Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ
ಕವಿತಾಲಯ ಬ್ಯಾನರ್ ನ ನಿರ್ಮಾಪಕಿ ಪುಷ್ಪಾ ಕಂದಸ್ವಾಮಿ ಅವರು ಮೇಘನಾ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಜೀವನ್ ನಾಯಕತ್ವದ 'ಕೃಷ್ಣ ಲೀಲೈ' ಚಿತ್ರದಲ್ಲಿ ನಾಯಕಿಯಾಗಿ ಮೇಘನಾ ಅಭಿನಯಿಸುತ್ತಿದ್ದು, ಈ ಬಗ್ಗೆ ಮಾಡಿಕೊಂಡಿರುವ ಕರಾರನ್ನು ಮುರಿದಿದ್ದಾರೆ. ಚಿತ್ರ ಪೂರ್ಣಗೊಳ್ಳುವ ಮೊದಲೇ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡಿನ ನಿರ್ಮಾಪಕ ಸಂಘಕ್ಕೆ ನೀಡಿರುವ ದೂರಿನಲ್ಲಿ ನಿರ್ಮಾಪಕಿ ಪುಷ್ಪಾ ಹೇಳಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಘನಾ ಸುಂದರ್ ರಾಜ್ , ಇದೆಲ್ಲಾ ಸುಳ್ಳು, ನಾನು ಯಾವುದೇ ಒಪ್ಪಂದ ಮುರಿದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ ತಾವೂ ಕೂಡ ತಮಿಳು ನಟ/ನಟಿಯರ ಸಂಘಕ್ಕೆ ಪ್ರತಿದೂರನ್ನು ನೀಡಿದ್ದಾರೆ. ಸದ್ಯ ದೂರಿನ ಪರೀಶೀಲನೆ ನಡೆಯುತ್ತಿದೆ. ಮೇಘನಾ ಅವರು ಕೃಷ್ಣಲೀಲೈ ಚಿತ್ರದ ನಂತರ ಭರತ್ ನಾಯಕತ್ವದ 'ಎಂಗ ವೀಟು ಪಿಳ್ಳೈ(ಎಂಜಿಆರ್ ಅವರ ಯಶಸ್ವಿ ಚಿತ್ರದ ಹೆಸರು) ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ 'ಧನುಷ್ ' (ರಜಿನಿಕಾಂತ್ ಅಳಿಯ, ತಮಿಳು ನಟ)ಎಂದು ಖ್ಯಾತಿ ಗಳಿಸುತ್ತಿರುವ ನಮ್ಮ ಲೂಸ್ ಮಾದ ಯೋಗೀಶ್ ಅವರ ಮುಂದಿನ ಚಿತ್ರ 'ಪಡ್ಡೆ ಹುಡ್ಗ' ಕ್ಕೂ ಮೇಘನಾ ಆಯ್ಕೆಯಾಗಿದ್ದಾರೆ.
ಪೂರಕ ಓದಿಗೆ: ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