Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ ಚಿತ್ರಗಳಿಗೆ ಎಲ್ಟಿಟಿಇ ಹಣ!
ದಕ್ಷಿಣ ಭಾರತದ ಖ್ಯಾತ ನಟ ರಜನೀಕಾಂತ್ ಚಿತ್ರಗಳಿಗೆ ಎಲ್ಟಿಟಿಇ ಹಣ ತೊಡಗಿಸಿದೆಯೇ? ಹೌದು ಎನ್ನುತ್ತಿದ್ದಾರೆ ಶ್ರೀಲಂಕಾ ಸರಕಾರದ ಆಪತ್ತು ನಿರ್ವಹಣಾ ಸಚಿವ ಅಬ್ದುಲ್ ರಿಶದ್! ಅವರ ಕೆಲವು ಚಿತ್ರಗಳಿಗೆ ಎಲ್ಟಿಟಿಇ ಭಾರಿ ಪ್ರಮಾಣದ ಹಣ ಸುರಿದು ಚಿತ್ರ ನಿರ್ಮಿಸಿದೆ ಎಂದು ರಶೀದ್ ಗುರುತರ ಆರೋಪ ಮಾಡಿದ್ದಾರೆ.
ನೇರವಾಗಿ ಚಿತ್ರಕ್ಕೆ ಹಣ ಪಾವತಿ ಮಾಡಿಲ್ಲವಾದರೂ ಲಂಡನ್ ನಲ್ಲಿರುವ ತಮಿಳರ ಮುಖಾಂತರ ಕೋಟ್ಯಾಂತರ ರೂಪಾಯಿ ಹಣವನ್ನು ಎಲ್ಟಿಟಿಇ ಚಿತ್ರ ನಿರ್ಮಾಣಕ್ಕೆ ಸುರಿದಿದೆ. ಕೇವಲ ರಜನಿಕಾಂತ್ ಚಿತ್ರಗಳಿಗಷ್ಟೇ ಅಲ್ಲ ಬೇರೆ ಖ್ಯಾತ ನಾಮರ ಚಿತ್ರಗಳಲ್ಲೂ ಎಲ್ಟಿಟಿಇ ಹಣ ತೊಡಗಿಸಿದೆ ಎಂದು ಅವರು ದೈನಿಕವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ ಎಲ್ಟಿಟಿಇ ಪರ ಧ್ವನಿಯೆತ್ತುವ ತಮಿಳುನಾಡಿನ ರಾಜಕೀಯ ನಾಯಕರುಗಳಾದ ಎಂಡಿಎಂಕೆ ಪಕ್ಷದ ಗೋಪಾಲಸ್ವಾಮಿ, ಪಿಎಂಕೆ ಪಕ್ಷದ ರಾಮದಾಸ್ ಮತ್ತು ನೆಡುಮಾರನ್ ಮುಂತಾದವರಿಗೆ ಹಣದ ಸಹಾಯ ಮಾಡಿದೆಯೆಂದು ರಶೀದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಜನೀಕಾಂತ್ ಬಗ್ಗೆ ಈ ರೀತಿ ಗಂಭೀರ ಆರೋಪ ಎದುರಾಗಿದ್ದರೂ ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲದಿರುವುದು ವಿಶೇಷ.
ರಜನಿ ಚಿತ್ರಗಳಲ್ಲಿ ಎಷ್ಟು ಹಣ ತೊಡಗಿಸಲಾಗಿದೆ ಎಂಬುದನ್ನು ರಶೀದ್ ಸ್ಪಷ್ಟಪಡಿಸಿಲ್ಲ. ಪ್ರಸ್ತುತ 'ಎಂದಿರನ್' ಎಂಬ ಚಿತ್ರದಲ್ಲಿ ರಜನಿಕಾಂತ್ ಬಿಜಿಯಾಗಿದ್ದಾರೆ. ಐಶ್ವರ್ಯ ರೈ ಚಿತ್ರದ ನಾಯಕಿ. ಎ ಆರ್ ರೆಹಮಾನ್ ಸಂಗೀತವುಳ್ಳ ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)