Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರದಲ್ಲಿ ನವರಸ ನಾಯಕನಿಗಾದ ಕಹಿ ಅನುಭವ
ನವರಸ ನಾಯಕ ಜಗ್ಗೇಶ್ ಅವರಿಗೆ ಆಡಿಯೋ ಕಂಪನಿಯೊಂದು ಕಿವಿ ಮೇಲೆ ಹೂವಿಟ್ಟ ಘಟನೆಯಿದು.ಅವರಿಗೆ ಇತ್ತೀಚೆಗೆ ಗಾಂಧಿನಗರದಲ್ಲೊಂದು ಕಹಿ ಅನುಭವ ಎದುರಾಯಿತಂತೆ. ಈ ಘಟನೆಯಿಂದ ಅವರ ಮನಸಿಗೆ ತೀವ್ರ ನೋವೂ ಆಗಿದೆಯಂತೆ. ಈ ನೋವನ್ನು ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ತೋಡಿಕೊಂಡರು. ಆಡಿಯೋ ಕಂಪನಿಗಳು ಮಾಡುತ್ತಿರುವ ಹಗಲು ದರೋಡೆ ಬಗ್ಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಹೊಚ್ಚ ಹೊಸ ಚಿತ್ರ 'ಡಬಲ್ ಡೆಕ್ಕರ್' ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಜಗ್ಗೇಶ್ ಆಡಿಯೋ ಕಂಪನಿಯೊಂದನ್ನು ಎಕ್ಕಾಮಕ್ಕಾ ತರಾಟೆಗೆ ತೆಗೆದುಕೊಂಡರು.
ಆರಂಭದಲ್ಲಿ ಪ್ರತಿಷ್ಠಿತ ಆಡಿಯೋ ಕಂಪನಿಯೊಂದರ ಮಾಲೀಕರು 'ಡಬಲ್ ಡೆಕ್ಕರ್' ಆಡಿಯೋ ರೈಟ್ಸ್ ತೆಗೆದುಕೊಳ್ಳುವುದಾಗಿ ಮಾತು ಕೊಟ್ಟಿದ್ದರು. ಕೊನೆಕೊನೆಗೆ ಈ ಆಡಿಯೋ ರೈಟ್ಸ್ನಲ್ಲಿ ಏನೂ ಗಿಟ್ಟುವುದಿಲ್ಲ ಎಂದು ಸಬೂಬು ನೀಡಿ ಕೈ ಎತ್ತಿದರು. ಕಡೆಗೆ ಅಕ್ಷಯ್ ಆಡಿಯೋ ಕಂಪನಿ ಮಾಲೀಕ ಟಿ ಪಿ ಸಿದ್ಧರಾಜು (ಲೂಸ್ ಮಾದ ಅಲಿಯಾಸ್ ಯೋಗೇಶ್ ಅವರ ತಂದೆ) ನಮ್ಮ ಕೈಹಿಡಿದರು ಎಂದು ಜಗ್ಗೇಶ್ ವಿವರ ನೀಡಿದರು.
ಈ ಆಡಿಯೋ ಕಂಪನಿಗಳು ಇನ್ನೇನು ಮಿಕ ಬಲೆಗೆ ಬೀಳುತ್ತದೆ ಎಂದು ಗೊತ್ತಾದ ಕೂಡಲೆ ಆಡಿಯೋ ರೈಟ್ಸ್ ತೆಗೆದುಕೊಳ್ಳಲು ಹಿಂಜರಿಯುವ ನಾಟಕ ಆಡುತ್ತವೆ. ನಿರ್ಮಾಪಕರು ಆಡಿಯೋ ರೈಟ್ಸ್ನಿಂದ ಸಿಕ್ಕಷ್ಟು ಸಿಗಲಿ ಎಂದು ಕಂಪನಿ ಹೇಳುವ ರೇಟಿಗೆ ಮಾರಲಿ ಎಂಬುದು ಆಡಿಯೋ ಕಂಪನಿಗಳ ತಂತ್ರ. ಕಡಿಮೆ ಬೆಲೆಗೆ ಕೊಂಡ ಆಡಿಯೋ ರೈಟ್ಸ್ ಮೂಲಕ ಕಂಪನಿಗಳು ಅಪಾರ ಲಾಭ ಗಳಿಸುತ್ತವೆ. ಎಫ್ ಎಂ ರೇಡಿಯೋಗಳಿಂದ, ರಿಂಗ್ ಟೋನ್ಸ್ ರೂಪದಲ್ಲಿ ಆಡಿಯೋ ಕಂಪನಿಗಳಿಗೆ ದುಡ್ಡು ಹರಿದು ಬರುತ್ತದೆ. ಆದರೆ ನಿರ್ಮಾಪಕನಿಗೆ ಮಾತ್ರ ಉಂಡೆ ನಾಮ ಹಾಕುತ್ತಾರೆ ಎಂದು ಜಗ್ಗೇಶ್ ಹೆಸರು ಹೇಳಲು ಇಚ್ಛಿಸದ ಆಡಿಯೋ ಕಂಪನಿಗಳ ಧೋರಣೆಯನ್ನು ಖಂಡಿಸಿದರು.
ಒಟ್ಟಿನಲ್ಲಿ ಈ ಆಡಿಯೋ ಕಂಪನಿಗಳು ನಿರ್ಮಾಪಕರ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರ ಮಾಡಿಕೊಳ್ಳುತ್ತವೆ. ಆದರೆ ಅನ್ನಹಾಕಿದ ದಣಿಗೆ ಮಾತ್ರ ಕನ್ನ ಹಾಕುವ ಕೆಲಸ ಮಾಡುತ್ತವೆ. ತಾವು ಮುಂಬರುವ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾದರೆ ಆಡಿಯೋ ಕಂಪನಿಗಳ ಸೊಕ್ಕು ಮುರಿಯುವುದಾಗಿ ಜಗ್ಗೇಶ್ ಪ್ರತಿಜ್ಞೆ ಮಾಡಿದರು.