Don't Miss!
- News ಸ್ಟಾರ್ ಪ್ರಚಾರಕರ ಜೊತೆ ವೇದಿಕೆ ಹಂಚಿಕೊಂಡರೆ ವೆಚ್ಚ ಅಭ್ಯರ್ಥಿ ಖಾತೆಗೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಲ್ಲಾಸ ಉತ್ಸಾಹದಲ್ಲಿ ಪುನೀತನಾದ ಗಣೇಶ!
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಉಲ್ಲಾಸ ಉತ್ಸಾಹ' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಧ್ವನಿಸುರುಳಿಯನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾನುವಾರ ಬೆಳಗ್ಗ್ಗೆ ಬೆಂಗಳೂರಿನ ಸಿಟಿ ಇನಿಸ್ಟಿಟ್ಯೂಟ್ ನಲ್ಲಿ ಬಿಡುಗಡೆ ಮಾಡಿದರು. ತೆಲುಗಿನ 'ಉಲ್ಲಾಸಂಗಾ ಉತ್ಸಾಹಂಗ' ಚಿತ್ರರೀಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ಯಶೋಸಾಗರ್ ಮತ್ತು ಸ್ನೇಹಾ ಉಲ್ಲಾಳ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಉಲ್ಲಾಸ ಉತ್ಸಾಹಕ್ಕೆ ಗಣೇಶ್ ಗೆ ಜತೆಯಾಗಿ ಯಾಮಿ ಗೌತಮ್ ಅಭಿನಯಿಸಿರುವುದು ಗೊತ್ತೇ ಇದೆ. ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಪುನೀತ್, ನನ್ನ ಆತ್ಮೀಯ ಗೆಳೆಯರಲ್ಲಿ ಗಣೇಶ್ ಸಹ ಒಬ್ಬ,. ನಿರ್ಮಾಪಕರಾದ ಸೋಮು ಮತ್ತು ತ್ಯಾಗು ನಮ್ಮ ಕುಟುಂಬಕ್ಕೆ ತುಂಬಾ ಹತ್ತಿರದವರು. ಕುಟುಂಬ ಪ್ರಧಾನವಾದ ಈ ಚಿತ್ರದಲ್ಲಿ ಹಾಸ್ಯವೂ ಮಿಳಿತವಾಗಿದೆ. ಈ ಚಿತ್ರ ಖಂಡಿತ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
''ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮುಖ್ಯ ಅತಿಥಿಯ ಯಾರೆಂಬುದನ್ನು ತಿಳಿಸಿರಲಿಲ್ಲ.ಪುನೀತ್ ಎಂದು ಗೊತ್ತಾದ ತಕ್ಷಣಖುಷಿಯಾಯಿತು. ನಮ್ಮ್ಮ ಉತ್ಸಾಹ ಇಮ್ಮಡಿಸಿದೆ'' ಎಂದು ಗಣೇಶ್ ಹೇಳಿದರು. ಚಿತ್ರದಲ್ಲಿನ ''ಕನಸೊಂದು ನಿಜವಾಗುವಂತ ಕನಸಾಗಿದೆ...''ಎಂಬ ಹಾಡು ನನ್ನ ಮೆಚ್ಚಿನ ಹಾಡುಗಳಲ್ಲೊಂದು ಎಂದರು.
ಸಂಗೀತ ನಿರ್ದೇಶಕ ಪ್ರಕಾಶ್ ವಿದೇಶ ಪ್ರವಾಸದಲ್ಲಿರುವ ಕಾರಣ ವೇದಿಕೆ ಮೇಲೆ ಅವರ ತಂದೆ ಆಸೀನರಾಗಿದ್ದರು. ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಪುನೀತ್ ಆಗಮಿಸಿದ್ದಕ್ಕೆ ನಿರ್ಮಾಪಕ ತ್ಯಾಗರಾಜ್ ಧನ್ಯವಾದಗಳನ್ನು ತಿಳಿಸಿದರು. ಧ್ವನಿಸುರುಳಿಯನ್ನು ಹೈದರಾಬಾದ್ ನ ಆದಿತ್ಯಾ ಮ್ಯೂಸಿಕ್ಸ್ ಹೊರತಂದಿದೆ.
ಉಲ್ಲಾಸ ಉತ್ಸಾಹ ಚಿತ್ರಕ್ಕೆ ಜಯಂತ ಕಾಯ್ಕಿಣಿ, ಕವಿರಾಜ್, ರಾಮನಾರಾಯಣ್ ಅವರ ಸಾಹಿತ್ಯ, ಸೋನು ನಿಗಂ, ಕೀರ್ತಿ, ನಾಗೇಶ್ ಅಯ್ಯರ್, ಟಿಪ್ಪು, ರೀಟಾ, ಬಿನ್ನಿ ದಯಾಳ್, ಪ್ರಕಾಶ್ ಕುಮಾರ್, ಅಂದ್ರಿಯಾ, ಪ್ರಸನ್ನ ರಾವ್ ಮತ್ತು ಪ್ರಶಾಂತಿನಿ ಅವರ ಸುಮಧುರ ಕಂಠ ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)