ಕಿರುತೆರೆ ನಟ ಅನಿಲ್ ಕಾಮತ್ ಇನ್ನು ನೆನಪು ಮಾತ್ರ

ಭಾವಗೀತೆಗಳಿಗೆ ಸಂಗೀತ ಸಂಯೋಜಿಸುವ ಕಾಯಕದಿಂದ ಆರಂಭವಾದ ಅವರ ಜೀವನ ನಟನೆಯವರೆಗೂ ಹಬ್ಬಿತ್ತು. ಕಿರುತೆರೆ ಧಾರಾವಾಹಿಗಳಾದ ಮನ್ವಂತರ, ಪುಣ್ಯಕೋಟಿ, ಮಳೆಬಿಲ್ಲು, ಗಾಜಿನ ಗೊಂಬೆ ಹೀಗೆ ಹಲವಾರು ದೈನಂದಿನ ಧಾರಾವಾಹಿಯಲ್ಲಿ ಅನಿಲ್ ಕಾಮತ್ ಅಭಿನಯಿಸಿದ್ದರು. ಪ್ರಮುಖ ಪಾತ್ರ ಹರಿದಾಸ್ ನುಗ್ಗೆಕೋಟೆ ಎಂಬ ಪಾತ್ರದಲ್ಲಿ ಸತತ ನಾಲ್ಕು ವರ್ಷಗಳ ಕಾಲ 'ಮಳೆಬಿಲ್ಲು' ಧಾರಾವಾಹಿಯಲ್ಲಿ ಪಾತ್ರದೊಳಗೆ ಹೊಕ್ಕು ಅಭಿನಯಿಸಿದ್ದರು ಅನಿಲ್ ಕಾಮತ್ ಹೆಗ್ಗಳಿಕೆ.
'ಮಾಯಾಮೃಗ' ಧಾರಾವಾಹಿಯಲ್ಲಿ ಸಣ್ಣಪಾತ್ರದಲ್ಲಿ ನಟಿಸುವ ಮೂಲಕ ನಟನೆಯ ಮಾಧ್ಯಮಕ್ಕೆ ಅಡಿ ಇಟ್ಟಿದ್ದರು. ಸದಾ ಎಲ್ಲರನ್ನೂ ನಗಿಸುತ್ತ ಯಾವಾಗಲೂ ನಗುನಗುತ್ತಾ ಇರಬೇಕು ಎನ್ನುತ್ತಿದ್ದ ಎಲ್ಲರ ನೆಚ್ಚಿನಗೆಳೆಯ ಅನಿಲ್ ಕಾಮತ್ ಇಂದು ಅಗಲಿರುವುದು ನೋವಿನ ಸಂಗತಿ.
ಅನಿಲ್ ಕಾಮತ್ ನಿಧನ ಮನ್ವಂತರ ಮುಕ್ತ ಮಳೆ ಬಿಲ್ಲು ಗಾಜಿನ ಗೊಂಬೆ ಈ ಟಿವಿ ಕನ್ನಡ ಉದಯ ಟಿವಿ anil kamat manvantara punyakoti male billu gajina gombe etv kannada udaya tv


Click it and Unblock the Notifications