Just In
Don't Miss!
- News
ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ: ಭಾನುವಾರದ ಪರೀಕ್ಷೆ ಮುಂದೂಡಿಕೆ
- Automobiles
ಮಾನ್ಸ್ಟರ್ ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಡುಕಾಟಿ
- Sports
ಐಎಸ್ಎಲ್: ಕೇರಳ ಬ್ಲಾಸ್ಟರ್ಸ್ vs ಎಫ್ಸಿ ಗೋವಾ, Live ಸ್ಕೋರ್
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರು.22 ಲಕ್ಷಕ್ಕೆ ರಮ್ಯಾ ಬೇಡಿಕೆ; ಪ್ರೀತಂ ಗುಬ್ಬಿ ತಬ್ಬಿಬ್ಬು
ಚಿತ್ರನಟಿ ರಮ್ಯಾ ಮತ್ತೆ ಸುದ್ದಿ ಮಾಡಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶಿಸಲಿರುವ 'ಜಾನಿ ಮೇರಾ ನಾಮ್' ಚಿತ್ರಕ್ಕೆ ಕೈ ಕೊಡುವ ಮೂಲಕ ರಮ್ಯಾ ಕಿರಿಕಿರಿ ಮತ್ತೊಮ್ಮೆ ಸಾಬೀತಾಗಿದೆ. ನಿರ್ಮಾಪಕ ವಲಯದಆಪ್ತ ಮೂಲಗಳ ಪ್ರಕಾರ, ದುನಿಯಾ ವಿಜಯ್ ನಾಯಕ ನಟನಾಗಿರುವ ಚಿತ್ರವನ್ನು ರಮ್ಯಾ ನಿರಾಕರಿಸಿದ್ದಾರೆ.
ವಿತರಕ ಜಯಣ್ಣ ತಮ್ಮ ಗೆಳಯರೊಂದಿಗೆ ಕೂಡಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ರಮ್ಯಾರನ್ನು ಆಯ್ಕೆ ಮಾಡಿರುವ ಬಗ್ಗೆ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ರಮ್ಯಾ ಜೊತೆಗೆ ಮಾತುಕತೆ ನಡೆದಿದ್ದು ಅವರು ಚಿತ್ರದಲ್ಲಿ ನಟಿಸಲು ಒಪ್ಪಿದ್ದರಂತೆ. ಆದರೆ ಕಡೆಯ ಘಳಿಗೆಯಲ್ಲಿ ಸಂಭಾವನೆ ವಿಚಾರವಾಗಿ ಒಮ್ಮತ ಅಭಿಪ್ರಾಯ ಮೂಡದೆ ರಮ್ಯಾ ಕೆ ಎತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಸಂಭಾವನೆ ವಿಚಾರವಾಗಿ ಒಂಚೂರು ಹೆಚ್ಚಾದರೆ ಪರ್ವಾಗಿಲ್ಲ, ಆದರೆ ಕಡಿಮೆಯಾದರೆ ಮಾತ್ರ ರಮ್ಯಾ ಬಿಲ್ ಕುಲ್ ಎಂದರೂ ಒಪ್ಪಲ್ಲವಂತೆ. ಚಿತ್ರದ ನಿರ್ದೇಶಕ, ನಿರ್ಮಾಪಕ ಯಾರೇ ಆಗಿರಲಿ ರಮ್ಯಾ ಮಾತ್ರ ಕ್ಯಾರೆ ಎನ್ನಲ್ಲವಂತೆ. ಪ್ರೀತಂ ಗುಬ್ಬಿ ಚಿತ್ರಕ್ಕೆ ಆಕೆ ಇಟ್ಟ ಬೇಡಿಕೆ ರು.22 ಲಕ್ಷಗಳು. ರಮ್ಯಾ ಬೇಡಿಕೆಗೆ ಪ್ರೀತಂ ಗುಬ್ಬಿ ತಬ್ಬಿಬ್ಬಾದರಂತೆ.
ಕಡೆಗೆ ಹಾಗೂ ಹೀಗೂ ಸರ್ಕಸ್ ಮಾಡಿ ಚಿತ್ರದ ನಿರ್ಮಾಪಕ ಜಯಣ್ಣ ರು.20 ಲಕ್ಷ ಕೊಡಲು ಒಪ್ಪಿದ್ದರಂತೆ. ಆದರೆ ರಮ್ಯಾ ರು.22 ಲಕ್ಷ ಕೊಟ್ಟರೆ ಮಾತ್ರ ಎಂದಿದ್ದಾಗಿ ಮೂಲಗಳು ತಿಳಿಸಿವೆ. ಕಡೆಗೆ ವಿಧಿಯಿಲ್ಲದೆ ಜಯಣ್ಣ ರಮ್ಯಾರನ್ನು ಕೈಬಿಟ್ಟು ಐಂದ್ರಿತಾ ರೇರನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ.
ದುನಿಯಾ ವಿಜಯ್ ಜೊತೆ ಐಂದ್ರಿತಾ ರೇ 'ಜಂಗ್ಲಿ' ಚಿತ್ರದಲ್ಲಿ ಅಭಿನಯಿಸಿದದ್ದರು. ಇಬ್ಬರದ್ದೂ ಒಳ್ಳೆ ಜೋಡಿ ಎನ್ನಿಸಿಕೊಂಡಿತ್ತು. ಈಗ 'ಜಾನಿ ಮೇರಾ ನಾಮ್' ಚಿತ್ರದಲ್ಲಿಒಂದಾಗುವ ಛಾನ್ಸ್ ಸಿಕ್ಕಿದೆ. ಐಂದ್ರಿತಾ ರೇ ಅಭಿನಯದ ಸುದೀಪ್ ಮುಖ್ಯ ಭೂಮಿಕೆಯ 'ವೀರ ಪರಂಪರೆ' ಚಿತ್ರವೂ ಬಿಡುಗಡೆ ಸಜ್ಜಾಗಿದೆ. ರಮ್ಯಾ ಗೆ ಕೈತಪ್ಪಿದ ಅವಕಾಶ ಐಂದ್ರಿತಾ ಪಾಲಾಗಿದೆ.