Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೊಂದಲದ ಗೂಡಾದ ಚಂದ್ರಮುಖಿ ನಯನತಾರಾ
ನಟಿ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಗೊತ್ತೆ ಇದೆ. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ತಮ್ಮ ಅಭಿನಯದ ಕೊನೆಯ ಚಿತ್ರ ಎಂದು ಸ್ವತಃ ನಯನಿ ಘೋಷಿಸಿದ್ದರು. ಡ್ಯಾನ್ಸ್ ರಾಜ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಉದ್ದೇಶದಿಂದ ನಯನತಾರಾ ಈ ನಿರ್ಧಾರಕ್ಕೆ ಬಂದಿದ್ದರು.
'ಶ್ರೀರಾಮರಾಜ್ಯಂ' ಚಿತ್ರದ ಬಳಿಕ ಆಕೆಗೆ ತೆಲುಗು, ತಮಿಳಿನಿಂದ ಸಾಲು ಸಾಲು ಆಫರ್ಗಳು ಬರುತ್ತಿವೆ. ಇತ್ತೀಚೆಗೆ 'ಶ್ರೀರಾಮರಾಜ್ಯಂ' ಚಿತ್ರದ 50 ಡೇಸ್ ಕಾರ್ಯಕ್ರಮ ನಡೆಯಿತು. ನಯನತಾರಾ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಯನತಾರಾಗೆ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಕಿವಿಮಾತು ಹೇಳಿದರು.
"ಇದೇ ಕೊನೆಯ ಚಿತ್ರ ಎಂದು ಕೊಳ್ಳಬೇಡ. ಮದುವೆಯಾದ ಬಳಿಕವೂ ಅಭಿನಯಿಸಬಹುದು" ಎಂದಿದ್ದಾರೆ ದಾಸರಿ. ಅವರು ಹಾಗೆ ಹೇಳಿದ್ದೇ ತಡ ತಮಿಳಿನ ವಿಜಯ್, ವೆಂಕಟ್ ಹಾಗೂ ಲಿಂಗುಸ್ವಾಮಿ ಎಂಬ ನಿರ್ಮಾಪಕರು ನಯನತಾರಾ ಮುಂದೆ ಕಾಲ್ಶೀಟ್ ಹಿಡಿದಿದ್ದಾರೆ. ಆದರೆ ನಯನತಾರಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಬಣ್ಣ ಹಚ್ಚು ಬೇಕೆ ಬೇಡವೆ ಎಂಬ ಗೊಂದಲದಲ್ಲಿ ನಯನತಾರಾ ಇದ್ದಾರೆ. (ಏಜೆನ್ಸೀಸ್)