Don't Miss!
- News ಸ್ಟಾರ್ ಪ್ರಚಾರಕರ ಜೊತೆ ವೇದಿಕೆ ಹಂಚಿಕೊಂಡರೆ ವೆಚ್ಚ ಅಭ್ಯರ್ಥಿ ಖಾತೆಗೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶನ ಹೊಸ ಉಲ್ಲಾಸ ನವ ಉತ್ಸಾಹ!
ಕಳೆದ ವರ್ಷದ ಕೊನೇ ಭಾಗದಲ್ಲಿ ಬಿಡುಗಡೆಗೊಂಡು ಇಡೀ ಆಂಧ್ರದಾದ್ಯಂತ ಮಿಂಚಿನ ಸಂಚಲನವನ್ನೇ ಸೃಷ್ಟಿಸಿ ಇಡೀ ದಕ್ಷಿಣ ಭಾರತದ ಸಿನಿಮಾ ಮಂದಿಯನ್ನು ಆಕರ್ಷಿಸಿದ ತೆಲುಗಿನ ಉಲ್ಲಾಸಂಗಾ ಉತ್ಸಾಹಂಗಾ ಚಿತ್ರ ಈಗ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ತೆಲುಗಿನ ಮೂಲ ಚಿತ್ರವನ್ನು ಕೂಡ ನಮ್ಮ ಕನ್ನಡದ ಹಳೆಯ ನಿರ್ಮಾಪಕ ಸೋಮು ಅವರೇ ನಿರ್ಮಿಸಿದ್ದರು. ಅಷ್ಟೇ ಅಲ್ಲದೆ ಅವರ ಮಗ ಯಶೋ ಸಾಗರ್ ನಾಯಕನಟನಾಗಿ ಕಾಣಿಸಿಕೊಂಡಿದ್ದ. ಈ ಯಶೋ ಸಾಗರ್ ಕನ್ನಡದ ಹುಡುಗನೇ ಆಗಿದ್ದರೂ ಕನ್ನಡ ಅವತರಿಣಿಕೆಯಲ್ಲಿ ಗಣೇಶ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ.
ಓಂಪ್ರಕಾಶ್ ರಾವ್, ನಾಗಣ್ಣ ಮುಂತಾದ ನಿರ್ದೇಶಕರ ಕೈಕೆಳಗೆ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ದುಡಿದ ದೇವರಾಜ್ ಪಾಲನ್ ಈ ಚಿತ್ರವನ್ನು ನಿದೇಶಿಸುತ್ತಿದ್ದಾರೆ. ಸುಮಾರು 48 ಚಿತ್ರಗಳಿಗೆ ಅಸೋಸಿಯೇಟ್ ಆಗಿದ್ದ ದೇವರಾಜ್ ಅವರ ಅನುಭವಕ್ಕೆ ನಿರ್ಮಾಪಕ ಸೋಮು ಮತ್ತು ಅವರ ಸಹೋದರ ತ್ಯಾಗು ಮಣೆ ಹಾಕಿದ್ದಾರೆ.
ಇನ್ನು ರವಿಚಂದ್ರನ್ ಗರಡಿಯಲ್ಲಿ ಪಳಗಿಬಂದ ಸೀತಾರಾಂ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಯಾಮಿ ಗೌತಂ ಆಯ್ಕೆಯಾಗಿದ್ದಾರೆ. ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ತಂಡಕ್ಕೆ ರಿಮೇಕ್ ಚಿತ್ರವಾದರೂ ಮುಂದೆ ಉಲ್ಲಾಸ ಮೂಡಲಿ ಎಂದು ಹಾರೈಸೋಣ.
(ದಟ್ಸ್
ಕನ್ನಡಸಿನಿ
ವಾರ್ತೆ)
ಮತ್ತೊಂದು
ರಿಮೇಕ್
ಚಿತ್ರದಲ್ಲಿ
ಗೋಲ್ಡನ್
ಸ್ಟಾರ್
ಯಶಸ್ಸಿನ
ಸಾಗರದಲ್ಲಿ
ಪಲಾಯನವಾದ
ಪ್ರತಿಭೆ
ಗಣೇಶ್
ರಿಮೇಕ್
ಚಿತ್ರಕ್ಕೆ
ಆಮದು
ಬೆಡಗಿ
ಯಾಮಿ