Just In
- 30 min ago
ಇಬ್ಬರು ನಟರು ನಿರಾಕರಿಸಿದ್ದ ಸಿನಿಮಾದಲ್ಲಿ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ
- 32 min ago
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- 1 hr ago
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- 1 hr ago
ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿ ವಿಜಯ್ 'ಮಾಸ್ಟರ್'; ಬಿಡುಗಡೆ ದಿನಾಂಕ ಇಲ್ಲಿದೆ
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಹಲವು ಹೊಸ ಬದಲಾವಣೆಗಳೊಂದಿಗೆ ಜೀಪ್ ಕಂಪಾಸ್ ಫೇಸ್ಲಿಫ್ಟ್ ಬಿಡುಗಡೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುಟುಂಬದಿಂದ ವಿರೋಧ ಎದುರಿಸಿದ್ದ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಲವ್ ಸ್ಟೋರಿ
ನಟ ಅಲ್ಲು ಅರ್ಜುನ್ ಗೆ ಈಗ 37 ವರ್ಷ ವಯಸ್ಸು. 2001 ರಲ್ಲಿ ಬಿಡುಗಡೆ ಆದ 'ಡ್ಯಾಡಿ' ಸಿನಿಮಾದಲ್ಲಿ ಪಾತ್ರ ಮಾಡಿದ್ದ ಸಣ್ಣ ಹುಡುಗ ಅಲ್ಲು ಅರ್ಜುನ್ ನಂತರ ಏರಿದ ಎತ್ತರ ಸಾಮಾನ್ಯದ್ದಲ್ಲ.
ತೆಲುಗು ಸಿನಿಮಾಉದ್ಯಮದ ಪಕ್ಕಾ ಹಿಟ್ ನಟ ಎಂದೇ ಕರೆಸಿಕೊಳ್ಳುವ ಅಲ್ಲು ಅರ್ಜುನ್ ಸಿನಿಮಾ ಕುಟುಂಬದಿಂದ ಬಂದವರೇ ಆದರು, ಸಿನಿಮಾಕ್ಕಾಗಿ ಶ್ರಮ ಪಟ್ಟವರೇ. ವಿಶೇಷವಾಗಿ ಅಲ್ಲು ಅರ್ಜುನ್ ಆರಿಸಿಕೊಳ್ಳುವಷ್ಟು ಮುತುವರ್ಜಿಯಿಂದ ತೆಲುಗು ಸಿನಿಮಾಉದ್ಯಮದಲ್ಲಿ ಯಾರೂ ಕತೆ ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂಬ ಮಾತಿದೆ. ಈ ಕತೆ ಆಯ್ಕೆಯ ಹಿಂದೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅರದ್ದೂ ಬೆಂಬಲವಿದೆ.
ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಕ್ಷಮೆ ಕೇಳಿದ ಒಟಿಟಿ
ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ವಿವಾಹವಾಗಿ ಹತ್ತು ವರ್ಷವಾಗಿದೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಭಿನ್ನ ಜಾತಿಯ-ಭಿನ್ನ ಕುಟುಂಬದ ಇವರಿಬ್ಬರ ಪ್ರೇಮ ಕತೆ ಸರಳವಾಗಿಯೇನೂ ಇರಲಿಲ್ಲ. ಕೆಲವು ಅಡೆ-ತಡೆಗಳ ಬಳಿಕವೇ ಈ ಜೋಡಿ ಮದುವೆ ಆಗಿದ್ದು.
ಸುಂದರ ಉಡುಗೊರೆ ಕೊಟ್ಟ ಬ್ರಹ್ಮಾನಂದಂ: ಭಾವುಕರಾದ ಅಲ್ಲು ಅರ್ಜುನ್

