twitter
    For Quick Alerts
    ALLOW NOTIFICATIONS  
    For Daily Alerts

    ನಂಜನಗೂಡಿನಿಂದ ಬೆಂಗಳೂರಿಗೆ ನಂಜುಂಡ

    By Staff
    |

    ತನ್ನ ಹೆಂಡತಿ ಸುಂದರಿಯಾಗಿರುವುದೇ ನಾಯಕ ನಂಜುಂಡನ ಅನುಮಾನಕ್ಕೆ ಮೂಲ ಕಾರಣ. ಆಕೆಯನ್ನು ಯಾರು ಮಾತನಾಡಿಸಿದರೂ ಅನುಮಾನಿಸಿ, ಗೊಂದಲ ಉಂಟುಮಾಡಿಕೊಳ್ಳುತ್ತಾನೆ. ಉಳಿದವರ ಕಣ್ಣಲ್ಲಿ ಅಪಹಾಸ್ಯಕ್ಕೀಡಾಗುತ್ತಾನೆ. ಮಾನಸಿಕ ರೋಗಿಯೊಬ್ಬನ ಈ ಕಥೆಯನ್ನು ಹಾಸ್ಯದ ಟಚ್ ಕೊಟ್ಟು ನಿರ್ದೇಶಕ ಶ್ರೀನಿವಾಸಪ್ರಸಾದ್ ತಮ್ಮ ನಿರ್ದೇಶನದ 'ನಂಜನಗೂಡು ನಂಜುಂಡ' ಚಿತ್ರದಲ್ಲಿ ರಸವತ್ತಾಗಿ ನಿರೂಪಿಸುತ್ತಿದ್ದಾರೆ.

    ಮಲಯಾಳಂನ 'ಒಡಕ್ಕು ನೌಕಿ ಎಂದಿರಂ' ಚಿತ್ರದ ಕಥೆ ಈ ಚಿತ್ರಕ್ಕೆ ಸ್ಪೂರ್ಥಿ. ಮೈಸೂರು ಸುತ್ತಮುತ್ತ 30 ದಿನಗಳ ಕಾಲ ಮಾತಿನ ಭಾಗ ಚಿತ್ರೀಕರಿಸಿರುವ ಚಿತ್ರ ತಂಡ ಕಳೆದ ವಾರ ನಂಜನಗೂಡಿನಲ್ಲಿ ನಾಯಕನ ಪರಿಚಯದ ಹಾಡನ್ನು ಚಿತ್ರೀಕರಿಸಿಕೊಂಡು ಬೆಂಗಳೂರಿಗೆ ವಾಪಸ್ಸಾಗಿದೆ. ನಾಲ್ಕುದಿನಗಳ ಕಾಲ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ನಾಯಕ ರವಿಶಂಕರ್, ಆನೆಯ ಮೇಲೆ ಅಂಬಾರಿಯಲ್ಲಿ ಕುಳಿತು ಅಭಿನಯಿಸಿದ್ದಾರೆ.

    ಜೊತೆಗೆ ನಾಯಕಿ ಹಂಸಿಣಿ ಹಾಗೂ 75 ಜನ ನೃತ್ಯ ಕಲಾವಿದರು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಚಿತ್ರದ ಇನ್ನೊಂದು ಹಾಡಿಗೆ ಸೆಟ್ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ನಾಯಕ, ನಾಯಕಿಯ ಡ್ಯುಯೆಟ್ ಹಾಡನ್ನು ಸದ್ಯದಲ್ಲೇ ಚಿತ್ರೀಕರಿಸಲಾಗುವುದು.

    ಉದ್ಯಮಿ ಸುಭಾಷ್ ಕೂರ್ಗ್ ನಿರ್ಮಿಸುತ್ತಿರುವ ಈ ಚಿತ್ರದ ಆರು ಹಾಡುಗಳಿಗೆ ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್‌ರ ಛಾಯಾಗ್ರಹಣ ಇರುವ ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಸಿಲ್ಲಿಲಲ್ಲಿ ಖ್ಯಾತಿಯ ರವಿಶಂಕರ್, ನವನಾಯಕಿ ಹಂಸಿಣಿ, ಕೆ.ಎಸ್.ಎಲ್. ಸ್ವಾಮಿ, ನಾಗರಾಜ್ ಕೋಟೆ ಇದ್ದಾರೆ.

    Tuesday, January 5, 2010, 14:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X