Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಯರ್ ಎಂಡ್ ಎಣ್ಣೆ ಏಟಲ್ಲಿ ಉಪ್ಪಿಗೆ ಹಲ್ಲೆ ಮಾಡಿದ್ರಾ?
'ಹುಚ್ಚ ವೆಂಕಟ್' ಅನ್ನೋ ಸಿನಿಮಾ ಶುರುವಾಗಿರೋದು, ಶೂಟಿಂಗ್ ನಡೀತಾ ಇರೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ಈ ಸಿನಿಮಾದ ನಾಯಕ ವೆಂಕಟ್ ಈಗ ನಿಜಕ್ಕೂ ಹುಚ್ಚನಂತಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ನಡೆದ ವೆಂಕಟ್ ಸೇನೆ ಉದ್ಘಾಟನೆಯ ಪ್ರೆಸ್ ಮೀಟ್ ನಲ್ಲಿ.
ಪ್ರೆಸ್ ಮೀಟ್ ನಡೀತಾ ಇದ್ದಾಗಲೇ ವೆಂಕಟ್ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ಹಲ್ಲೆ ಮಾಡಿದ್ದಾರಂತೆ. ಇದಕ್ಕೆ ಕಾರಣವಾಗಿದ್ದು ಈಯರ್ ಎಂಡ್ ಎಣ್ಣೆ ಏಟು. ಘಟನೆ ನಡೆದಿದ್ದು ಹೀಗೆ... ವೆಂಕಟ್ ಸೇನೆಯ ಪೋಸ್ಟರ್ ಡಿಸೈನ್ ಮಾಡಿ ಹತ್ತು ಹನ್ನೆರೆಡು ಪ್ರಿಂಟ್ ಗಳನ್ನ ತರೋದಕ್ಕೆ ಪೋಸ್ಟರ್ ಡಿಸೈನರ್ ಉಪ್ಪಿ ಅನ್ನೋರಿಗೆ ವೆಂಕಟ್ ಹಣವನ್ನ ಕೊಟ್ಟಿದ್ದರು. ['ಟೋಪಿವಾಲ' ಉಪೇಂದ್ರಗೆ ಮಕ್ಮಲ್ ಟೋಪಿ]
ಆದರೆ ಈಯರ್ ಎಂಡ್ ಎಣ್ಣೆ ಏಟಲ್ಲಿ ಮಲಗಿದ್ದ ಪ್ರಿಂಟಿಂಗ್ ನವರು ಬೆಳಿಗ್ಗೆ ಆಫೀಸಿಗೆ ಬರೋದೇ 10 ಗಂಟೆಯಾಗಿದೆ. ಅಲ್ಲಿ ಕಾದು ಕಾದು ಪ್ರಿಂಟ್ ಹಾಕಿಸಿಕೊಂಡು ಬಂದ ಉಪ್ಪಿ ಪ್ರೆಸ್ ಮೀಟ್ ಲೊಕೇಷನ್ ತಲುಪುವಾಗ ಸಮಯ ಹನ್ನೊಂದುವರೆ.
ಸಮಯ 10:30ಕ್ಕೆ ನಿಗದಿಯಾಗಿದ್ದ ಪ್ರೆಸ್ ಮೀಟ್ ನಲ್ಲಿ ಪೋಸ್ಟರ್ ವಿನೈಲ್ ಇಲ್ಲದೆ ತಲೆಕೆಡಿಸಿಕೊಂಡಿದ್ದ ಹುಚ್ಚ ವೆಂಕಟ್ ಉಪ್ಪಿಯವರ ಮೇಲೆ ಹಲ್ಲೆ ಮಾಡಿದ್ದಾನೆ. ಆದರೆ ಇದರ ಬಗ್ಗೆ ಹೇಳಿಕೊಳ್ಳೋಕೂ ಆಗದೆ ಬಿಡೋಕೂ ಆಗದೆ ಬೇಸರಮಾಡಿಕೊಂಡು ಸುಮ್ಮನಾಗಿದ್ದಾರೆ. ಈಯರ್ ಎಂಡ್ ಎಣ್ಣೆ ಏಟು ಏನೇನೆಲ್ಲಾ ಮಾಡುತ್ತಲ್ವಾ.. ಅಬ್ಬಬ್ಬಾ..!