ಮೊದಲ ನೋಟದಲ್ಲೇ ಪ್ರೀತಿಗೆ ಬಿದ್ದ ಅಲ್ಲು
ಅಲ್ಲು ಅರ್ಜುನ್ ಸಿನಿಮಾ ರಂಗದಲ್ಲಿ ಒಂದು ಸ್ಥಾಯಿಗೆ ಬಂದ ಬಳಿಕ ಮದುವೆಯೊಂದರ ಪಾರ್ಟಿಯಲ್ಲಿ ಸ್ನೇಹ ರೆಡ್ಡಿಯನ್ನು ಮೊದಲ ಬಾರಿಗೆ ನೊಡಿದರಂತೆ ಅಲ್ಲುಅರ್ಜುನ್. ಆಗಷ್ಟೆ ವಿದೇಶದಲ್ಲಿ ಓದು ಮುಗಿಸಿ ವಾಪಸ್ಸಾಗಿದ್ದ ಸ್ನೇಹ ರೆಡ್ಡಿಯನ್ನು ನೋಡಿದ ಕೂಡಲೇ ಪ್ರೇಮವಾಗಿ ಬನ್ನಿ ಗೆ.

ದೊಡ್ಡ ಉದ್ಯಮಿ ಕೆಪಿ ರೆಡ್ಡಿ ಮಗಳು ಸ್ನೇಹಾ ರೆಡ್ಡಿ
ಇಬ್ಬರಿಗೂ ಕಾಮನ್ ಗೆಳೆಯರೊಬ್ಬರಿಂದ ಪರಿಚಯವಾಗಿದೆ, ಪರಿಚಯ, ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇಬ್ಬರೂ ಪ್ರೀತಿಸುತ್ತಿರುವ ವಿಷಯ ಮೊದಲು ಅಲ್ಲು ಅರ್ಜುನ್ ಮನೆಯಲ್ಲಿ ಗೊತ್ತಾಯಿತಂತೆ. ನಂತರ ಸ್ನೇಹಾ ರೆಡ್ಡಿ ಮನೆಯಲ್ಲಿಯೂ ವಿಷಯ ಗೊತ್ತಾಗಿದೆ. ಭಾರಿ ದೊಡ್ಡ ಬ್ಯುಸಿನೆಸ್ ಮನ್ ಕೆಪಿ ರೆಡ್ಡಿ ಮಗಳು ಸ್ನೇಹ ರೆಡ್ಡಿ.

ಸ್ನೇಹ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ
ಅಲ್ಲು ಅರ್ಜುನ್ ಮನೆಯಲ್ಲಿ ಮದುವೆಗೆ ಒಪ್ಪಿಕೊಂಡರಾದರೂ, ಜಾತಿ ಕಾರಣ ಮುಂದಿಟ್ಟು ಸ್ನೇಹಾ ರೆಡ್ಡಿ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಂತೆ. ನಂತರ ಅಲ್ಲು ಅರ್ಜುನ್ ಅವರೇ ಸಾಕಷ್ಟು ಪ್ರಯತ್ನ ಪಟ್ಟು, ಹಲವು ಗಣ್ಯರಿಂದ ಸ್ನೇಹಾ ರೆಡ್ಡಿ ತಂದೆಯವರಿಗೆ ಹೇಳಿಸಿ ಕೊನೆಗೆ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡಿದರಂತೆ. ಸ್ನೇಹಾ ರೆಡ್ಡಿ ಸಹ ಅಲ್ಲು ಅರ್ಜುನ್ ಅನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಹಠ ಮಾಡಿದ್ದರಂತೆ.

6 ಮಾರ್ಚ್ , 2011 ರಂದು ಮದುವೆ
ಕೊನೆಗೆ ಮಾರ್ಚ್ 6, 2011 ರಲ್ಲಿ ಸ್ನೇಹ ರೆಡ್ಡಿ-ಅಲ್ಲು ಅರ್ಜುನ್ ಅವರುಗಳ ಮದುವೆ ಗುರು ಹಿರಿಯರ ನಿಶ್ಚಯದೊಂದಿಗೆ ಅದ್ಧೂರಿಯಾಗಿ ನೆರವೇರಿತು. ನಟ ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಅವರುಗಳು ಅಲ್ಲು ಅರ್ಜುನ್ ವಿವಾಹಕ್ಕೆ ಹಾಜರಾಗಿದ್ದರು.