Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕರ್ನಾಟಕಕ್ಕೆ ಡಾ.ರಾಜ್ ಕೊಡುಗೆ ಏನೇನೂ ಇಲ್ಲ'
ಕನ್ನಡ ಚಿತ್ರರಸಿಕರ ಆರಾಧ್ಯ ದೈವ, ವರನಟ, ನಟಸಾರ್ವಭೌಮ, ಗಾನಗಂಧರ್ವ ಡಾ.ರಾಜ್ ಕುಮಾರ್ ಅವರ ಬಗ್ಗೆ ಇದೇ ಮೊದಲ ಬಾರಿಗೆ ತೀವ್ರ ಆಕ್ಷೇಪಾರ್ಹ ಮಾತುಗಳು ಕೇಳಿಬಂದಿವೆ. ಅಣ್ಣಾವ್ರ ಸಾಧನೆ, ರಾಜ್ಯಕ್ಕೆ ಅವರ ಕೊಡುಗೆ ಏನು ಎಂದೇ ನೇರವಾಗಿ ಪ್ರಶ್ನಿಸಿದ್ದಾರೆ ಶಿಕ್ಷಕ ಹಾಗೂ ಕವಿ ಮುಕುಂದರಾಜ್.
"ರಾಜ್ ಕುಮಾರ್ ಬಗ್ಗೆ ಬಹಳಷ್ಟು ಮಂದಿ ಮಾತನಾಡುತ್ತಾರೆ, ಆದರೆ ಅವರು 'ಸ್ವಾಮಿ ರಾಘವೇಂದ್ರ' ಹಾಗೂ 'ಅಯ್ಯಪ್ಪ' ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಮೌಢ್ಯತೆಯನ್ನು ತುಂಬಿದ್ದಾರೆ. ಒಂದು ವೇಳೆ ರಾಜ್ ಕುಮಾರ್ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸದೇ ಇದ್ದಿದ್ದರೆ ಚಿತ್ರರಸಿಕರು ಕುರುಡು ನಂಬಿಕೆ ಬೆಳೆಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.
ಬಳಿಕ ಅವರ ಮಾತು ರಾಜ್ಯ ಸರ್ಕಾರದ ಕಡೆಗೆ ಹೊರಳಿ, ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಕೊಟ್ಟಿದ್ದನ್ನು ತೀವ್ರವಾಗಿ ಖಂಡಿಸಿದರು. ಇದು ಸಾಲದು ಎಂಬಂತೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಕೊಡಲು ಸರ್ಕಾರ ಮುಂದಾಗಿರುವುದು ಮತ್ತೊಂದು ಅವಿವೇಕದ ಕೆಲಸ ಎಂದರು. ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ಮತ್ತು ಸಾಮಾಜಿಕ ಹೊಣೆಗಾರಿಕೆ ಸಂಕಿರಣದಲ್ಲಿ ಮುಕುಂದ ರಾಜ್ ಆಡಿದ ಮಾತುಗಳನ್ನು ಉಲ್ಲೇಖಿಸಿ ಆಂಗ್ಲ ದೈನಿಕ ಡಿಎನ್ ಎ ವರದಿ ಪ್ರಕಟಿಸಿದೆ
"ರಾಜ್ ಕುಮಾರ್ ಆಗಲಿ ವಿಷ್ಣುವರ್ಧನ್ ಆಗಲಿ ಸ್ವಾತಂತ್ರ್ಯ ಹೋರಾಟಗಾರರಲ್ಲ. ಕರ್ನಾಟಕಕ್ಕೆ ಇವರಿಬ್ಬರ ಕೊಡುಗೆ ಏನೇನೂ ಇಲ್ಲ" ಎಂದು ಕಿಡಿಕಾರಿದ್ದಾರೆ. ಬಳಿಕ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರನ್ನೂ ತರಾಟೆಗೆ ತೆಗೆದುಕೊಂಡರು.
ಚಲನಚಿತ್ರ ಅಕಾಡೆಮಿಗೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಹಾಗೆಯೇ ಕನ್ನಡ ಚಿತ್ರಗಳಿಗೂ ಸಬ್ಸಿಡಿ ರೂಪದಲ್ಲಿ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಕನ್ನಡ ಭಾಷೆ ಹಾಗೂ ಸಾಹಿತಿಗಳನ್ನು ಮಾತ್ರ ಕಡೆಗಣಿಸಲಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಹಿತಿಗಳಿಗಾದ ಅವಮಾನ ಅಷ್ಟಿಷ್ಟಲ್ಲ.
