ರಾಜ್ ಸಮಾಧಿ ಬಳಿ ಲಘು ಲಾಠಿ ಪ್ರಹಾರ

ಡಾ.ರಾಜ್ 81ನೇ ಹುಟ್ಟುಹಬ್ಬದ ನಿಮಿತ್ತ ಅನ್ನದಾನ, ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಮಜ್ಜಿಗೆ ಮತ್ತು ಪಾನಕಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಅನ್ನದಾನ ಸ್ವೀಕರಿಸುತ್ತಿದ್ದ ಸಾಲಿನಲ್ಲಿ ಇದ್ದಕ್ಕಿದ್ದಂತೆ ನೂಕುನುಗ್ಗಲು ಉಂಟಾಯಿತು. ವೃದ್ಧರು, ಮಕ್ಕಳು ಮತ್ತು ಮಹಿಳೆಯರು ನೂಕು ನುಗ್ಗುಲಿನಲ್ಲಿ ಸಿಕ್ಕಿಕೊಂಡು ಒದ್ದಾಡುವಂತಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಗೆ ಬುದ್ಧಿ ಹೇಳಲೇ ಬೇಕಾಯಿತು.
ಅಸಮರ್ಪಕ ವ್ಯವಸ್ಥೆ ಮತ್ತು ಪರಿಸ್ಥಿತಿಯನ್ನು ಸಿಬ್ಬಂದಿ ವರ್ಗ, ಭದ್ರತಾ ಸಿಬ್ಬಂದಿ ನಿಯಂತ್ರಿಸಲು ಸಾಧ್ಯವಾಗದೇ ಇದ್ದದ್ದೇ ನೂಕುನುಗ್ಗಲಿಗೆ ಕಾರಣವಾಯಿತು. ಪೊಲೀಸರ ಸಂಖ್ಯೆ ಸಹ ಕಡಿಮೆ ಪ್ರಮಾಣದಲ್ಲಿತ್ತು. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಶಾಂತವಾಯಿತು. ಯಾವುದೇ ದುರ್ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಪೂರಕ ಓದಿಗೆ:
ಕವನ ನಮನ: ನೆನಪಿನ೦ಗಳದಲ್ಲಿ ಡಾ|ರಾಜ್
ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
kannada movies ಪುನೀತ್ ರಾಜ್ ಕುಮಾರ್ lathi charge ಡಾರಾಜ್ ಕುಮಾರ್ drrajkumar ಕಂಠೀರವ ಸ್ಟುಡಿಯೋ kanteerava studios drrajkumar memorial drraj birthday ಡಾರಾಜ್ ಕುಮಾರ್ ಸ್ಮಾರಕ ಡಾರಾಜ್ ಹುಟ್ಟುಹಬ್ಬ


Click it and Unblock the Notifications