Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲಯಾಳಂ ಖ್ಯಾತ ನಟಿ ಶರಣ್ಯಾ ಶಶಿ ನಿಧನ
ಮಲಯಾಳಂನ ಖ್ಯಾತ ನಟಿ ಶರಣ್ಯಾ ಶಶಿ ನಿಧನರಾಗಿದ್ದಾರೆ. ಬಹು ಸಮಯದಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು.
ಕೆಲವು ವರ್ಷಗಳಿಂದಲೂ ಮೆದುಳಿನ ಕ್ಯಾನ್ಸರ್ಗೆ ಶರಣ್ಯಾ ಶಶಿ ಚಿಕಿತ್ಸೆ ಪಡೆಯುತ್ತಿದ್ದರು. ನಟಿಯು ಆರ್ಥಿಕ ಮುಗ್ಗಟ್ಟು ಅನುಭವಿಸಿದಾಗ ಅವರ ಗೆಳೆಯರು, ಆತ್ಮೀಯರು ಚಿಕಿತ್ಸೆಗೆ ಸಹಾಯ ಮಾಡಿದ್ದರು.
ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕಳೆದ ಮೇ ತಿಂಗಳಲ್ಲಿ ಅವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಕೋವಿಡ್ನಿಂದ ಗುಣಮುಖರಾದರೂ ಸಹ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು. ಆಗಿನಿಂದಲೂ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಾ ಸಾಗಿ ಕೊನೆಗೆ ಸೋಮವಾರ ಅವರು ಕೊನೆ ಉಸಿರೆಳೆದಿದ್ದಾರೆ.
ಕೇರಳದ ಕಣ್ಣೂರಿನವರಾದ ಶರಣ್ಯಾ ಶಶಿ ಮಲಯಾಳಂನ ಚಕ್ಕೊ ರಂಧಮ್, 'ಚೋಟಾ ಮುಂಬೈ' ಹಾಗೂ ಇನ್ನು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಕೇರಳದ ಜನಪ್ರಿಯ ಟಿವಿ ನಟಿಯಾಗಿಯೂ ಶರಣ್ಯಾ ಗುರುತಿಸಿಕೊಂಡಿದ್ದರು.
ಶರಣ್ಯಾ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ''ಶರಣ್ಯಾ ಧೈರ್ಯದಿಂದ ರೋಗದ ವಿರುದ್ಧ ಹೋರಾಡಿದರು. ಅವರ ಹೋರಾಟ ಹಲವರಿಗೆ ಸ್ಪೂರ್ತಿ'' ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ನಟಿ ಶರಣ್ಯಾಗೆ ಕ್ಯಾನ್ಸರ್ ಇರುವುದು 2012ರಲ್ಲಿ ಗೊತ್ತಾಗಿತ್ತು. ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅಚಾನಕ್ಕಾಗಿ ಅವರು ಉರುಳಿ ಬಿದ್ದಿದ್ದರು. ಶರಣ್ಯಾಗೆ ಮೆದುಳಿನ ಕ್ಯಾನ್ಸರ್ ಆಗಿತ್ತು. ಆಗಿನಿಂದಲೂ ಹಲವು ಶಸ್ತ್ರಚಿಕಿತ್ಸೆಗಳಿಗೆ ಶರಣ್ಯಾ ಒಳಗಾಗಿದ್ದರು. ಸಾಯುವ ಕೆಲವು ವಾರಗಳ ಹಿಂದೆಯಷ್ಟೆ ತ್ರಿವೇಂಡ್ರಮ್ನ ಆಸ್ಪತ್ರೆಯೊಂದರಲ್ಲಿ ಶರಣ್ಯಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಶರಣ್ಯಾಗೆ ಅಪರೂಪದ ಬ್ರೇನ್ ಟ್ಯೂಮರ್ ಆಗಿತ್ತು. ಶಸ್ತ್ರಚಿಕಿತ್ಸೆ ಮಾಡಿ ಟ್ಯೂಮರ್ ತೆಗೆದರೂ ಮರಳಿ ಬರುತ್ತಲೇ ಇರುತ್ತದೆ ಈ ಟ್ಯೂಮರ್. ಹಾಗಾಗಿಯೇ ಸುಮಾರು 11 ಬಾರಿ ಶಸ್ತ್ರಚಿಕಿತ್ಸೆಗೆ ಶರಣ್ಯಾ ಒಳಗಾಗಿದ್ದರು. ಪ್ರತಿ ಬಾರಿ ಶಸ್ತ್ರಚಿಕಿತ್ಸೆ ಮಾಡಿದಾಗಲೂ ಲಕ್ಷಾಂತರ ಹಣ ಖರ್ಚಾಗುತ್ತಿತ್ತು. ಹಾಗಾಗಿಯೇ ಶರಣ್ಯಾ ಬರಿಗೈ ಆಗಿದ್ದರೂ ಆದರೂ ಸಹ ಅವರ ಗೆಳೆಯರು, ಹಿತೈಶಿಗಳು ಆಕೆಯ ಕೈಹಿಡಿದು ಸಹಾಯ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು.
ಶರಣ್ಯಾ ತಮ್ಮ ಅಭಿನಯದಿಂದ ಸೆಳೆದಷ್ಟೆ ತಮ್ಮ ಹೋರಾಟದ ಮನೋಭಾವದಿಂದಲೂ ಸೆಳೆದಿದ್ದರು. ಹಾಗಾಗಿಯೇ ಶರಣ್ಯಾ ಸಾವಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮರುಗಿದ್ದಾರೆ. ಶರಣ್ಯಾ 2014ರಲ್ಲಿ ಕ್ಸೇವಿಯರ್ ಅನ್ನು ವಿವಾಹವಾಗಿದ್ದರು. ಅವರಿಗೆ ತಾಯಿ ಮತ್ತು ಸಹೋದರ ಇದ್ದರು.