ಸಮ್ಮೇಳನದಲ್ಲಿ ಸಿನೆಮಾ ತಾರೆಗಳಿಗೆ ಹವಾ ನಿಯಂತ್ರಿತ ಕೊಠಡಿಗಳನ್ನು ಒದಗಿಸಲಾಗಿತ್ತು. ಆದರೆ ಸಾಹಿತಿಗಳಿಗೆ ಸಾಮಾನ್ಯ ಕೊಠಡಿಗಳನ್ನು ನೀಡಲಾಗಿತ್ತು. ಸಿನೆಮಾ ತಾರೆಗಳು ಉಳಿದುಕೊಂಡಿದ್ದ ಕೊಠಡಿಗಳ ಬಳಿ ಬಳಹಷ್ಟು ಖಾಲಿ ವಿಸ್ಕಿ ಬಾಟಲಿಗಳು ಪತ್ತೆಯಾಗಿದ್ದವು. ಸರ್ಕಾರ ಅವರಿಗೆ ಮದ್ಯವನ್ನೂ ಸರಬರಾಜು ಮಾಡಿ ಕೃತಾರ್ಥವಾಗಿದೆ ಎಂದು ತಮ್ಮ ಮಾತಿನ ಚಾಟಿ ಬೀಸಿ ಸುಮ್ಮನಾಗಿದ್ದಾರೆ.
ಮುಕುಂದರಾಜ್ ಅವರ ಈ ಖಾರದ ಪ್ರತಿಕ್ರಿಯೆಗೆ ಪತ್ರಕರ್ತ ಅಗ್ನಿ ಶ್ರೀಧರ್ ಪ್ರತಿಕ್ರಿಯಿಸುತ್ತಾ, "ಮುಕುಂದರಾಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಸ್ವತಂತ್ರರು. ಆದರೆ ರಾಜ್ ಕುಮಾರ್ ಅವರನ್ನು ಟೀಕಿಸಿರುವುದು ನ್ಯಾಯಸಮ್ಮತವಲ್ಲ" ಎಂದಿದ್ದಾರೆ.
ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯಿಸುತ್ತಾ, "ರಾಜ್ ಕುಮಾರ್ ಅವರು ಸಾರ್ವಜನಿಕರ ಸ್ವತ್ತು ಇದ್ದಂತೆ. ಕನ್ನಡ ಚಿತ್ರರಂಗಕ್ಕೆ ಅಪ್ಪಾಜಿ ಅವರ ಕೊಡುಗೆ ಏನು ಎಂಬುದು ಗೊತ್ತಿಲ್ಲದೆ ಅವರು ಏನೇನೋ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ನನ್ನ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುವುದು ನನಗಿಷ್ಟವಿಲ್ಲ" ಎಂದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಗಮನಿಸಿಯೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಟ್ಟಿದ್ದು. ಅವರು ಗೋಕಾಕ್ ಚಳವಳಿಗೆ ಧುಮುಕಿ ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಮಾಡಿದ ಹೊರಾಟ ಇನ್ನೂ ಸಪ್ತಕೋಟಿ ಕನ್ನಡಿಗರು ಮರೆತಿಲ್ಲ. ಇದೆಲ್ಲವನ್ನೂ ಮುಕುಂದರಾಜ್ ಮರೆತಂತಿದೆ. ಅವರಿಗೆ ರಾಜ್ ಅವರ ಕೊಡುಗೆ ಏನು ಎಂಬುದರ ಬಗ್ಗೆ ಕಿಂಚಿತ್ತೂ ಅರಿವಿಲ್ಲ ಎಂದಿದ್ದಾರೆ.
ಹಾಗೆಯೇ ಟಿ ಎಸ್ ನಾಗಾಭರಣ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರು ಮುಕುಂದರಾಜ್ ಅವರ ಮಾತಿಗೆ ಕಿಡಿಕಾರಿದ್ದಾರೆ. (ಮೂಲ: ಡಿಎನ್ಎ)