ಕುರಿ ಪ್ರತಾಪ್
ಕುರಿ ಪ್ರತಾಪ್ ಜೀವನಚರಿತ್ರೆ
ಕುರಿ ಪ್ರತಾಪ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಹಾಸ್ಯ ನಟ ಮತ್ತು ಕಿರುತೆರೆ ನಿರೂಪಕ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಕುರಿಗಳು ಸಾರ್ ಕುರಿಗಳು' ಎಂಬ ರಿಯಾಲಿಟಿ ಶೋ ಮುಖಾಂತರ ಪ್ರಸಿದ್ಧಿ ಪಡೆದರು. ಜನಿಸಿದ್ದು ಮೈಸೂರಿನಲ್ಲಿ. ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು
ತಂದೆ ಮಗ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡರೆ ಪ್ರತಾಪ್ ರವರು ಪಿಯುಸಿಯನ್ನೇ ಐದು ವರ್ಷ ಕಲಿತರು. ಅಲ್ಲಿಗೆ ಓದಿಗೆ ಎಳ್ಳು ನೀರು ಬಿಟ್ಟು ಮೈಸೂರಿನಲ್ಲಿ ಕಾಮಿಡಿ ಡ್ರಾಮಾಗಳಿಗೆ ಪ್ರಸಿದ್ಧಿಯಾದ ದೃಶ್ಯ ಕಲಾವೇದಿಕೆ ಸೇರಿದರು. ಈ ವಿಷಯ ತಿಳಿದ ಇವರ ತಂದೆ ಇವರಿಗೆ ಸೌದೆಯಲ್ಲಿ ಹೊಡೆದಿದ್ದು ಉಂಟು.
ಕಲರ್ಸ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ಕಾರ್ಯಕ್ರಮದ ಭಾಗವಾಗಿರುವ ಇವರು ಪ್ರೇಕ್ಷಕರನ್ನು ತಮ್ಮ ವಿಶಿಷ್ಟ ಹಾಸ್ಯದ ಮೂಲಕ ನಗಿಸುತ್ತಿದ್ದಾರೆ.
ನಟಿಸಿದ ಪ್ರಮುಖ ಚಿತ್ರಗಳು
ದಿ ವಿಲನ್
ಅಯೋಗ್ಯ
ತಾರಕ್
ಭರ್ಜರಿ
ವಜ್ರಕಾಯ
ಅಧ್ಯಕ್ಷ
ವಿಕ್ಟರಿ
ನವಗ್ರಹ
ಯುವರತ್ನ