ತಮಿಳಿಗೆ ಹೋದ ಕನ್ನಡ ಕುವರಿ ಆದ್ಳೇ ಕುರಿ

ಕವಿತಾಲಯ ಬ್ಯಾನರ್ ನ ನಿರ್ಮಾಪಕಿ ಪುಷ್ಪಾ ಕಂದಸ್ವಾಮಿ ಅವರು ಮೇಘನಾ ವಿರುದ್ಧ ದೂರು ದಾಖಲಿಸಿದ್ದಾರೆ. ತಮ್ಮ ಬ್ಯಾನರ್ ನಲ್ಲಿ ಜೀವನ್ ನಾಯಕತ್ವದ 'ಕೃಷ್ಣ ಲೀಲೈ' ಚಿತ್ರದಲ್ಲಿ ನಾಯಕಿಯಾಗಿ ಮೇಘನಾ ಅಭಿನಯಿಸುತ್ತಿದ್ದು, ಈ ಬಗ್ಗೆ ಮಾಡಿಕೊಂಡಿರುವ ಕರಾರನ್ನು ಮುರಿದಿದ್ದಾರೆ. ಚಿತ್ರ ಪೂರ್ಣಗೊಳ್ಳುವ ಮೊದಲೇ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡಿನ ನಿರ್ಮಾಪಕ ಸಂಘಕ್ಕೆ ನೀಡಿರುವ ದೂರಿನಲ್ಲಿ ನಿರ್ಮಾಪಕಿ ಪುಷ್ಪಾ ಹೇಳಿದ್ದಾರೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಘನಾ ಸುಂದರ್ ರಾಜ್ , ಇದೆಲ್ಲಾ ಸುಳ್ಳು, ನಾನು ಯಾವುದೇ ಒಪ್ಪಂದ ಮುರಿದಿಲ್ಲ ಎಂದು ಹೇಳಿದ್ದಾರೆ. ಬದಲಿಗೆ ತಾವೂ ಕೂಡ ತಮಿಳು ನಟ/ನಟಿಯರ ಸಂಘಕ್ಕೆ ಪ್ರತಿದೂರನ್ನು ನೀಡಿದ್ದಾರೆ. ಸದ್ಯ ದೂರಿನ ಪರೀಶೀಲನೆ ನಡೆಯುತ್ತಿದೆ. ಮೇಘನಾ ಅವರು ಕೃಷ್ಣಲೀಲೈ ಚಿತ್ರದ ನಂತರ ಭರತ್ ನಾಯಕತ್ವದ 'ಎಂಗ ವೀಟು ಪಿಳ್ಳೈ(ಎಂಜಿಆರ್ ಅವರ ಯಶಸ್ವಿ ಚಿತ್ರದ ಹೆಸರು) ಚಿತ್ರದಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಈ ನಡುವೆ ಕನ್ನಡ ಚಿತ್ರರಂಗದ 'ಧನುಷ್ ' (ರಜಿನಿಕಾಂತ್ ಅಳಿಯ, ತಮಿಳು ನಟ)ಎಂದು ಖ್ಯಾತಿ ಗಳಿಸುತ್ತಿರುವ ನಮ್ಮ ಲೂಸ್ ಮಾದ ಯೋಗೀಶ್ ಅವರ ಮುಂದಿನ ಚಿತ್ರ 'ಪಡ್ಡೆ ಹುಡ್ಗ' ಕ್ಕೂ ಮೇಘನಾ ಆಯ್ಕೆಯಾಗಿದ್ದಾರೆ.
ಪೂರಕ ಓದಿಗೆ: ಕನ್ನಡದ ಕುವರಿ ಮೇಘನಾ ತಮಿಳಿನಲ್ಲಿ ಪಾದಾರ್ಪಣೆ


Click it and Unblock the Notifications











