Don't Miss!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರರ ಸಂಭ್ರಮದಲ್ಲಿ 'ಬೆಲ್ ಬಾಟಂ' ವಿಶೇಷ ಹಾಡು ಬಿಡುಗಡೆ
'ಬೆಲ್ ಬಾಟಂ' ಸಿನಿಮಾ ಈ ವರ್ಷ ನೂರು ದಿನ ಪೂರೈಸಿದ ಮೊದಲ ಚಿತ್ರವಾಗಿದೆ. ಈ ಸಂತಸದಲ್ಲಿ ಸಿನಿಮಾದ ಬಹು ಮುಖ್ಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
'ಆದಿ ಜ್ಯೋತಿ ಬನ್ಯೋ..' ಹಾಡು ಇದೀಗ ಯೂ ಟ್ಯೂಬ್ ನಲ್ಲಿ ಹೊರ ಬಂದಿದೆ. ಸಿನಿಮಾದ ಬಹುಮುಖ್ಯವಾಗಿರುವ ಈ ಹಾಡನ್ನು ಯೂಟ್ಯೂಬ್ ನಲ್ಲಿಯೂ ಈಗ ನೋಡಬಹುದಾಗಿದೆ. ಚಿತ್ರದ ದೊಡ್ಡ ತಿರುವು ಈ ಹಾಡಿನಲ್ಲಿ ನಡೆಯಲಿದ್ದು, ಈ ಕಾರಣ ಇದುವರೆಗೆ ಹಾಡಿನ ವಿಡಿಯೋವನ್ನು ಬಿಡುಗಡೆ ಮಾಡಿರಲಿಲ್ಲ.
ಅಂದಹಾಗೆ, ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜನಪದ ಹಾಡನ್ನು ಸಿನಿಮಾಗೆ ಬಳಸಿಕೊಳ್ಳಲಾಗಿದೆ. ಕಡಬಗೆರೆ ಮುನಿರಾಜು ಎಂಬ ಜನಪದ ಗಾಯಕ ಈ ಹಾಡನ್ನು ಹಾಡಿದ್ದಾರೆ.
ಸದ್ಯಕ್ಕೆ, ಯೂಟ್ಯೂಬ್ ನಲ್ಲಿ ಕಡಿಮೆ ಹಿಟ್ಸ್ ಸಿಕ್ಕಿದ್ದರೂ ಹಾಡು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಡಿನ ಅರ್ಥವನ್ನು ಕೊಂಡಾಡಿದ್ದಾರೆ. ರಂಗಭೂಮಿ ಹಾಗೂ ಜನಪದದ ಬಗ್ಗೆ ಆಗಾದ ಪ್ರೀತಿ ಹೊಂದಿರುವ ನಿರ್ದೇಶಕ ಜಯತೀರ್ಥ ಈ ಹಾಡನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದಾರೆ.
'ಬೆಲ್ ಬಾಟಂ' ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಟನೆಯ ಸಿನಿಮಾವಾಗಿದ್ದು, ಮೇ 24 ಕ್ಕೆ ಸರಿಯಾಗಿ ಚಿತ್ರ ನೂರು ದಿನ ಪೂರೈಸಿತ್ತು.