twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ ಶ್ರೇಯಾ ಆಹಾ ಎಂಥ ಆ ಕ್ಷಣ!

    |

    Singer Shreya Goshal
    ಮುಂಚೂಣಿಯಲ್ಲಿರುವ ಗಾಯಕಿ ಶ್ರೇಯಾ ಘೋಷಾಲ್ ಕರ್ನಾಟಕದಲ್ಲಿ ಗಾನಸುಧೆ ಹರಿಸಲಿದ್ದಾರೆ. ಇದೇ ತಿಂಗಳು 12 ರಂದು (ಮೇ 12, 2012) ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಪ್ರಸಿದ್ಧ ಗಾಯಕಿ ಶ್ರೇಯಾ ಘೋಷಾಲ್ ಸಂಗೀತ ಸಂಜೆ ಏರ್ಪಡಿಸಲಾಗಿದೆ. ಮುಂಗಾರು ಮಳೆ ಚಿತ್ರದ ಹಾಡುಗಳ ಮೂಲಕ ಕನ್ನಡದಲ್ಲಿ ಪ್ರಸಿದ್ಧವಾದ ಶ್ರೇಯಾ, ಇಂದು ಕನ್ನಡ ಚಿತ್ರಗೀತೆಗಳ ಬಹುಪ್ರಸಿದ್ಧ ಗಾಯಕಿ. ಶ್ರೇಯಾ ಅಭಿಮಾನಿಗಳಿಗೆ ಅಂದು ನಿಜವಾಗಿಯೂ ಸಂತಸದ ಕ್ಷಣ.

    ಶ್ರೇಯಾ ಘೋಷಾಲ್ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾದಾಗಿನಿಂದ ಹಾಡಿರುವ ಹಾಡುಗಳ ಕಿರುಪರಿಚಯ ಕೂಡ ಫಿಲ್ಮಿ ಶೈಲಿಯಲ್ಲಿ ಅಲ್ಲಿ ಬಿತ್ತರವಾಗಲಿದೆ. ಶ್ರೇಯಾ ಹಿನ್ನೆಲೆ ಗಾಯಕಿಯಾಗಿ ಪರಿಚಯವಾದಂದಿನಿಂದ ಇಂದಿನವರೆಗಿನ ಸೂಪರ್ ಹಿಟ್ ಹಾಡುಗಳು ಅಂದು ಲೈವ್ ಆಗಿ ಮೂಡಿಬಂದು ಶ್ರೇಯಾ ಅಭಿಮಾನಿಗಳಿಗೆ ಸಂಗೀತ ರಸದೌತಣ ಸಿಗಲಿದೆ.

    ಗಾಯಕಿ ಶ್ರೇಯಾ ಘೋಷಾಲ್ ಕೇವಲ ಹಿಂದಿ ಚಿತ್ರಗೀತೆಗೇ ಸೀಮಿತವಾಗದೇ, ಕನ್ನಡ, ಬೆಂಗಾಲಿ, ಅಸ್ಸಾಂ, ಮಲಯಾಳಂ, ಮರಾಠಿ, ಓರಿಯಾ, ಗುಜರಾತಿ, ತಮಿಳು, ಮತ್ತು ತೆಲುಗು ಹೀಗೆ ಭಾರತದ ಇತರ ಸಾಕಷ್ಟು ಭಾಷೆಗಳ ಚಿತ್ರಗೀತೆಗಳಿಗೆ ಧ್ವನಿಯಾಗಿದ್ದಾರೆ. ಇಂತಹ ಶ್ರೇಯಾ ಘೋಷಾಲ್ ಅವರ ಮೇ 12ರ ಸಂಗೀತ ಸಂಜೆಗೆ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಗಲಿದೆ. ಶ್ರೀಹರಿ ಮತ್ತು ರಾಜಶೇಖರ್ ಬ್ರಿಗಾದೆ ಈ ಸಂಗೀತ ಸಂಜೆಯ ರೂವಾರಿಗಳು. (ಒನ್ ಇಂಡಿಯಾ ಕನ್ನಡ)

    English summary
    Leading Singer Shreya Goshal's Musical Evening One of the prolific singers of this sub continent with melody at the peak Shreya Goshal musical evening is on 12th of May at Bengaluru Palace grounds.
    Tuesday, May 8, 2012, 17:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X