ರೈತಕುಟುಂಬದ ಬರಗೂರು ಹೊಸ ಚಿತ್ರ ಭೂಮಿತಾಯಿ

"ಈ ಭೂಮಿತಾಯಿ ಚಿತ್ರವು ರೈತ ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡ ಹಳ್ಳಿಯ ಕಥಾವಸ್ತು ಒಳಗೊಂಡಿದೆ. ಬಡರೈತನ ಸಂಕಷ್ಟಗಳನ್ನು ಚಿತ್ರಿಸುತ್ತಲೇ ಮನುಷ್ಯ ಸಂಬಂಧಗಳ ತೀವ್ರತೆ, ಹಳ್ಳಿಯ ನ್ಯಾಯವ್ಯವಸ್ಥೆಯ ವಿಪರ್ಯಾಸಗಳನ್ನು ಒಳಗೊಂಡಿದೆ. ಈ ಮೂಲಕ ಅಧಿಕಾರ ಕೇಂದ್ರದ ವೈರುಧ್ಯಗಳನ್ನು, ವ್ಯವಸ್ಥೆಯ ಒಳತೋಟಿಗಳನ್ನು ಅನಾವರಣಗೊಳಿಸಿದೆ. ಆದರೂ ರೈತ ಕುಟಂಬವೇ ಕೇಂದ್ರವಾಗಿದೆ" ಎಂದಿದ್ದಾರೆ ಡಾ. ಬರಗೂರು.
" ಇಲ್ಲಿ ರೈತ ಸಾಲ ಮತ್ತು ಸಂಕಷ್ಟಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅವರ ಮಗಳು ಆತ್ಮಹತ್ಯೆ ಮತ್ತು ಮಗ ಹತ್ಯೆಗೀಡಾದರೂ ಹೆಂಡತಿಯ ಆತ್ಮವಿಶ್ವಾಸದ ಮಾತುಗಳಿಂದ ಎಲ್ಲ ನೋವನ್ನು ಎದುರಿಸಿ ನಿಲ್ಲುತ್ತಾರೆ. ಹೀಗೆ ಆತ್ಮಹತ್ಯೆಯ ಬದಲು ಆತ್ಮವಿಶ್ವಾಸದ ಪ್ರತೀಕವಾಗಿದೆ ಈ ಭೂಮಿತಾಯಿ ಚಿತ್ರ" ಎಂದೂ ಕೂಡ ಹೇಳಿದ್ದಾರೆ.
"ಈ ಚಿತ್ರದಲ್ಲಿ ಸಾಕಷ್ಟು ಪ್ರಬಲವಾದ ಸಂಗತಿಯನ್ನು ಅಷ್ಟೇ ಪ್ರಬಲವಾದ ಪಾತ್ರಗಳ ಮೂಲಕ ನಿರೂಪಿಸಿದ್ದಾರೆ ಅನುಭವಿ ನಿರ್ದೇಶಕರಾದ ರಾಮಚಂದ್ರಪ್ಪನವರು" ಎಂಬ ಅಭಿಪ್ರಾಯ ಭೂಮಿತಾಯಿ ಚಿತ್ರದ ನಾಯಕ ಕಿಶೋರ್ ರಿಂದ ಬಂತು.
ಇನ್ನು ಇದರ ಸಿನಿಮಾ ನಿರೂಪಣೆಯಲ್ಲಿ ಸ್ಲೋಮೋಷನ್ ಹಾಗೂ ನೇರ ನಿರೂಪಣೆಯ ತಂತ್ರ ಇಲ್ಲಿ ಅನುಸರಿಸಲಾಗಿದೆ. ಇದರ ಚಿತ್ರೀಕರಣದ ವೇಳೆ 'ಪ್ರಾಣಿ ಕ್ಷೇಮಾಭಿವೃದ್ಧಿ ಸಂಘ'ದಿಂದ ತಮಗಾದ ತೊಂದರೆಯಿಂದ ತಾವು ಅನುಭವಿಸಿದ ನೋವನ್ನು ಕೂಡ ಹೇಳಿಕೊಂಡರು ಪ್ರೊ. ಬರಗೂರು.


Click it and Unblock the Notifications











