Just In
Don't Miss!
- News
ಬೈಕ್ ಹತ್ತುವ ಮುನ್ನ ಈ ಭಯಾನಕ ಅಪಘಾತ ದೃಶ್ಯ ನೋಡಿ !
- Automobiles
ಅನಾವರಣವಾಯ್ತು 2021ರ ಕೆಟಿಎಂ 1290 ಸೂಪರ್ ಅಡ್ವೆಂಚರ್ ಎಸ್ ಬೈಕ್
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ಗೆ ಜೆಮ್ಷೆಡ್ಪುರ ಎಫ್ಸಿ ಸವಾಲು: Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 27ರ ಚಿನ್ನ, ಬೆಳ್ಳಿ ದರ
- Lifestyle
ಲಸಿಕೆ ಸಿಕ್ಕಿದರೂ 2021ರಲ್ಲಿ ಕೊರೊನಾವೈರಸ್ ಸಂಪೂರ್ಣ ನಾಶವಾಗಲ್ಲ:WHO ಎಚ್ಚರಿಕೆ
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಚ್ಚನ್ ಸೊಸೆ ಐಶ್ವರ್ಯಾ ರೈ ಕಾಲೆಳದ ರಾಣಿ ಮುಖರ್ಜಿ
ಬಾಲಿವುಡ್ ನಟಿ ರಾಣಿ ಮುಖರ್ಜಿಗೆ ಸುಮ್ಮನೆ ಇರಲು ಸಾಧ್ಯವಾಗದೇ ಏನೋ ಹೇಳಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ಟಿಟಿ ಶೋ ಒಂದರಲ್ಲಿ ಮಾತನಾಡುತ್ತಿದ್ದ ರಾಣಿ ಮುಖರ್ಜಿ, ಬಚ್ಚನ್ ಪರಿವಾರದ ಸೊಸೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ವಿರುದ್ಧ ಮಾತನಾಡಿ ತಮ್ಮ ಬಾಯಿಚಪಲ ತೀರಿಸಿಕೊಂಡಿದ್ದಾರೆ. ಹೀಗಂತ ಬಾಲಿವುಡ್ ಅಂಗಳ 'ಅಯ್ಯ' ಚಿತ್ರದ ನಾಯಕಿ ರಾಣಿ ಮುಖರ್ಜಿಗೆ 'ಅಯ್ಯೋ!' ಪಾಪ, ಸುಮ್ಮನಿರಲು ಏನು ಕೊಡಬೇಕು" ಎನ್ನುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.
ಟಿವಿ ಶೋ ಒಂದರಲ್ಲಿ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಾ ರಾಣಿ ಮುಖರ್ಜಿ "ನಾವು, ಭಾರತೀಯ ಹೆಂಗಸರು ನಮ್ಮ ಮಕ್ಕಳ ಬಗ್ಗೆ ಅನಾವಶ್ಯಕ ಕಾಳಜಿ ವಹಿಸುತ್ತೇವೆ. ನಮ್ಮ ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ತೋರಿಸಿ, ನಾವೊಬ್ಬರೇ ಈ ಗ್ರಹದಲ್ಲಿ (ಪ್ಲಾನೆಟ್) ಏಕೈಕ ತಾಯಿ ಎಂದುಕೊಳ್ಳುತ್ತೇವೆ" ಎಂದಿದ್ದಾರೆ. ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಸುತ್ತುಬಳಸಿ ಟೀಕಿಸಿದ್ದಾರೆ. ಅದು ಐಶ್ವರ್ಯಾ ಬಗ್ಗೆ ಹೇಳಿದ್ದು ಎಂಬುದೂ ಪಕ್ಕಾ ಎನ್ನಲಾಗಿದೆ.
ಮುಂದುವರಿದ ರಾಣಿ "ನಾವು, ಭಾರತದ ಹೆಂಗಸರು ನಮ್ಮ ಮಕ್ಕಳ ಬಗ್ಗೆ ಸರ್ವಸ್ವವನ್ನೂ ತ್ಯಾಗ ಮಾಡಿ ಬದಕಬೇಕೆಂದು ಬಯಸುತ್ತೇವೆ. ಆದರೆ ಅಷ್ಟೊಂದು ಕಾಳಜಿಯ ಅಗತ್ಯವಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿ ನಮ್ಮ ಕೆಲಸಕ್ಕೂ ಆದ್ಯತೆ ನೀಡಬೇಕು. ನಮ್ಮ ವಯಸ್ಸಿಗಿಂತ ಹೆಚ್ಚು ಹಿರಿಯರಂತೆ ಕಾಣದಿರಲು ಪ್ರಯತ್ನಿಸಬೇಕು" ಎಂದು ಐಶೂ ಕಾಲೆಳೆದಿದ್ದಾರೆ. ಈ ಬಗ್ಗೆ ಬಚ್ಚನ್ ಸೊಸೆ ಐಶ್ವರ್ಯಾ ರೈ ಪ್ರತಿಕ್ರಿಯೆ ಏನಿರಬಹುದು ಎಂಬುದು ಸದ್ಯಕ್ಕೆ ಬಾಲಿವುಡ್ ಕುತೂಹಲದಿಂದ ಕಾಯುತ್ತಿರುವ ಸಮಾಚಾರ.
ರಾಣಿ ಮುಖರ್ಜಿ ಹಾಗೂ ಅಭಿಷೇಕ್ ಬಚ್ಚನ್ ಸ್ನೇಹ ಹಾಗೂ ಬಚ್ಚನ್ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂದು ರಾಣಿ ಮನದಲ್ಲಿದ್ದ ಅಭಿಲಾಷೆ, ಎಲ್ಲಾ ಇತಿಹಾಸವನ್ನು ಬಲ್ಲ ಬಾಲಿವುಡ್, ರಾಣಿಯನ್ನು ನೋಡಿ ನಗುತ್ತಿದೆ. ಕಾರಣ, 'ಐಶೂ ಮಡಿಲಲ್ಲಿ ಆಡುತ್ತಿರುವ ಮುದ್ದಾದ ಮಗು ನೋಡಿ ಸಹಿಸಲಾಗದ ರಾಣಿ, ಈ ರೀತಿಯಲ್ಲಿ ಐಶ್ವರ್ಯಾ ರೈ ಕಾಲೆಳೆಯುತ್ತಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಂಡು ಕೆರಳಿ ಮಾತನಾಡುವ ಜಾಯಮಾನ ಐಶೂಗಿಲ್ಲ' ಎನ್ನಲಾಗುತ್ತಿದೆ. ಯಾವುದಕ್ಕೂ ಕಾಲ ಉತ್ತರಿಸಲಿದೆ ಬಿಡಿ! (ಏಜೆನ್ಸೀಸ್)