ಶಿವಣ್ಣ ಮೆಚ್ಚಿದ 'ಗೊಂಬೆ ಹೇಳುತೈತೆ' ಕವರ್ ಸಾಂಗ್ ಇದು
'ರಾಜಕುಮಾರ' ಸಿನಿಮಾದ 'ಗೊಂಬೆ ಹೇಳುತೈತೆ...' ಹಾಡು ಕನ್ನಡಿಗರು ಎಂದಿಗೂ ಮರೆಯದಷ್ಟು ಹತ್ತಿರವಾಗಿ ಬಿಟ್ಟಿದೆ. ಈಗಾಗಲೇ ಈ ಹಾಡಿನ ಅನೇಕ ಕವರ್ ಸಾಂಗ್ ಗಳು ಬಂದಿವೆ. ಆದರೆ ಈಗ ಈ ಹಾಡಿನ ಹೊಸ ರೀತಿಯ ಒಂದು ಕವರ್ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ.
ಈ ಕವರ್ ಹಾಡು ನಿನ್ನೆ ರಿಲೀಸ್ ಆಗಿದ್ದು, ಕಾರ್ಯಕ್ರಮದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ನಿರ್ಮಾಪಕಿ ಶೈಲಜಾ ನಾಗ್ ಭಾಗಿಯಾಗಿದ್ದರು. ಜೊತೆಗೆ ಯೂ ಟ್ಯೂಬ್ ನಲ್ಲಿ ಈ ಹಾಡು ಬಿಡುಗಡೆಯಾದ ಒಂದೇ ದಿನದಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ.

ಈ ಕವರ್ ಹಾಡಿನಲ್ಲಿ ಯೋಧರ ತ್ಯಾಗವನ್ನು ಸಾರಿದ್ದಾರೆ. ಯುವ ಕಲಾವಿದರಾದ ನಂದನ್ ಗೌಡ, ಶಶಾಂಕ್ ಶರ್ಮ, ಚೈತ್ರ ಜೆ ಆಚಾರ್ಯ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಿತಿನ್ ಕ್ಯಾಮರಾ ಕೈಚಳಕ ತೋರಿಸಿದ್ದು, ಲೋಹಿತ್ ಜಯಣ್ಣ ನಿರ್ದೇಶನ ಮಾಡಿದ್ದಾರೆ.

ಈ ಹಾಡನ್ನು ಯೋಧರಿಗೆ ಮತ್ತು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಅರ್ಪಿಸಲಾಗಿದೆ. ವಿಶೇಷ ಎಂದರೆ ಹಾಡಿನಲ್ಲಿ ನಟ ಶಿವಣ್ಣ ಕೂಡ ಕಾಣಿಸಿಕೊಂಡಿದ್ದಾರೆ. ಹಾಡಿನ ಮೂಲಕ ದೇಶಪ್ರೇಮವನ್ನು ತೋರಿದ ಈ ಯುವಕರ ತಂಡ ಯೋಧರ ಬಗ್ಗೆ ಅದ್ಭುತವಾಗಿ ಹೇಳಿದ್ದಾರೆ. 'ಗೊಂಬೆ ಹೇಳುತೈತೆ' ಕವರ್ ಸಾಂಗ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.


Click it and Unblock the Notifications











