Don't Miss!
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- News Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಜಿನುಗು ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ನಯನತಾರಾ ಮೇಲೆ ವಾಮಾಚಾರ ಪ್ರಯೋಗ?
ಜಗತ್ತು ಸೈಬರ್ ಯುಗಕ್ಕೆ ಅಡಿಯಿಟ್ಟಿದ್ದರೂ ಇತ್ತೀಚಿನ ದಿನಗಳಲ್ಲಿ ವಾಮಾಚಾರ ಪ್ರಕರಣಗಳು ಹೆಚ್ಚು ಹೆಚ್ಚಾಗಿ ಪತ್ತೆಯಾಗುತ್ತಲೇ ಇವೆ. ಇಂದಿಗೂ ವಾಮಾಚಾರದ ಬಗ್ಗೆ ಪ್ರಪಂಚದ ಎಲ್ಲಾ ಭಾಗಗಳ ಜನರಲ್ಲಿ ಭಯ,ಕುತೂಹಲ, ಆತಂಕಗಳನ್ನು ಕಾಣಬಹುದಾಗಿದೆ.
ದಕ್ಷಿಣದ ಬೆಡಗಿ ನಯನತಾರಾ ಮೇಲೂ ವಾಮಾಚಾರ ಪ್ರಯೋಗವಾಗಿದೆ ಎಂಬ ಸುದ್ದಿ ಕಳೆದ ಕೆಲದಿನಗಳಿಂದ ಹರಿದಾಡುತ್ತಿದೆ. ಅವರ ಚರ್ಮದ ಮೇಲೆ ಇದ್ದಕ್ಕಿದ್ದಂತೆ ದದ್ದುಗಳು ಬರುವುದು, ಬೆಂದ ಗಾಯಗಳ ಮಾದರಿಯಲ್ಲಿ ಕಂಡುಬರುತ್ತಿರುವುದು ಆಗುತ್ತಿದೆಯಂತೆ.
ಇದೆಲ್ಲಾ ಯಾರೋ ಮಾಡಿಸಿದ ಮಾಟ ಮಂತ್ರದ ಫಲ ಎಂದು ಕಾಲಿವುಡ್ ಚಿತ್ರರಂಗದಲ್ಲಿ ಮಾತಾನಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಯನತಾರಾ ಅವರು ತಮ್ಮ ಮೇಲೆ ಪ್ರಯೋಗಿಸಿರುವ ಕ್ಷುದ್ರ ಶಕ್ತಿಗಳ ಬಿಡುಗಡೆಯಾಗಿ ಕೇರಳದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದು ಇನ್ನೊಂದು ಮಜವಾದ ಗಾಸಿಪ್.
ನಯನತಾರಾ ಅವರಂತೂ ಬಿದ್ದೂ ಬಿದ್ದೂ ನಗ್ತಾರಂತೆ. ಬಹುಶಃ ಅಲರ್ಜಿ ಕಾರಣ ಅವರಿಗೆ ಹೀಗಾಗಿರುವ ಸಾಧ್ಯತೆ ಇದೆಯಂತೆ. ಇದಕ್ಕಾಗಿ ಆಂಟಿಬಯೋಟಿಕ್ಸ್ ತಗೊಂಡಿದ್ದೀನಿ. ವಾಮಾಚಾರ, ವಶೀಕರಣ, ಮಾಟ ಮಂತ್ರ, ನಿಂಬೆಕಾಯಿ ಬದನೆಕಾಯಿ ಎಲ್ಲಾ ಸುಳ್ಳು ಎಂದಿದ್ದಾರೆ.
ಅಂದಹಾಗೆ ಈ ವಾಮಾಚಾರದ ಬಗ್ಗೆ ಒಂದೆರಡು ಮಾತು, ಕ್ಷುದ್ರ ಶಕ್ತಿಗಳನ್ನು ಆಹ್ವಾನಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಭಾವಿಸಿರುವ ಅತಿ ಪುರಾತನ ವಿದ್ಯೆ ಇದು. ಅಥರ್ವವೇದದಲ್ಲಿ ವಾಮಾಚಾರದ ಬಗ್ಗೆ ಆಳವಾಗಿ ವಿವರಿಸಲಾಗಿದೆ.