Just In
- 9 min ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 1 hr ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 2 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
- 3 hrs ago
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
Don't Miss!
- Finance
ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ
- News
ಮೈಸೂರು-ಚೆನ್ನೈ ಹೈ ಸ್ಪೀಡ್ ರೈಲು; ಸರ್ವೆಗೆ ಬಿಡ್ ಸಲ್ಲಿಕೆ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೊಂದು ವಿವಾದದ ಸುಳಿಯಲ್ಲಿ ಹರೀಶ್ 'ಗನ್'
ಚಿತ್ರದ ನಿರ್ಮಾಪಕ ಕೆ. ಮುರುಳಿ ಅವರು 'ಗನ್' ಸೋಲಿನಿಂದ ಆಗಿರುವ 75 ಲಕ್ಷ ರು.ನಷ್ಟು ನಷ್ಟವನ್ನು ಸಹ ನಿರ್ಮಾಪಕ ಮತ್ತು ನಿರ್ದೇಶಕ ಹರೀಶ್ ಅವರೇ ತುಂಬಿಕೊಡಬೇಕು ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಹರೀಶ್ ರಾಜ್ ಹೈಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲ, ಮನೆ ಮುಂದೆ ಬಂದು ಗಲಾಟೆ ಮಾಡಿ ಮನೆಮಂದಿಗೆಲ್ಲ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನಮಗೆ ಅವಮಾನವಾಗಿದೆ ಎಂದು ದೂರಿತ್ತಿದ್ದಾರೆ.
ಚಿತ್ರದ ಸೋಲಿನ ಭಾರವನ್ನು ನಿರ್ದೇಶಕ ಹರೀಶ್ ಮೇಲೆಯೇ ಹೊರಿಸಿರುವ ನಿರ್ಮಾಪಕ ಮುರುಳಿ, ಕಡಿಮೆ ಬಜೆಟ್ ನಲ್ಲಿ ಚಿತ್ರ ನಿರ್ಮಿಸು ಎಂದು ಹೇಳಿದ್ದರೂ, ತಮಗೇ ತಿಳಿದ ಫೈನಾನ್ಸರ್ ಗಳನ್ನು ಕರೆತಂದು, ಬಜೆಟ್ ಏರಿಸಿ ಈಗ ಸೋತಿದ್ದರಿಂದ ನಷ್ಟಕ್ಕೆ ಕಾರಣವಾಗಿದ್ದಾರೆ. ಇದರಿಂದ ನಷ್ಟದ ಭಾರವನ್ನು ಹರೀಶ್ ಅವರೇ ಹೊರಬೇಕು ಎಂದು ಮುರುಳಿ ಹೇಳಿದ್ದಾರೆ. ನಷ್ಟ ತುಂಬಿಕೊಡದಿದ್ದರೆ ವಂಚನೆಯ ಕೇಸು ದಾಖಲಿಸುವುದಾಗಿ ಬೆದರಿಸುತ್ತಿದ್ದಾರೆ.
ಚಿತ್ರ ಎತ್ತಂಗಡಿಯ ಸುದ್ದಿ ಸುತ್ತಾಡುತ್ತಿದ್ದಾಗ ಸಂತೋಷ್ ಚಿತ್ರಮಂದಿರದ ಮೇಲೆ ಹತ್ತಿ, ಕತ್ತಿ ಕೈಯಲ್ಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದ ಹರೀಶ್, ಗೆ ಆತ್ಮಹತ್ಯೆಯ ನಾಟಕವಾಡೆಂದು ಹೇಳಿದ್ದೇ ಮುರುಳಿ ದಂಪತಿಗಳು ಎಂಬ ಬಾಂಬ್ ಎಸೆದಿದ್ದಾರೆ. ಇದನ್ನು ಮುರುಳಿ ದಂಪತಿಗಳು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ. ಚಿತ್ರಗಳಲ್ಲಿ ನಟಿಸುವಾಗ ಹರೀಶ್ ಒಳ್ಳೆ 'ಕಲಾಕಾರ' ಎಂಬುದೇನೋ ಸರಿ, ಆದರೆ ನಿಜಜೀವನದಲ್ಲಿ ಕೂಡ ನಟಿಸುತ್ತಾರೆಂದು ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇಲ್ಲಿ ಅನೇಕ ಪ್ರಶ್ನೆಗಳಿಗೆ ಹರೀಶ್ ಅವರೇ ಉತ್ತರಿಸಬೇಕಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಲು ಮುರುಳಿ ದಂಪತಿಗಳೇ ಹೇಳಿದ್ದನ್ನು ಇವರು ಕೇಳಿದ್ದೇಕೆ? ಆ ಸಂದರ್ಭದಲ್ಲೇ ಇದನ್ನೇಕೆ ಹರೀಶ್ ಪ್ರಸ್ತಾಪಿಸಲಿಲ್ಲ? ಅವರು ಹೇಳಿದಂತೆ ಇವರು ಮಾಡಿದ್ದರೆ ಅದೆಲ್ಲ ಒಂದು ನಾಟಕವೆ? ಹರಿಸಿದ ಕಣ್ಣೀರೆಲ್ಲ ಮೊಸಳೆ ಕಣ್ಣೀರೆ? ಮೊದಲೇ ಕನ್ನಡ ಚಿತ್ರಗಳು ಓಡುತ್ತಿಲ್ಲ. ಜೇಬು ತೂತಾಗಿರುವ ನಿರ್ಮಾಪಕರೇ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಿರ್ದೇಶನ ಮಾಡಿ ತೆರೆಮರೆಯಲ್ಲಿ ಸಹ ನಿರ್ಮಾಪಕರೂ ಆಗಿದ್ದ ಹರೀಶ್ ಅವರು ನಷ್ಟದ ಭಾರವನ್ನು ಹೊರಬಾರದೇಕೆ?