Don't Miss!
- News Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶುಭ ಮಂಗಳ ರೀಮೇಕ್; ರಮ್ಯಾ, ಶ್ರೀನಗರ ಕಿಟ್ಟಿ ಜೋಡಿ
ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಶುಭ ಮಂಗಳ' ಚಿತ್ರ 1975 ರಲ್ಲಿ ತೆರೆಕಂಡು ಸೂಪರ್ ಹಿಟ್ ದಾಖಲಿಸಿತ್ತು. ಈಗ ಅದೇ ಚಿತ್ರ ಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಬರಲಿದೆ.
ಅದರಲ್ಲಿ ನಟಿಸಿದ್ದ ಆರತಿ ಹಾಗೂ ಶ್ರೀನಾಥ್ ಜೋಡಿ ಪ್ರೇಕ್ಷಕರ ಮನಸ್ಸಿನಲ್ಲಿ ಎಂದೆಂದೂ ಮರೆಯಲಾಗದಂತೆ ಮನೆಮಾಡಿಕೊಂಡಿದ್ದಾರೆ. ಶುಭ ಮಂಗಳ ಎಂದರೆ ಸಾಕು, ಚಿತ್ರ ನೋಡಿದವರ ಮೈಯಲ್ಲಿ ಮಿಂಚು ಹರಿದಂತಾಗುತ್ತದೆ.
ಇದೀಗ ದಂಡಪಾಳ್ಯ ನಿರ್ದೇಶಕ ಶ್ರೀನಿವಾಸ ರಾಜು, ಶುಭ ಮಂಗಳ ಚಿತ್ರವನ್ನು ಮತ್ತೆ ತೆರೆಗೆ ತರಲು ಸಿದ್ಧತೆ ನಡೆಸಿದ್ದು ಮೂಲ ಕಥೆಗೆ ಪಾಲಿಶ್ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಸದ್ಯದಲ್ಲೇ ಹೊಸ ಚಿತ್ರಕತೆ ಸಿದ್ಧವಾಗಲಿದೆ.
ಈಗಿರುವ ಶುಭ ಮಂಗಳ ಚಿತ್ರದಲ್ಲಿ ನಾಯಕಿ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾಳೆ. ಆದರೆ ಬರಲಿರುವ, ಶ್ರೀನಿವಾಸ ರಾಜು ಚಿತ್ರದಲ್ಲಿ ನಾಯಕಿ ಬೆಂಗಳೂರಿನಿಂದ ಲಂಡನ್ ಗೆ ಹೋಗುತ್ತಾಳಂತೆ. ಹಾಗೂ ಇನ್ನೂ ಕೆಲವು ಬದಲಾವಣೆ ಇದೆಯಂತೆ.
"ಮೂಲ ಚಿತ್ರದಲ್ಲಿ ಆರತಿ ಪೋಷಿಸಿದ್ದ ಪಾತ್ರವನ್ನು ಲಕ್ಕಿ ಸ್ಟಾರ್ ರಮ್ಯಾ ಪೋಷಿಸಲಿದ್ದಾರೆ. ಶ್ರೀನಾಥ್ ಪಾತ್ರವನ್ನು ಶ್ರೀನಗರ ಕಿಟ್ಟಿ ಮಾಡಲಿದ್ದಾರೆ. ಇನ್ನುಳಿದ ಪಾತ್ರಗಳ ಆಯ್ಕೆ ನಡೆಯಬೇಕಿದೆ" ಎಂದು ನಿರ್ದೇಶಕರು ತಿಳಿಸಿದ್ದಾರೆ.
"ಮೂಲ ಚಿತ್ರದಲ್ಲಿರುವ ಹಾಡುಗಳಲ್ಲಿ ಮೂರು ಹಾಡುಗಳು ಹಾಗೇ ಪುನರಾವರ್ತನೆ ಆಗಲಿವೆ. ಈ ಚಿತ್ರಕ್ಕೆ ವಿಭಿನ್ನ ರೀತಿಯ ಹೊಸ ಹಿನ್ನೆಲೆ ಸಂಗೀತವಿರಲಿದ್ದು ಅದನ್ನು ಮನೋಮೂರ್ತಿ ನಿರ್ವಹಿಸಲಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಇನ್ನುಳಿದ ಹಾಡುಗಳು ಮೂಡುಬರಲಿವೆಯಂತೆ.
ರಮ್ಯಾ, ಶ್ರೀನಗರ ಕಿಟ್ಟಿ ಹಾಗೂ ಸ್ವತಃ ತಾವು ಸದ್ಯಕ್ಕೆ ಬೇರೆ ಬೇರೆ ಚಿತ್ರಗಳಲ್ಲಿ ಬಿಜಿ ಆಗಿರುವುದರಿಂದ ಈ ಹೊಸ ಶುಭ ಮಂಗಳ, ಇನ್ನೆರಡು ತಿಂಗಳು ಬಿಟ್ಟು ಸೆಟ್ಟೇರಲಿದೆ" ಎಂದು ಈ ಚಿತ್ರವನ್ನು ನಿರ್ದೇಶಿಸಲಿರುವ ಶ್ರೀನಿವಾಸ ರಾಜು ತಿಳಿಸಿದ್ದಾರೆ.
ಅಂದಹಾಗೇ, ಮುಹೂರ್ತ ಮಾಡಿಕೊಂಡಾಗಿನಿಂದ ಚಿತ್ರೀಕರಣ ಮುಗಿಯುವವರೆಗೂ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವ ಅವರ ದಂಡುಪಾಳ್ಯ ಚಿತ್ರದ ಬಿಡುಗಡೆ ಸದ್ಯದಲ್ಲೇ ಆಗಲಿದೆಯಂತೆ. (ಒನ್ ಇಂಡಿಯಾ ಕನ್ನಡ)