Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರೀ ಹೇಳಿದ್ದು ಸಲ್ಮಾನ್ ಖಾನ್ ಕೋಪಿಸಿಕೊಂಡಿದ್ದಾರೆ ಅಂತ.?!
ಕಳೆದ ಶುಕ್ರವಾರ ಒಂದು ಶಾಕಿಂಗ್ ಹಾಗೂ ಸರ್ ಪ್ರೈಸಿಂಗ್ ನ್ಯೂಸ್ ಹೊರಬಿತ್ತು. ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದಿದ್ದು ಶಾಕಿಂಗ್ ನ್ಯೂಸ್ ಆದರೆ, ಪ್ರಿಯಾಂಕಾ ಮದುವೆ ನಿಶ್ಚಯವಾಗಿರುವ ಕಾರಣಕ್ಕೆ 'ಭಾರತ್' ಚಿತ್ರಕ್ಕೆ ಅವರು ಗುಡ್ ಬೈ ಹೇಳಿದ್ದಾರೆ ಎಂಬ ಗಾಸಿಪ್ ಎಲ್ಲರಿಗೂ ಸರ್ ಪ್ರೈಸ್ ನೀಡಿದೆ.
ಈ ನಡುವೆ ಪ್ರಿಯಾಂಕಾ ಛೋಪ್ರಾ ಮೇಲೆ ಸಲ್ಮಾನ್ ಖಾನ್ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದ್ದವು.
''ಇನ್ನೇನು ಶೂಟಿಂಗ್ ಶುರು ಆಗಬೇಕು ಎನ್ನುವಷ್ಟರಲ್ಲಿ ಪ್ರಿಯಾಂಕಾ ಹೊರಬಂದರು. ಅದಕ್ಕೆ ನಿಜವಾದ ಕಾರಣ ಮದುವೆ ಅಲ್ಲ. ಬೇರೇನೋ ಇದೆ. 'ಭಾರತ್' ನಿರ್ದೇಶಕರು ಪ್ರಿಯಾಂಕಾ ಛೋಪ್ರಾಗೆ ಅತ್ಯಾಪ್ತರು. ಹೀಗಾಗಿ, ವಿವಾದವನ್ನ ಮೈಮೇಲೆ ಎಳೆದುಕೊಳ್ಳುವುದು ಬೇಡ ಅಂತ ಒಳ್ಳೆಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. 'ಭಾರತ್' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದ್ಮೇಲೆ ಮದುವೆಗೆ ಪ್ಲಾನ್ ಮಾಡಬಹುದಿತ್ತು.? ಆದ್ರೆ ಯಾಕೆ ಹಾಗೆ ಮಾಡಲಿಲ್ಲ.? ಇದು ಸಣ್ಣ ಸಿನಿಮಾ ಅಲ್ಲ. ಇದರಿಂದ ಅವರ ಬಾಲಿವುಡ್ ಕಮ್ ಬ್ಯಾಕ್ ಕನಸು ನುಚ್ಚುನೂರಾಗಬಹುದು. ಸಲ್ಮಾನ್ ನಿಜಕ್ಕೂ ಬೇಸರಗೊಂಡಿದ್ದಾರೆ'' ಎಂದು ಸಲ್ಮಾನ್ ಖಾನ್ ಕ್ಯಾಂಪಿನವರು ಬಿಟ್ಟುಕೊಟ್ಟ ಮಾಹಿತಿಯನ್ನ 'ಬಾಲಿವುಡ್ ಹಂಗಾಮ' ವರದಿ ಮಾಡಿತ್ತು.
ಹಾಗಾದ್ರೆ, ಸಲ್ಮಾನ್ ನಿಜಕ್ಕೂ ಬೇಸರಗೊಂಡಿದ್ದಾರಾ.? ಪ್ರಿಯಾಂಕಾ ಮೇಲೆ ಮುನಿಸಿಕೊಂಡಿದ್ದಾರಾ.? ಈ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...
ಇನ್ಮುಂದೆ ಯಾವತ್ತೂ ಪ್ರಿಯಾಂಕಾ ಜೊತೆಗೆ ಕೆಲಸ ಮಾಡಲ್ಲ.!
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದ್ಮೇಲೆ, ''ಇನ್ಮೇಲೆ ಯಾವತ್ತೂ ಪ್ರಿಯಾಂಕಾ ಛೋಪ್ರಾ ಜೊತೆಗೆ ಸ್ಕ್ರೀನ್ ಶೇರ್ ಮಾಡಲ್ಲ'' ಅಂತ ಸಲ್ಮಾನ್ ಖಾನ್ ಶಪಥ ಮಾಡಿದ್ದಾರೆ ಎಂಬ ಗುಲ್ಲು ಬಾಲಿವುಡ್ ತುಂಬಾ ಹಬ್ಬಿತ್ತು. ಇದೀಗ ಈ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರಿಯಾಂಕಾ-ನಿಕ್ ಜೊನಾಸ್ ನಿಶ್ಚಿತಾರ್ಥ: ಅಪ್ ಸೆಟ್ ಆದ್ರಾ ಕಂಗನಾ.?
ಸಲ್ಮಾನ್ ಅಪ್ ಸೆಟ್ ಆಗಿಲ್ಲ
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದಿದ್ದಕ್ಕೆ ಸಲ್ಮಾನ್ ಖಾನ್ ಖಂಡಿತ ಅಪ್ ಸೆಟ್ ಆಗಿಲ್ಲ. ಇವೆಲ್ಲ ಇಂಡಸ್ಟ್ರಿಯಲ್ಲಿ ಸರ್ವೇಸಾಮಾನ್ಯ'' ಎಂದು ಸಲೀಂ ಖಾನ್ ಪ್ರತಿಕ್ರಿಯೆ ನೀಡಿ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಬಿಟ್ಟ ಜಾಗವನ್ನ ತುಂಬುವವರು ಯಾರು.?
ಕಾರಣ ಗೊತ್ತಿಲ್ಲ
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಯಾಕೆ ಹೊರಬಂದರು ಅನ್ನೋದು ನನಗೆ ಗೊತ್ತಿಲ್ಲ. ಆದ್ರೀಗ ಅದೇ ಜಾಗಕ್ಕೆ ಬೇರೆ ನಟಿಯನ್ನು ಕರೆತರುವ ಕೆಲಸ ನಡೆಯುತ್ತಿದೆ'' ಎಂದಿದ್ದಾರೆ ಸಲೀಂ ಖಾನ್.
'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?
ಕತ್ರಿನಾ ಬರಬಹುದು
'ಭಾರತ್' ಚಿತ್ರದಲ್ಲಿ ಪ್ರಿಯಾಂಕಾ ಬಿಟ್ಟು ಹೋದ ಜಾಗಕ್ಕೆ ಕರೀನಾ ಕಪೂರ್ ಖಾನ್ ಅಥವಾ ಕತ್ರಿನಾ ಕೈಫ್ ರನ್ನ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸಲ್ಮಾನ್ ಖಾನ್ ಗೆ ಮಗದೊಂದು ಬಾರಿ ಕತ್ರಿನಾ ನಾಯಕಿ ಆಗುವ ಸಾಧ್ಯತೆ ಹೆಚ್ಚಿದೆ.