Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
''ಕಳೆದ 25 ವರ್ಷಗಳಿಂದ ಶ್ರುತಿ ಅವರು ನನಗೆ ಗೊತ್ತು. ಅಷ್ಟೇ ಅಲ್ಲ ನಾವಿಬ್ಬರೂ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನವರು. ವಿಶ್ವಕರ್ಮ ಸಮುದಾಯಕ್ಕೆ ಸೇರಿದ್ದು, ನನ್ನ ಮತ್ತು ಶ್ರುತಿ ಅವರ ತಾಯಿ ದೂರದ ಸಂಬಂಧಿಗಳು. ಆದರೆ ನಾವಿಬ್ಬರೂ ಒಂದಾಗಲು ಈ ಹೋಲಿಕೆಗಳಷ್ಟೇ ಕಾರಣವಲ್ಲ. ಇದಕ್ಕಿಂತಲೂ ಹೆಚ್ಚಾಗಿ ಶ್ರುತಿ ಮತ್ತು ನಾನು ಒಬ್ಬರನ್ನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ'' ಎನ್ನುತ್ತಾರೆ ಚಕ್ರವರ್ತಿ. ಚಿತ್ರನಿರ್ಮಾಪಕರೂ ಆಗಿರುವ ಚಕ್ರವರ್ತಿ ಅವರ ಮೊದಲ ಚಿತ್ರ 'ಜನ್ಮ' ನಿರ್ಮಾಣ ನಂತರದ ಕೆಲಸಗಳಲ್ಲಿದೆ. ಈ ಚಿತ್ರ ಬಿಡುಗಡೆಯ ನಂತರ ಶ್ರುತಿ ಅವರ ಚಿತ್ರ ಸೆಟ್ಟೇರಲಿದೆ.
''ಶ್ರುತಿ ಅವರಿಗೆ ವಿವಾಹ ವಿಚ್ಛೇದನ ಸಿಕ್ಕ ಕೂಡಲೇ ನಾನು ಅವರನ್ನುಮರು ಮದುವೆಯಾಗುತ್ತೇನೆ. ಶ್ರುತಿ ಅವರ ವಿವಾಹ ವಿಚ್ಛೇದನಕ್ಕೆ ಕಾರಣ ಏನು ಎಂಬುದು ನನಗೆ ಗೊತ್ತಿಲ್ಲ.ಅವರದೇ ಆದ ವೈಯಕ್ತಿಕ ಕಾರಣಗಳಿರಬಹುದು'' ಎಂದು ಚಕ್ರವರ್ತಿ ಪ್ರತಿಕ್ರಿಯಿಸಿದರು. ನಟಿ ಶ್ರುತಿ ಸಹ ಚಕ್ರವರ್ತಿಯೊಂದಿಗಿಗೆ ಮರು ಮದುವೆಯಾಗಲು ಒಮ್ಮತ ವ್ಯಕ್ತಪಡಿಸಿದ್ದಾರೆ. ''ವಿವಾಹ ವಿಚ್ಛೇದನ ಪಡೆಯಬೇಕು ಎಂದು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಆದರೆ ಯಾಕೋ ಏನೋ ಧೈರ್ಯ ಬರಲಿಲ್ಲ. ಡೈವೋರ್ಸ್ ತೆಗೆದುಕೊಂಡರೆ ನನ್ನ ಬದುಕೇ ಮುಗಿದು ಹೋಗುತ್ತದೇನೋ ಎಂಬ ಭಯ ಕಾಡುತ್ತಿತ್ತು. ಆಗಲೇ ನನಗೆ ಚಕ್ರವರ್ತಿ ಪರಿಚಯವಾಗಿದ್ದು. ನಾವಿಬ್ಬರೂ ಹದಿಹರಯದ ಪ್ರೇಮಿಗಳೇನು ಅಲ್ಲ. ನಾವಿಬ್ಬರೂ ಮಧ್ಯ ವಯಸ್ಕರು. ಉಳಿದ ಜೀವನವನ್ನು ಚಕ್ರವರ್ತಿಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ'' ಎನ್ನುತ್ತಾರೆ ಶ್ರುತಿ.
ಆದರೆ ಎಸ್ ಮಹೇಂದರ್ ಅವರ ಆಪ್ತರ ಪ್ರಕಾರ ಬಹಳ ಹಿಂದಿನಿಂದಲೇ ಚಕ್ರವರ್ತಿಯವರೊಂದಿಗೆ ಶ್ರುತಿ ಸಂಪರ್ಕದಲ್ಲಿದ್ದರಂತೆ. ಶ್ರುತಿ ರಾಜಕೀಯಕ್ಕೆ ಧುಮುಕಿದ ಮೇಲಂತೂ ಅವರಿಬ್ಬರು ಮತ್ತಷ್ಟು ಹತ್ತಿರವಾದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ನಂತರ ಶ್ರುತಿ ಅವರು ಚಕ್ರವರ್ತಿಯನ್ನು ತಮ್ಮ ಕಾರಿನಲ್ಲೇ ಕಚೇರಿಗೆ ಕರೆದೊಯ್ಯುತ್ತಿದ್ದರಂತೆ. ಮುಂದಿನ ನಿರ್ಧಾರ ತೆಗೆದುಕೊಳ್ಳಿ ಎಂದು ಮಹೇಂದರ್ ಅವರಿಗೆ ನೇರವಾಗಿ ಇವರಿಬ್ಬರೂ ಹೇಳಿದ್ದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸುತ್ತಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ವಿವಾಹ
ವಿಚ್ಛೇದನಕ್ಕಾಗಿ
ಅರ್ಜಿ
ಸಲ್ಲಿಸಿದ
ನಟಿ
ಶ್ರುತಿ
ಕರ್ನಾಟಕ
ಫಿಲಂ
ಅಕಾಡೆಮಿ
ಲಿಂಗೈಕ್ಯ!
ನಗೆದೋಣಿಯೇರಿದ
ಅಳುಮುಂಜಿ
ಶ್ರುತಿ