twitter
    For Quick Alerts
    ALLOW NOTIFICATIONS  
    For Daily Alerts

    ನಟ ದರ್ಶನ್ ಸಹ ಕೈದಿಗಳಿಂದ ಕಣ್ಣೀರಧಾರೆ

    By Super
    |

    Actor Darshan jail mates shed tears
    ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಂದು (ಶುಕ್ರವಾರ, ಅ.7) ಮೌನ ಮುಸುಕಿದ ವಾತಾವರಣ. ಕಾರಣ ತಮ್ಮ ಸಹ ಕೈದಿಯೊಬ್ಬನಿಗೆ ಬಿಡುಗಡೆ ಭಾಗ್ಯ ಸಿಕ್ಕಿರುವುದು. ಇಷ್ಟು ದಿನ ತಮ್ಮ ಜೊತೆಯಲ್ಲೇ ಇದ್ದು ತಮ್ಮ ಮನಸ್ಸಂತೋಷಪಡಿಸಿದ್ದ ಸಹ ಕೈದಿಗೆ ಇಂದು ಬಿಡುಗಡೆ ಭಾಗ್ಯ ಲಭಿಸಿರುವುದ್ದು ಅವರ ದುಃಖದ ಕಟ್ಟೆಯೊಡೆಯಲು ಕಾರಣವಾಗಿತ್ತು.

    ಅವರು ಬೇರೆ ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಹೌದು ದರ್ಶನ್ ಬಿಡುಗಡೆ ಅವರ ಅಪಾರ ಅಭಿಮಾನಿ ಬಳಗಕ್ಕೆ ಸಂತಸ ತಂದಿದ್ದರೆ ಸಹ ಕೈದಿಗಳಿಗೆ ಭರಿಸಲಾಗದ ದುಃಖಕ್ಕೆ ಕಾರಣವಾಗಿದೆ. ಹಾಗೆಯೇ ದರ್ಶನ್ ಜೈಲ್ ಮೇಟ್ ಕಟ್ಟಾ ಜಗದೀಶ್ ಅವರಿಗೂ ಒಂಥರಾ ಮನಸ್ಸಿಗೆ ಬಾಧೆಯಾಗಿದೆಯಂತೆ.

    ಶ್ರೀಕೃಷ್ಣ ಪರಮಾತ್ಮನ ಜನ್ಮಸ್ಥಳದಿಂದ ತಮಗೆ ಯಾವಾಗ ಬಿಡುಗಡೆ ಭಾಗ್ಯ ಲಭಿಸುತ್ತದೋ ಎಂಬ ನೋವು ಒಂದು ಕಡೆಯಾದರೆ, ತಮ್ಮ ಜೈಲ್ ಮೇಟ್ ತಮ್ಮನ್ನು ಬಿಟ್ಟುಹೋಗುತ್ತಿದ್ದಾರಲ್ಲಾ ಎಂಬ ಯಾತನೆ ಮತ್ತೊಂದು ಕಡೆ. ಒಟ್ಟಿನಲ್ಲಿ ಜೂ.ಕಟ್ಟಾ ಅವರದು ಮಿಕ್ಸ್‌ಡ್ ರಿಯಾಕ್ಷನ್.

    ಇನ್ನು ಸಹ ಕೈದಿಗಳು ದರ್ಶನ್‌ರೊಂದಿಗಿನ ಒಡನಾಡ ನೆನೆದು ಕಣ್ಣೀರಾಗಿದ್ದಾರೆ. ದರ್ಶನ್ ನಮ್ಮ ಜೊತೆ ಬೆಳಗ್ಗೆ ವಾಕಿಂಗ್ ಬರುತ್ತಿದ್ದರು. ಹೂಗಿಡಗಳಿಗೆ ನೀರೆಯುತ್ತಿದ್ದರು. ನಮ್ಮ ಹೆಗಲೆ ಮೇಲೆ ಕೈಹಾಕಿಕೊಂಡು ಮಾತನಾಡಿಸುತ್ತಿದ್ದರು. ಕೆಲವೇ ದಿನಗಳಲ್ಲಿ ಅವರು ನಮಗೆಲ್ಲಾ ಆಪ್ತರಾಗಿಬಿಟ್ಟರು.

    ಈಗ ಅವರು ನಮ್ಮನ್ನೆಲ್ಲಾ ಬಿಟ್ಟುಹೋಗುತ್ತಿರುವುದು ನಿಜಕ್ಕೂ ದುಃಖವಾಗುತ್ತಿದೆ. ಅವರಿಗೆ ಜೈಲಿನಿಂದ ಬಿಡುಗಡೆ ಭಾಗ್ಯ ಲಭಿಸಿರುವುದು ಸಂತಸ ವಿಚಾರವಾದರೂ ಅವರ ಆತ್ಮೀಯತೆ ನಮ್ಮನ್ನು ಕಾಡುತ್ತಿದೆ ಎಂಬ ಅಭಿಪ್ರಾಯ ಜೈಲ್ ಮೇಟ್‌ಗಳಲ್ಲಿ ವ್ಯಕ್ತವಾಗಿದೆ. (ಒನ್‍ಇಂಡಿಯಾ ಕನ್ನಡ)

    English summary
    Kannada actor Darshan jail mates shed tears after Karnataka High Court grants conditional bail to the actor, who was under judicial custody for allegedly assaulting and threatening to kill his wife Vijayalakshmi.
    Thursday, March 10, 2016, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X