Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಅಭಿನಯದ 'ತೀರ್ಥ' ಏನಾಯ್ತು?
ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಸುದೀಪ್ ಚಿತ್ರಗಳು ತೆರೆಕಾಣಲು ಒದ್ದಾಡಿದ ಉದಾಹರಣೆ ಇಲ್ಲ. ಅವರ ಅಭಿನಯದ ಚಿತ್ರಗಳು ನಿರ್ಮಾಪಕರಿಗೆ ಮಿನಿಮಮ್ ಬಂಡವಾಳ ತಂದು ಕೊಡುವುದರಲ್ಲಿ ಅನುಮಾನವಿಲ್ಲ. ಆದರೆ ಮಲಯಾಳಂ ಚಿತ್ರದ ನೆರಳಿನಲ್ಲಿ ಮೂಡಿಬರುತ್ತಿದ್ದ 'ತೀರ್ಥ' ಚಿತ್ರದ ಚಿತ್ರೀಕರಣ ಆರಂಭವಾಗಿ ಹೆಚ್ಚುಕಮ್ಮಿ ಎರಡು ವರ್ಷವಾದರೂ ಚಿತ್ರದ ಬಿಡುಗಡೆ ಬಗ್ಗೆ ನಿರ್ದೇಶಕ ಸಾಧುಕೋಕಿಲ, ಚಿತ್ರತಂಡ ಅಥವಾ ನಿರ್ಮಾಪಕರು ತುಟಿಪಿಟಿಕ್ ಎಂನ್ನುತ್ತಿಲ್ಲ.
ವಿಷ್ಣುವರ್ಧನ್ ಅಭಿನಯಿಸಿ ಸಾಧಾರಣ ಯಶಸ್ಸು ಗಳಿಸಿದ್ದ 'ಏಕದಂತ' ಚಿತ್ರದ ನಿರ್ಮಾಪಕರಾದ ಗೋಪಿ ಮತ್ತು ಶ್ರೀರಾಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ನಂದಿ ಮತ್ತು ನ್ಯೂಸ್ ಚಿತ್ರಗಳನ್ನು ಇವರು ನಿರ್ಮಿಸಿದ್ದರು. ಸರಿಯಾದ ದಾರಿಯಲ್ಲೇ ನಡೆಯುತ್ತಿದ್ದ 'ತೀರ್ಥ' ಚಿತ್ರ ನಿರ್ಮಾಪಕರು ಮತ್ತು ಫೈನಾನ್ಸಿಯರ್ ನಡುವಿನ ಮನಸ್ತಾಪದಿಂದ ಅರ್ಧದಲ್ಲೇ ನಿಂತಿದೆ.
ಏಕದಂತ ಚಿತ್ರಕೂಡಾ ಬಜೆಟ್ ತೊಂದರೆಯಿಂದ ಒಂದು ವರ್ಷದ ನಂತರ ಬಿಡುಗಡೆಗೊಂಡಿತ್ತು.'ತೀರ್ಥ' ಚಿತ್ರದಿಂದ ಸುದೀಪ್ ಇಮೇಜ್ ಗೂ ಕೊಂಚ ಘಾಸಿಯಾಗಿದೆ. ಹಣಕಾಸಿನ ಮುಗ್ಗಟ್ಟು ಏನೇ ಇದ್ದರೂ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರವನ್ನು ಖಂಡಿತ ಬಿಡುಗಡೆ ಮಾಡುತ್ತೇವೆ ಎನ್ನುವ ವಿಶ್ವಾಸದಲ್ಲಿದ್ದಾರೆ ನಿರ್ಮಾಪಕರು. ಚಿತ್ರದ ತಾರಾಗಣದಲ್ಲಿ ಸಲೋನಿ, ಅನಂತನಾಗ್, ರಂಗಾಯಣ ರಘು ಸೇರಿದಂತೆ ಮುಂತಾದವರು ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)