ಈ ವಾರ ತೆರೆಗೆ ಒಲವೇ ಜೀವನ ಲೆಕ್ಕಾಚಾರ

ನೈಜ ಘಟನೆ ಆಧಾರಿಸಿದ ಈ ಚಿತ್ರಕ್ಕೆ ನಿರ್ದೇಶಕರು ಪತ್ರಕರ್ತ ಜೋಗಿ ಅವರೊಡಗೂಡಿ ಚಿತ್ರಕಥೆ ಬರೆದಿದ್ದಾರೆ. ನಿರ್ದೇಶನಕ್ಕೆ ಸೀಮಿತರಾಗದ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರಕ್ಕೆ ನಾಲ್ಕು ಅರ್ಥಗರ್ಭಿತ ಗೀತೆಗಳನ್ನು ರಚಿಸಿದ್ದಾರೆ. ಪ್ರಸಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ ಈ ವಿನೂತನ ಕಥಾನಕಕ್ಕೆ ರಾಗ ಸಂಯೋಜಿಸಿದ್ದಾರೆ. ಧ್ವನಿಸುರುಳಿಯ ಮೂಲಕ ಈಗಾಗಲೇ ಕೇಳುಗರಿಗೆ ತಲುಪಿರುವ ಚಿತ್ರದ ಗೀತೆಗಳ ಬಗ್ಗೆ ಉತ್ತಮ ಮಾತುಗಳು ಕೇಳಿ ಬರುತ್ತಿದೆ.
ನಿಸರ್ಗ ದೇವತೆಯ ತವರುಮನೆಯಂತಿರುವ ಸಕಲೇಶಪುರ, ಕರಾವಳಿ ಪ್ರದೇಶ ಮತ್ತು ಬೆಂಗಳೂರು ಸೇರಿದಂತೆ ಹಲವು ಕಡೆ 'ಒಲವೇ ಜೀವನ ಲೆಕ್ಕಾಚಾರದ ಚಿತ್ರೀಕರಣ ನಡೆದಿದೆ. ಅಜಯ್ ವಿನ್ಸೆಂಟ್ ಛಾಯಾಗ್ರಹಣ, ಶಿವು ಸಂಕಲನವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಾಧಿಕಾ ಪಂಡಿತ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಡೈಸಿ ಬೋಪಣ್ಣ, ರಂಗಾಯಣ ರಘು, ಮಂಡ್ಯ ರಮೇಶ್ ಮುಂತಾದದವರು ಚಿತ್ರದ ತಾರಾಬಳಗದಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
kannada movies ಡೈಸಿ ಬೋಪಣ್ಣ daisy bopanna ಕೆ ಮಂಜು radhika pandit ಶ್ರೀನಗರ ಕಿಟ್ಟಿ srinagara kitty ಒಲವೇ ಜೀವನ ಲೆಕ್ಕಾಚಾರ olave jeevana lekkachara ನಾಗತಿಹಳ್ಳಿ ಚಂದ್ರಶೇಖರ್ nagathihalli chandrashekar


Click it and Unblock the Notifications











