twitter
    For Quick Alerts
    ALLOW NOTIFICATIONS  
    For Daily Alerts

    ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲ

    By Staff
    |

    Purandara Dasa
    ಮಾಡು ಸಿಕ್ಕದಲ್ಲ ಮಾಡಿನ ಗೂಡು ಸಿಕ್ಕದಲ್ಲ ಎಂಬುದು ಬದುಕಿನ ನಶ್ವರತೆಯನ್ನು ಸಾರುವ ದಾಸರ ಪದ. ಪುರಂದರ ದಾಸರು ರಚಿಸಿರುವ ಈ ಕೀರ್ತನೆ ಬದುಕಿನ ಬಗ್ಗೆ ನಾನಾ ಅರ್ಥಗಳನ್ನು ಹೊಮ್ಮಿಸುತ್ತದೆ. ಇತ್ತೀಚೆಗೆ ಟಿ.ಎನ್.ಸೀತಾರಾಮ್ ಅವರು ತಮ್ಮ ಮೆಗಾ ಧಾರಾವಾಹಿ ಶೀರ್ಷಿಕೆಯ ಜತೆಗೆ ದಾಸರ ಪದವನ್ನು ಬಳಸಿಕೊಂಡಿರುವುದು ವಿಶೇಷ.

    ಮಾಡು ಸಿಕ್ಕದಲ್ಲಾ , ಮಾಡಿನ ಗೂಡು ಸಿಕ್ಕದಲ್ಲ
    ಜೋಡು ಹೆಂಡಿರಂಜಿ, ಓಡಿ ಹೋಗುವಾಗ‌
    ಗೋಡೆ ಬಿದ್ದು ಬಯಲಾಯಿತಲ್ಲ

    ಎಚ್ಚರಗೊಳಲಿಲ್ಲಾ , ಮನವೇ ಹುಚ್ಚನಾದೆನಲ್ಲಾ
    ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
    ಕಿಚ್ಚೆದ್ದುಹೋಯಿತಲ್ಲಾ

    ಮುಪ್ಪು ಬಂದಿತಲ್ಲಾ , ಪಾಯಸ ತಪ್ಪದೆ ಉಣಲಿಲ್ಲಾ
    ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ
    ಧೊಪ್ಪಗೆ ಬಿತ್ತಲ್ಲಾ

    ಯೋಗವು ಬಂತಲ್ಲಾ , ಬದುಕು ವಿಭಾಗವಾಯಿತಲ್ಲಾ
    ಭೋಗಿಶಯನ ಶ್ರೀ ಪುರಂದರವಿಠಲನ
    ಆಗ ನೆನೆಯಲಿಲ್ಲಾ

    (ದಟ್ಸ್ ಕನ್ನಡ ಚಿತ್ರವಾರ್ತೆ)

    Tuesday, November 24, 2009, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X