Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ತಾರೆ ರಮ್ಯಕೃಷ್ಣ ವಿರುದ್ಧ ಅರೆಸ್ಟ್ ವಾರಂಟ್
ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣ ಹಾಗೂ ಆಕೆಯ ತಂಗಿ ವಿನಯಾ ಕೃಷ್ಣ ವಿರುದ್ಧ ಚೆನ್ನೈನ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ತಮ್ಮೊಂದಿಗೆ ಮಾಡಿಕೊಂಡಿದ್ದಒಪ್ಪಂದ ಉಲ್ಲಂಘಿಸಿದ ಸಂಬಂಧ ನಟಿ ಕುಟ್ಟಿ ಪದ್ಮಿನಿ ಕೋರ್ಟ್ ಮೆಟ್ಟಿಲೇರಿದ್ದರು.
ಸನ್ ಟಿವಿಯ ಧಾರಾವಾಹಿ 'ಕಲಾಸಂ'ಗೆ ಸಂಬಂಧಿಸಿದಂತೆ ಕುಟ್ಟಿ ಪದ್ಮಿನಿ ಹಾಗೂ ರಮ್ಯಾ ಕೃಷ್ಣ ಸಹೋದರರಿಯ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದವನ್ನು ಉಲ್ಲಂಘಿಸಿ ತಾವೇ ಧಾರಾವಾಹಿಯ ಕ್ರೀಯೇಟಿವ್ ಮುಖ್ಯಸ್ಥರು ಎಂದು ಪ್ರಕಟಿಸಿಕೊಂಡಿದ್ದರು ರಮ್ಯಾ ಕೃಷ್ಣ. ಬಳಿಕ ಸೊಸೈಟಿ ಆಫ್ ಟೆಲಿವಿಷನ್ ಪ್ರೊಡಕ್ಷನ್ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ತಣ್ಣಗಾಗಿತ್ತು.
ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಈ ಧಾರಾವಾಹಿ ಮತ್ತೆ ಪ್ರಸಾರ ಕಂಡಿದೆ. ಆಗ ಕುಟ್ಟಿ ಪದ್ಮಿನಿ ಹೆಸರನ್ನು ಕೈಬಿಡಲಾಗಿತ್ತು. ಈ ಸಂಬಂಧ ಮತ್ತೆ ಆಕೆ ಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಈಗ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಸದ್ಯಕ್ಕೆ ರಮ್ಯ ಕೃಷ್ಣ ಸಹೋದರಿಯರ ಪರ ವಕೀಲರು ಜಾಮೀನಿನ ಪ್ರಯತ್ನದಲ್ಲಿದ್ದಾರೆ. (ಏಜೆನ್ಸೀಸ್)