಯಾಗಿತ್ತು. [ಸಹಸ್ರ ಸಂಭ್ರಮದಲ್ಲಿ ಡಿಡಿಎಲ್ ಜೆ]
ಸಿನಿಮಾಕ್ಕೆ 20 ವರ್ಷ ತುಂಬಿದ ಸಂಭ್ರಮದಲ್ಲಾದರೂ ಕರಣ್-ಅರ್ಜುನ್ ಮತ್ತೆ ಒಂದಾಗ್ತಾರಾ...? ಕಾಲವೇ ಹೇಳಬೇಕು.